ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಕ್ಕಳಲ್ಲಿ ನೈತಿಕತೆಯ ಮೌಲ್ಯ ಬೆಳೆಸುವುದು ಶಿಕ್ಷಣದ ಪ್ರಮುಖ ಗುರಿಯಾಗಬೇಕು:ಶ್ರೀ ವೀರ ಮಹಾಂತ ಶಿವಾಚಾರ್ಯ

ಕಲಬುರಗಿ/ಅಫಜಲಪುರ:ಇಂದಿನ ಅಧುನಿಕ ಯುಗದಲ್ಲಿ ಮಕ್ಕಳು ಉತ್ತಮ ನಾಗರಿಕರಾಗಬೇಕಾದರೆ ಅವರಲ್ಲಿ ಬಾಲ್ಯದಲ್ಲಿಯೆ ಒಳ್ಳೆಯ ಮೌಲ್ಯಗಳನ್ನು ಬೆಳಸುವುದು ಅತಿ ಆವಶ್ಯಕವಾದ ಕಾರ್ಯವಾಗಿದೆ ಎಂದು ಚಿನ್ಮಯಗಿರಿಯ ಪೂಜ್ಯ ವೀರ ಮಹಾಂತ ಶಿವಾಚಾರ್ಯರು ಹೇಳಿದರು.ಗೊಬ್ಬೂರ(ಬಿ)ಯ ಶ್ರೀ ಮಲ್ಲಿಕಾರ್ಜುನ ಪೂರ್ವ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಮಕ್ಕಳೆ ಭವ್ಯ ಭಾರತದ ಭಾವಿ ಪ್ರಜೆಗಳಾದ್ದರಿಂದ ಅವರಲ್ಲಿ ಬಾಲ್ಳಯದಲ್ಲಿಯೆ ಅಕ್ಷರ ಜ್ಞಾನದ ಜೊತೆಗೆ ಮೌಲ್ಯಗಳನ್ನು ಬಿತ್ತುವುದು ಪ್ರಸ್ತುತ ಕಾಲ ಘಟ್ಟದಲ್ಲಿ ಅನಿವಾರ್ಯವೆಂದು ಕಿವಿ ಮಾತು ಹೇಳಿದರು ಇದೆ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅರುಣಕುಮಾರ ಪೊಲೀಸ್ ಪಾಟೀಲ್ ಮಾತನಾಡಿ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದರ ಮೂಲಕ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಶುಭಹಾರೈಸಿದರು ಅದೇ ರೀತಿ ಮುಖಂಡ ಸಿದ್ದು ಶಿರಸಗಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾಗುವ ಯಾವುದೇ ರೀತಿಯ ಸಲಹೆ ಮತ್ತು ಸಹಕಾರ ಕೋಡುವುದಾಗಿ ಭರವಸೆ ವ್ಯಕ್ತಪಡಿಸಿದರು.ಅದೇ ರೀತಿ ಸಂಸ್ಥೆಯ ವತಿಯಿಂದ ಗ್ರಾಮದ ವಿವಿದ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಸಾಧನೆ ಮಾಡುತ್ತಿರುವ ಡಾ.ಪಲ್ಲವಿ ಪಾಟೀಲ್ ಸುಹಾಸಿನಿ ನಾಟಿಕಾರ್ ಹಾಗೂ ಸಿದ್ದಾರೂಢ ಅವರಳ್ಳಿ ಅವರನ್ನು ಸನ್ಮಾನಿಸಲಾಯಿತು.ಪೋಷಕರ ಸಮ್ಮುಖದಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ವೇದಿಕೆಯ ಮೇಲೆ ಮುಖಂಡರಾದ ಪ್ರಭುಲಿಂಗ.ಕೆ.ದೇವತ್ಕಲ,ಶಿವಕುಮಾರ್ ಭೋಗಶೆಟ್ಟಿ, ಶಿವಾನಂದ್ ಮೇಳಕುಂದಿ,ಸಿ ಆರ್ ಪಿ ಆಸ್ಪಕ,ಶ್ರೀಮತಿ ಜ್ಯೋತಿ ಮ್ಯಾಳೈಸಿ,ಶಿವಾನಂದ ದೇವತ್ಕಲ,ಕಲ್ಯಾಣರಾವ್ ಪಡ ಶೆಟ್ಟಿ ಹಾಗೂ ಅರುಣಕುಮಾರ ಹರಳಯ್ಯ ಇತರರು ಉಪಸ್ಥಿತರಿದ್ದರು.ಸಂಸ್ಥೆಯ ಶಿವಾನಂದ ಕೌದಿ ಸ್ವಾಗತಿಸಿದರು,ಪ್ರಭಾವತಿ ಪೊದ್ದಾರ ನಿರೂಪಿಸಿದರು.

ವರದಿ:ಮಹಾದೇವ ವಿಶ್ವಕರ್ಮ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ