ಯಾದಗಿರಿ/ಶಹಾಪುರ:ಹಳಿಸಗರದಲ್ಲಿ ದಿನಾಂಕ 14/09/2023 ರಂದು ಬಿಜೆಪಿ ನಗರ ಮಂಡಲ ಶಹಾಪುರ ವತಿಯಿಂದ “ನನ್ನ ಮಣ್ಣು ನನ್ನ ದೇಶ” ಅಭಿಯಾನವನ್ನು ನಗರದ ನಿಜ ಶರಣ ಶ್ರೀ, ಅಂಬಿಗರ ಚೌಡಯ್ಯನವರ ಮಠದಲ್ಲಿ ಪೂಜೆ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ಕೋನೇರ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಡಾ||ಚಂದ್ರಶೇಖರ ಸುಭೇದಾರ ಅವರು ಅಭಿಯಾನ ಉದ್ದೇಶಿಸಿ ಮಾತನಾಡಿದರು ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯರಾದ ರಾಘವೇಂದ್ರ ಯಕ್ಷಂತಿ,ಸತೀಶ ತೊನಸಳ್ಳಿ , ಸಿದ್ದಯ್ಯ ಸ್ವಾಮಿ ಹಿರೇಮಠ,ಶರಣಪ್ಪ ಟೋಕಪೂರ,ಮಂಜುನಾಥ ಅಲಬನೂರ,ಸುಭಾಸ ತಳವಾರ,ದೇವಿಂದ್ರ ರಾಮಪುರ,ಭೀಮರಾಯ ಕಟ್ಟಿಮನಿ,ಭೀಮರಾಯ ಕುರಿ,ಮಲ್ಲಿಕಾರ್ಜುನ ನಾಯಿಕೋಡಿ,ಮಂಜುನಾಥ ಆಪ್ಲೇ,ಪರುಶುರಾಮ ವಡ್ಡರ,ಮರೆಪ್ಪ ಕುರಿ,ಪ್ರಶಾಂತ ಜಂಗಳಿ,ನಾಗೇಶ ಬಾಸುತಕರ್,ಹಣಮಂತ ಕಟ್ಟಿಮನಿ,ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್