ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿದ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಗಳ ತಂಡ

ರಾಯಚೂರು/ಸಿಂಧನೂರು:ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಆಲದ ಮರಕ್ಕೆ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಅಮರ ಶ್ರೀ ಆಲದ ವೀಕ್ಷಣೆಗಾಗಿ ಕರೆತಂದ ಕಾಲೇಜಿನ ಪ್ರಾಂಶುಪಾಲರು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ರವಿಕುಮಾರ ಮಸ್ಕಿ ಮಾತನಾಡಿ ವನಸಿರಿ ಫೌಂಡೇಶನ್ ತಂಡದ ವತಿಯಿಂದ ಮರುಜೀವ ಪಡೆದ ಈ ಆಲದ ಮರ,ರೈತನ ಹೊಲದಲ್ಲಿ ಬೃಹದಾಕಾರವಾಗಿ ಬೆಳೆದಾಗ ಅದು ಊಳುಮೆ ಮಾಡಲು ತೊಂದರೆ ಆಗುತ್ತದೆ ಎಂದು ತಿಳಿದು ಅದನ್ನು ಕಡಿದು ಹಾಕಿದ.ಅದನ್ನು ಕಂಡ ವನಸಿರಿ ಫೌಂಡೇಶನ್ ಅಮರೇಗೌಡ ಅವರು ಅದನ್ನು ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಇಲ್ಲಿಗೆ ತಂದ ನಂತರ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಈ ಸ್ಥಳದಲ್ಲಿ ನೆಟ್ಟರು ಇದನ್ನು ನೆಟ್ಟು ಒಂದೇ ವರ್ಷದಲ್ಲಿ ಬೃಹದಾಕಾರವಾಗಿ ಮತ್ತೆ ಬೆಳೆದು ನಿಂತಿದೆ ಇದು ಕೇವಲ ಅಮರೇಗೌಡ ಅವರಿಗೆ ಮಾತ್ರ ಶುದ್ಧವಾದ ಗಾಳಿಯನ್ಬು ನೀಡುವುದಿಲ್ಲ ಅದು ಇಡೀ ನಮ್ಮ ಸಿಂಧನೂರಿನ ಜನರಿಗೆಲ್ಲರಿಗೂ ಶುದ್ಧವಾದ ಗಾಳಿನೀಡುತ್ತದೆ.ಇವತ್ತಿನ ದಿನಗಳಲ್ಲಿ ನಾವುಗಳು ಗಾಳಿಯನ್ನು ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಬಂದಿದೆ ಆದರೆ ಇಡೀ ಸಿಂಧನೂರಿಗೆ ನೈಸರ್ಗಿಕವಾಗಿ ಉಚಿತವಾಗಿ ಶುದ್ಧಗಾಳಿ ನೀಡುವ ಏಕೈಕ ಜೀವಿ ಅಂದರೆ ಈ ಆಲದ ಮರ ಇಂತಹ ಪ್ರತಿಯೊಂದು ಮರಗಳನ್ನು ನಾವುಗಳೆಲ್ಲರೂ ಸಂರಕ್ಷಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಹಾಗೂ ನ್ಯಾಷನಲ್ ಕಾಲೇಜಿನ ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ