ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ-RCF

ರಾಯಚೂರು ಜಿಲ್ಲಾ ಲಿಂಗಸೂಗೂರ ತಾಲೂಕು ಚಿಕ್ಕಹೆಸರೂರು ಅಮರ ಜ್ಞಾನಪೀಠ ಹತ್ತಿರ ವಾಲ್ಮೀಕಿ ಭವನದಲ್ಲಿದಲ್ಲಿ ನಡೆದ ಎಂ ಎಂ ಕಲಬುರ್ಗಿ ಅವರ 8ನೇ ಸ್ಮರಣಾರ್ಥ…ಕಲಬುರಗಿ ಸಂಶೋಧನೆಗೆ ಸಾವಿಲ್ಲ !
ಸಾಹಿತ್ಯ-ಚಿಂತಕರ ಹತ್ಯೆ ಪ್ರಜಾಪ್ರಭುತ್ವದ ಹತ್ಯೆ ! ಕಾಂ : ಅಸೀಮಗಿರಿ ಸತ್ಯಾನ್ವೇಷಕ,ಸಂಶೋಧಕ ಡಾಎಂ.ಎಂ.ಕಲಬುರಗಿಯವರನ್ನು ಭೌತಿಕವಾಗಿ ಹತ್ಯೆ ಮಾಡಿರಬಹುದು ಆದರೆ ಕಲಬುರಗಿಯವರ ಸತ್ಯ ಸಂಶೋಧನೆಗೆ ಯಾವತ್ತೂ ಸಾವಿಲ್ಲ ! ಎಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ರಾಷ್ಟ್ರೀಯ ಮುಖಂಡರಾದ, ಪಶ್ಚಿಮ ಬಂಗಾಳದ ಅಸೀಮಗಿರಿಯವರು ಪ್ರತಿಪಾದಿಸಿದರು. ಅವರಿಂದು ಅಮರ ಜ್ಞಾನಪೀಠ ಚಿಕ್ಕಹೆಸರೂರು ಪಾಮನಕಲ್ಲೂರು ವಾಲ್ಮೀಕಿ ಭವನದಲ್ಲಿ ಆರ್ ಸಿಎಫ್ ಆಯೋಜಿಸಿದ ಡಾ: ಎಂ.ಎಂ.ಕಲಬುರಗಿಯವರ 8ನೇ ವರ್ಷದ ಸ್ಮರಣಾರ್ಥ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸತ್ಯದ ಪ್ರತಿಪಾದಕರೆಲ್ಲರನ್ನೂ ಒಂದೇ ತೆರನಾಗಿ ಹತ್ಯೆ ಮಾಡಲಾಗಿದೆ. ದಾಭೋಲ್ಕರ್,ಪಾನ್ಸಾರೆ, ಕಲಬುರಗಿ,ಗೌರಿ ಲಂಕೇಶರ ಸಾವುಗಳನ್ನು ಗಮನಿಸಿದರೆ ಅವರ ವೈಚಾರಿಕ ಸಂಘರ್ಷಗಳಿಗೆ ಹೆದರಿದ ತೀವ್ರ ಬಲ ಪಂಥೀಯವಾದಿಗಳು ಅವರನ್ನು ಭೌತಿಕವಾಗಿ ಹತ್ಯೆ ಮಾಡಿರಬಹುದು, ಸತ್ಯಕ್ಕೆ ಸಾವಿಲ್ಲ,ಎಂಬುದನ್ನು ಮರೆತಿದ್ದಾರೆ. ಜನತೆಗಾಗಿ ಮಡಿದ ಹುತಾತ್ಮರ ಆಶಯಗಳ ಹಾದಿಯಲ್ಲಿ ಮುನ್ನೆಡೆದು ಕೋಮುವಾದಿಗಳ ಜನದ್ರೋಹಿ ಹುನ್ನಾರಗಳನ್ನು ಬಯಲುಗೊಳಿಸುವ ಕಾರ್ಯಭಾರಗಳಿಗೆ ಹೆಗಲೊಡ್ಡೋಣವೆಂದು ಕರೆಯಿತ್ತರು.ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಂಚಾಲಕರಾದ ಎಂ ಗಂಗಾಧರ್ ಮಾತನಾಡಿ,ಲಿಂಗಾಯತ ಧರ್ಮದ ಸತ್ಯಾನ್ವೇಷಣೆ ಕೈಗೊಂಡ ಡಾ:ಎಂ.ಎಂ.ಕಲಬುರಗಿಯವರನ್ನು ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣನವರನ್ನು ಇನ್ನಿಲ್ಲವಾಗಿಸಿದ್ದಾರೆ.ಅವರು ನಡೆದ ಹಾದಿಯನ್ನು ಸವೆಸಲು,ಅಳಿಸಿ ಹಾಕಲು ಜಗತ್ತಿನ ಯಾವುದೋ ಶಕ್ತಿಗೂ ಸಾದ್ಯವಿಲ್ಲವಾಗಿದೆ.ಅದು ನಿತ್ಯ ನೂತನವಾಗಿಯೇ ಅಜರಮರವಾಗಿರಲಿದೆ ಎಂದರು.ಆರ್.ಸಿ.ಎಫ್ ನ ರಂಜಿತ್ ಮುಜುಂದಾರ್,ಹನುಮಂತಪ್ಪ ಮನ್ನಾಪುರ, ವಿಜಯರಾಣಿ ಸಿರವಾರ,ಶಿವರಾಜ್ ರುದ್ರಾಕ್ಷಿ, ರುಕ್ಮಣಿ ಗೆಜ್ಜಲಗಟ್ಟ ಮುಂತಾದವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಆರ್.ಸಿಎಫ್ ನ ಆದೇಶ ನಗನೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ಕಲಾವಿದರು ಕಲಬುರಗಿ ಕುರಿತು ಕ್ರಾಂತಿಕಾರಿ ಹಾಡುಗಳನ್ನು ಹಾಡಿದರು.
ಮಲ್ಲಯ್ಯ ಕಟ್ಟಿಮನಿ,ತಿಪ್ಪಣ್ಣ ಚಿಕ್ಕ ಹೆಸರೂರು, , ಭೀಮರಾಯ ಭಂಡಾರಿ,ಸಂತೋಷ,ಮಾರುತಿ, ಕರಿಯಪ್ಪ ತೋರಣದಿನ್ನಿ,ಚಿದಾನಂದ,ಬಸವರಾಜ ಮುದುಗಲ್,ರಂಗನಾಥ ಜಾಲಹಳ್ಳಿ, ಸೋಮುಶೇಖರ್ ಹುಲ್ಲೇಶ್ ಹಿರೇಸರೂರು, ಬಸವರಾಜ್ ಹಿರೇಸರೂರು,ಲಕ್ಷ್ಮಿ ಬಳಗನೂರು, ರಾಜಪ್ಪ ದೊಡ್ಡಮನಿ,ಹೆಚ್.ಆರ್.ಹೊಸಮನಿ ಕೆ ಗಿರಿಲಿಂಗಸ್ವಾಮಿ,ಶಿವರಾಂ ಕಟ್ಟಿಮನಿ,
,ಮುದಿಯಪ್ಪ,ಸುರೇಶ್,ಸೇರಿದಂತೆ ವಿವಿಧ ಜನಪರ ಸಂಘಟನೆಗಳ ನೂರಾರು ಪ್ರತಿನಿಧಿಗಳು ಪಾಲ್ಗೊಂಡು ಯಶಸ್ವಿಗೊಳಿಸಲಾಯಿತು.
ವರದಿ-ಬಸವರಾಜ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ