ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರ್ಕಾರಿ ಬಸ್ ನಲ್ಲಿ ನಕಲಿ ಕಂಡಕ್ಟರ್ ಇದ್ದಾರೆ ಎಚ್ಚರ…

ಯಾದಗಿರಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಒಂದರಲ್ಲಿ ಕಂಡಕ್ಟರ್ ಕಮ್ ಡ್ರೈವರ್ ಮಾಡಿದ ಎಡವಟ್ಟು…
ಯಾದಗಿರಿ ಯಿಂದ ಶಹಾಪುರ ಹೋಗುವ ನಾನ್ ಸ್ಟಾಪ್ ಬಸ್ಸಿನಲ್ಲಿ ನಡೆದ ಘಟನೆ ಬಸ್ ಸಂಖ್ಯೆ ಕೆ.ಎ 33, ಎಫ಼್ 0577 ಮಧ್ಯಾಹ್ನ ಸುಮಾರು 2:30 ಕ್ಕೆ ಹೊರಟ ಬಸ್ ನ ಕಂಡಕ್ಟರ್ ಕಮ್ ಡ್ರೈವರ್ ಜನರಿಗೆ ಟಿಕೆಟ್ ಕೊಡಬೇಕಿತ್ತು ಕಂಡಕ್ಟರ್ ಕಮ್ ಡ್ರೈವರ್ ಮಾಡಬೇಕಾದ ಕೆಲಸ ತನ್ನ ಗೆಳೆಯನಿಗೆ ಟಿಕೆಟ್ ತೆಗೆದುಕೊಳ್ಳುಲು ಹೇಳುತ್ತಾನೆ.ಅವನ ಗೆಳೆಯನ ಮೈ ಮೇಲೆ ಡ್ರೆಸ್ ಕೋಡ್ ಖಾಕಿ ಶರ್ಟ್ ಪ್ಯಾಂಟ್ ಕೂಡಾ ಹಾಕಿಲ್ಲ ಅಂತ ವ್ಯಕ್ತಿ ಟಿಕೆಟ್ ನೀಡಿದ್ದು ಅಲ್ಲದೆ ಈ ನಕಲಿ ಕಂಡಕ್ಟರ್ ಪ್ರಯಾಣಿಕರ ಜೊತೆಗೆ ಅಸಭ್ಯದಿಂದ ನಡೆದುಕೊಂಡಿರುತ್ತಾನೆ.
ಬಸ್ ನಲ್ಲಿ ಕುಳಿತ ಪ್ರಯಾಣಿಕರು ನೀನು ಯಾರು ನೀನು ಯಾಕೆ ನಮಗೆ ಟಿಕೆಟ್ ನೀಡತ್ತಾ ಇದ್ದಿಯಾ ಅಂತ ಕೇಳಿದರೆ ಉಡಾಫೆಯಾಗಿ ಪ್ರತಿಕ್ರಿಯೆ ನೀಡಿದ್ದೂ ಅಲ್ಲದೆ ಈಗ ನಿಮಗೆ ಟಿಕೆಟ್ ಬೇಕಾ ಬೇಡಾ ತಾನೇ ಅಷ್ಟೇ ತೊಗೊಳ್ಳಿ ಎಂದು ಪ್ರಯಾಣಿಕರಿಗೆ ಹೆದರಿಸುತ್ತಾನೆ.ಶಕ್ತಿ ಯೋಜನೆ ಅಡಿಯಲ್ಲಿ ಇದ್ದ ಮಹಿಳೆಯರಿಗೆ ಮನಬಂದಂತೆ ಮಾತನಾಡಿ ಹೆದರಿಸಿ ಮತ್ತು ಪ್ರಯಾಣಿಕರಿಗೆ ಅರ್ಧ ಟಿಕೆಟ್ ಕೊಟ್ಟಿರುತ್ತಾನೆ.
ಬಸ್ ನಲ್ಲಿ ಇದ್ದ ಪ್ರಯಾಣಿಕರು ವಿಚಾರಿಸಿದಾಗ ನಕಲಿ ಕಂಡಕ್ಟರ್ ಹೇಳುತ್ತಾನೆ ಇನ್ ಅರ್ಧ ಟಿಕೆಟ್ ನನ್ನ ಹತ್ತಿರ ಇರುತ್ತೆ ಯೋಚನೆ ಮಾಡಬೇಡಿ
ಎಂದು ಹೇಳಿದ್ದಾನೆ.
ಅಧಿಕಾರ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ ಆ ನಕಲಿ ಕಂಡಕ್ಟರ್ ಯಾರು ಇದಕ್ಕೆ ಸಂಬಂಧ ಪಟ್ಟ ಡಿಪೋ ಮ್ಯಾನೇಜರ್ ಉತ್ತರ ನೀಡಬೇಕಾಗಿದೆ ಮತ್ತು ನಕಲಿ ಕಂಡಕ್ಟರ್ ವಿಚಾರಣೆಗೆ ಒಳಪಡಿಸಿ,ಅವನ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಬಸ್ಸಿನಲ್ಲಿ ಇದ್ದ ಪ್ರಯಾಣಿಕರ ಆಗ್ರಹವಾಗಿದೆ.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ