ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಲ್ಯಾಣ ಉತ್ಸವದಲ್ಲಿ ವೈಜನಾಥ ಪಾಟೀಲರನ್ನು ಮರೆತ ಸರಕಾರ:ಬಾಲಾಜಿ ಆಕ್ರೋಶ

ಕಲಬುರಗಿ:ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂವಿಧಾನದ ಕಲಂ 371 (ಜೆ) ಅನ್ವಯ ವಿಶೇಷ ಮೀಸಲಾತಿ ನೀಡಬೇಕು ಎಂಬ ಹೋರಾಟವನ್ನು ಹಳ್ಳಿ ಹಳ್ಳಿಗೂ‌ ಕೊಂಡೊಯ್ದವರಲ್ಲಿ ಹೋರಾಟಗಾರ,ಮಾಜಿ ಶಾಸಕ ವೈಜನಾಥ ಪಾಟೀಲರ ಪ್ರಮುಖ ಪಾತ್ರವಾಗಿತ್ತು
ಹೀಗಿರುವಾಗ ಸರಕಾರವು ಮಾಜಿ ಶಾಸಕ ವೈಜನಾಥ ಪಾಟೀಲರನ್ನು ಮರೆತಿರುವ ಸರಕಾರದ ನಡೆಯನ್ನು ಕರವೇ(ಪ್ರವೀಣ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಶೇಕ ಬಾಲಾಜಿ ಅವರು ತೀವ್ರವಾಗಿ ಖಂಡಿಸಿದ್ದರು.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಹೋರಾಟದ ತೀವ್ರತೆ,ಕಾವಿಗಂಜಿಯೇ ಕೇಂದ್ರದಲ್ಲಿದ ಯುಪಿಎ ಆಡಳಿತ 2013 ರಲ್ಲಿ ಕಲಂ 371(ಜೆ) ತಿದ್ದುಪಡಿ ಮಾಡಿ ಜಾರಿಗೊಳಿಸಿತ್ತು.ಕಲಂ 371(ಜೆ) ಅನುಚ್ಛೇದದ ತಿದ್ದುಪಡಿಗೊಂಡು ಬರೋಬ್ಬರಿ 1ದ ಸಂವತ್ಸರ ತುಂಬಿರುವ ಸುಸಮಯವಿದು.ಹೀಗಾಗಿ ಕಲಂ 371 (ಜೆ) ಜಾರಿಗೊಂಡ ದಶಮಾನೋತ್ಸವ ಆಚರಣೆಗೂ ಜಿಲ್ಲಾಡಳಿತ ಕರೆ ಕೊಟ್ಟಿದ್ದರಿಂದಾಗಿ ಜಿಲ್ಲೆಯಲ್ಲಿ ಅನೇಕ ಸಮಾರಂಭಗಳನ್ನು ಆಯೋಜಿಸಲಾಗಿತ್ತರಾದರೂ ಯಾವೊಂದು ಸಮಾರಂಭದಲ್ಲಿಯೂ ಹೋರಾಟದ ರೂವಾರಿ ಈ ಬಗ್ಗೆ ಜನಮತ ಮೂಡಿಸಿದ್ದ ವೈಜನಾಥ ಪಾಟೀಲರ ಸ್ಮರಣೆ ಕಾಣಲೇ ಇಲ್ಲ ಇನ್ನೂ ಅಮೃತ ಮಹೋತ್ಸವ ಹಾಗೂ ದಶಮಾನೋತ್ಸವಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಕೂಡಾ ಅವರ ಭಾಷಣದಲ್ಲಿ ಕಲಂ 371(ಜೆ) ತಿದ್ದುಪಡಿಗಾಗಿ ಡಾ.ಖರ್ಗೆ ಹಾಗೂ ಧರ್ಮಸಿಂಗ ಕಾರಣರೆಂದು ಹೇಳಿದರು.ಆದರೆ ಈ ಭಾಗಕ್ಕೆ ಕಲಂ 371 (ಜೆ) ಜಾರಿಗಾಗಿ ಹೋರಾಡಿದ ಮಾಜಿ ಶಾಸಕ ವೈಜನಾಥ ಪಾಟೀಲರನ್ನು ಸ್ಮರಿಸದೇ ಅವರನ್ನು ಮಾಡಿ ಮರೆತಿರುವ ಸರಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ