ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿ.ಎಂ.ಎಸ್ ಕಾನೂನು ಮಹಾ ವಿದ್ಯಾಲಯದಲ್ಲಿ ಶ್ರೀನಿವಾಸಯ್ಯ ಸ್ಮರಣಾರ್ಥ ೮ ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ ಕಾರ್ಯಕ್ರಮ

ಬೆಂಗಳೂರು:ಬಿ.ಎಂ.ಎಸ್ ಕಾನೂನು ಮಹಾ ವಿದ್ಯಾಲಯ,ಬೆಂಗಳೂರಿನಲ್ಲಿ ಇಂದು ದಿನಾಂಕ ೦೪/೦೮/೨೦೨೩ ರಿಂದ ೦೬/೦೮/೨೦೨೩ ರ ವರೆಗೆ ನಡೆಯಲಿರುವ ಮೂರು ದಿನಗಳ ಬಿ.ಎಂ.ಎಸ್ ಶ್ರೀನಿವಾಸಯ್ಯ ಸ್ಮರಣಾರ್ಥ ೮ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಅಂಗವಾಗಿ ಪ್ರಥಮ ದಿನ ೦೪/೦೮/೨೦೨೩ ರಂದು ಸಂಜೆ ೫.೦೦ ಗಂಟೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಪಿ.ಎಸ್ ದಿನೇಶ್ ಕುಮಾರ್, ನ್ಯಾಯಾಧೀಶರು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಹಳೆಯ ವಿದ್ಯಾರ್ಥಿಗಳು ಬಿ.ಎಂ.ಎಸ್.ಸಿ. ಎಲ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾನೂನು ವಿದ್ಯಾರ್ಥಿಗಳು ಈ ತರಹದ ಅಣಕು ನ್ಯಾಯಾಲಯ ಕಾರ್ಯಕ್ರಮಗಲ್ಲಿ ಆದಷ್ಟು ಹೆಚ್ಚು ಭಾಗವಹಿಸುವ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಗೌರವ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ವಿ.ಸುಧೀಶ್ ಪೈ. ಹಿರಿಯ ವಕೀಲರು,ಕರ್ನಾಟಕ ಉಚ್ಛ ನ್ಯಾಯಾಲಯ, ಇವರು ಕಾನೂನು ವೃತ್ತಿಯಲ್ಲಿ ನಿರತರಾದ ಎಲ್ಲಾ ಹಿರಿಯ ವಕೀಲರ ಕುರಿತು ಕೆಲವೊಂದು ವಿವರಗಳನ್ನು ನೀಡಿದರು.
ಶ್ರೀ ಅವಿರಾಮ್ ಶರ್ಮ,ದತ್ತಿಗಳು ಬಿ.ಎಂ.ಎಸ್.ಇ.ಟಿ, ಬಿ.ಎಂ.ಎಸ್.ಸಿ.ಎಲ್,ಡಾ||ಬಿ.ಎಸ್. ರಾಗಿಣಿ ನಾರಾಯಣ್,ದಾನಿ ದತ್ತಿಗಳು ಬಿ.ಎಂ.ಎಸ್.ಇ.ಟಿ, ಡಾ|| ದಯಾನಂದ್ ಪೈ,ಆಜೀವ ದತ್ತಿಗಳು, ಬಿ.ಎಂ.ಎಸ್.ಇ.ಟಿ, ಶ್ರೀ ಗೌತಮ್ ಕಲತ್ತೂರ್, ಚೇರ್ಮನ್,ಬಿ.ಎಂ.ಎಸ್ ಆಸ್ಪತ್ರೆ ಟ್ರಸ್ಟ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ|| ಅನಿತಾ ಎಫ್.ಎನ್.ಡಿಸೋಜಾ ಇವರು ಗಣ್ಯರನ್ನು ಸ್ವಾಗತಿಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ