ಕಲಬುರಗಿ:ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ ಒತ್ತಡದ ಬದುಕಿನ ಮಧ್ಯೆ ಮನಸ್ಸನ್ನು ಉಲ್ಲಾಸಿತಗೊಳಿಸಲು ಯಾವುದೇ ಆಟ ಒಳ್ಳೆಯ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಜನಾಬ ಸಯ್ಯದ ಮುಹಮ್ಮದ ಅಲಿ ಅಲ್ ಹುಸೇನಿ ನುಡಿದರು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಪ್ರಮುಖ ಕಂಪನಿಗಳಲ್ಲಿ ಉದ್ಯೋಗಿಗಳು ಕೇರಂ,ಗಾಲ್ಫ್,ಚೆಸ್ನಂತಹ ಆಟಗಳನ್ನು ಆಡುತ್ತಾರೆ ಏಕೆಂದರೆ ಈ ಆಟಗಳು ಮನಸ್ಸನ್ನು ತಾಜಾಗೊಳಿಸುತ್ತವೆ ನಿಮ್ಮನ್ನು ಸುಧಾರಿಸಿಕೊಳ್ಳಲು ನೀವು ಸಮಯವನ್ನು ನೀಡಬೇಕು.ಕ್ರೀಡೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.ಕಳೆದ 5 ವರ್ಷಗಳಲ್ಲಿ ಹೈದರಾಬಾದನಲ್ಲಿ ಕ್ರಿಕೆಟ್ ಮೈದಾನಗಳನ್ನು ಹೆಚ್ಚಿವೆ. ಕಾರ್ಪೊರೇಟ್ ಟೂರ್ನಮೆಂಟ್ಗಳು ನಡೆಯುತ್ತಿವೆ. ನಾನು ಕ್ರೀಡೆಗೆ ಸಮಯ ನೀಡಲು ಪ್ರಯತ್ನಿಸಿದೆ. ನೀವು ಕ್ರೀಡಾಂಗಣ ಪ್ರವೇಶಿಸಿದಾಗ ಜಗತ್ತನ್ನು ಮರೆತುಬಿಡುತ್ತೀರಿ ಮತ್ತು ನಿಮ್ಮ ಒತ್ತಡವು ನಿವಾರಣೆಯಾಗುತ್ತದೆ.
ವಿಶ್ವವಿದ್ಯಾನಿಲಯದಲ್ಲಿ ಇಂತಹ ಉತ್ಸವವನ್ನು ಆಯೋಜಿಸುತ್ತಿರುವ ವಿಸಿಯ ಕಾರ್ಯವೈಖರಿಯನ್ನು ನಾನು ಅಭಿನಂದಿಸುತ್ತೇನೆ. ಕೆಬಿಎನ್ ವಿವಿ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಹೆಚ್ಚಿಸಲಿದೆ. ಇನ್ನೂ ಹೆಚ್ಚಿನ ಕ್ರೀಡೆಗಳಿಗೆ ವ್ಯವಸ್ಥೆ ಮಾಡಲು ಎದುರು ನೋಡುತ್ತಿದೆ.ಪ್ರತಿಯೊಂದು ಕ್ರೀಡೆಗೂ ತನ್ನದೇ ಆದ ಮಹತ್ವವಿದೆ ಎಲ್ಲಾ ರೀತಿಯ ಕ್ರೀಡೆಗಳನ್ನು ಬೆಂಬಲಿಸಲು ಬಯಸುತ್ತೇನೆ. ಕ್ರೀಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಭಾಗವಹಿಸುವ ಎಲ್ಲರಿಗೂ ನಾನು ಶುಭ ಹಾರೈಸುತ್ತೇನೆ ಎಂದು ನುಡಿದರು.
ಕೆಬಿಎನ್ ವಿವಿಯ ಉಪಕುಲಪತಿ ಪ್ರೊ.ಅಲಿ ರಜಾ ಮೂಸ್ವಿ ಇವರು ಮಾತನಾಡುತ್ತಾ,ಆಟಗಳಲ್ಲಿ ಗೆಲ್ಲುವುದು ಅಥವಾ ಸೋಲುವುದು ಮಹತ್ವ ಅಲ್ಲ. ನ್ಯಾಯೋಚಿತ ಆಟ ಅರ್ಥಪೂರ್ಣ. ವಿದ್ಯಾರ್ಥಿಗಳು ರಾಷ್ಟ್ರೀಯ,ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಇಂತಹ ಅವಕಾಶಗಳು ಸಹಕಾರಿ ನಾವು ಅದರತ್ತ ಮೊದಲ ಹೆಜ್ಜೆಯನ್ನು ಪ್ರಾರಂಭಿಸಿದ್ದೇವೆ ವಿವಿಯು ವಿದ್ಯಾರ್ಥಿಗಳಲ್ಲಿ ಸಂಪೂರ್ಣ ವ್ಯಕ್ತಿತ್ವಗಳನ್ನು ಹುಟ್ಟುಹಾಕುವಲ್ಲಿ ನಿರತವಾಗಿದೆ.
ಪಾರಿವಾಳಗಳನ್ನು ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು ಇದೇ ವೇಳೆ ಬ್ರೋಚರ್ ಬಿಡುಗಡೆ ಮಾಡಲಾಯಿತು. ಸಯ್ಯದ ಅಲಿ ಅಲ್ ಹುಸೇನಿ ಪ್ರಮಾಣ ವಚನ ಬೋಧಿಸಿದರು.ವಿದ್ಯಾರ್ಥಿಗಳಿಂದ ಪಥ ಸಂಚಲನ ಕಾರ್ಯಕ್ರಮ ನಡೆಯಿತು.7 ದಿನಗಳ ಕಾಲ ವಿದ್ಯಾರ್ಥಿಗಳಿಗೆ ವಿವಿಧ ಆಟ ಮತ್ತು ಸಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಜನಾಬ ತಲ್ಹಾ ಪ್ರಾರ್ಥಿಸಿದರೆ, ಮೈಕ್ರೋಬಯೋಲಾಜಿಯ ಸಹಾಯಕ ಪ್ರಾಧ್ಯಾ ಪಕ ಡಾ.ಬಿಲಾಲ ಸ್ವಾಗತಿಸಿದರು.ಐಕ್ಯೂಎಸಿ ನಿರ್ದೇಶಕ ಡಾ.ಬಷೀರ ವಂದಿಸಿದರೆ ಡಾ.ಇರ್ಫಾನ ಅಲಿ ನಿರೂಪಿಸಿದರು.
ಕೆಬಿಎನ್ ವಿವಿಯ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖಾಜಾ ಬಂದಾನವಾಜ ವಿವಿಯ ನಿರ್ದೇಶಕರಾದ ಡಾ.ಸಯ್ಯದ ಮುಸ್ತಫಾ ಅಲ ಹುಸ್ಸೇನಿ,ಕುಲಸಚಿವೆ ಡಾ.ರುಕ್ಸರ್ ಫಾತಿಮಾ, ಮೆಡಿಕಲ ಡೀನ ಡಾ. ಸಿದ್ದೇಶ್,ಇಂಜಿನಿಯರಿಂಗ್ ಡೀನ ಮೊಹಮ್ಮದ ಅಜಾಮ,ಕಲಾ,ಭಾಷಾ, ಮಾನವೀಕತೆ,ಸಮಾಜ ವಿಜ್ಞಾನ ಮತ್ತು ವಿಜ್ಞಾನ, ಶಿಕ್ಷಣ, ಕಾನೂನು ಡೀನ ಡಾ.ನಿಶಾತ ಆರೀಫ್ ಹುಸೇನಿ ಹಾಗೂ ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಡಾ ಹಮೀದ್ ಅಕ್ಬರ್,ಡಾ ಮೈಮೂನ್,ಡಾ ಅಬ್ರಾರ್,ಡಾ ಜಾವೆದ್ ಡಾ ನಗ್ಮ್,ಡಾ ಸುನಿಲ್,ಡಾ ಮುಜೀಬ್,ಡಾ ಅಬ್ರಾರ್,ಡಾ ಅತಿಯಾ,ಡಾ ಸನಾ,ಡಾ ಜಹಾಂನಾರ,ಡಾ ಸಮೀನಾ,ಡಾ ಜೈನಬ, ಪ್ರಿಯಾಂಕಾ,ಡಾ ವಿನೋದ್,ಡಾ ಬದರಿನಾಥ,ಡಾ ತಿಲಕ,ಡಾ.ತಬಸ್ಸುಮ್,ಡಾ ಮಿಲನ,ಡಾ ಜ್ಯೋತಿ,ಡಾ ಜೂಹಿ,ಡಾ ಷಾಜಿಯಾ, ಮುಜಾಹಿದ್,ಡಾ ಸಮೀನಾ ಮತ್ತು ಡಾ ನಮ್ರತಾ ಹಾಜರಿದ್ದರು.
ವರದಿ:ಅಪ್ಪಾರಾಯ ಬಡಿಗೇರ



















