ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಿಎಸ್ ಪಿ ಇಂದ ಬೀದರ್ ಲೋಕಸಭೆಗೆ ಪುಟ್ಟರಾಜ್ ಸ್ಪರ್ಧೆ

ಬೀದರ್:ಇಂದು ಬೀದರನ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು.ರಾಜ್ಯ ಕಾರ್ಯದರ್ಶಿಗಳಾದ ಸ್ಟಾರ್ ಕಂಪೇನರ್ ದತ್ತು ಸೂರ್ಯವಂಶಿ ಹಾಗೂ ಲೋಕಸಭಾ ಅಭ್ಯರ್ಥಿಗಳಾದ ಪುಟ್ಟರಾಜ ಹನುಮಂತಪ್ಪ ನಂದೆ ಇವರು ಪತ್ರಿಕಾಗೋಷ್ಠಿ ನಡೆಸಿ ಬೀದರ್ ಲೋಕಸಭಾ ಜನತೆಗೆ ಬಹುಜನ ಸಮಾಜ ಪಾರ್ಟಿ ಅಂದರೆ ಆನೆ ಚಿಹ್ನೆಗೆ ಮತ ಚಲಾಯಿಸಲು ಕೋರಿದರು.ಈ ಸಂದರ್ಭದಲ್ಲಿ ಲೋಕಸಭಾ ಮತ ಕ್ಷೇತ್ರದ ಅಭ್ಯರ್ಥಿಗಳಾದ ಶ್ರೀಪುಟ್ಟರಾಜ ಹನುಮಂತಪ್ಪ ನಂದೆ ರವರು ಪ್ರಚಂಡ ಬಹುಮತ ದಲ್ಲಿ ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ತಿಳಿಸಿದರು.ಬಹುಜನ ಸಮಾಜ ಪಾರ್ಟಿಯ ಸ್ಟಾರ್ ಕಂಪೆನರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದತ್ತು ಸೂರ್ಯವಂಶಿ, ಕಲ್ಯಾಣ ಕರ್ನಾಟಕ ಕ್ರಿಶ್ಚಿಯನ್ ಬಾಹೀಚಾರ ಅಧ್ಯಕ್ಷರಾದ ಶ್ರೀಯೋಹಾನ್ ಡಿಸೋಜಾ,ಬಹುಜನ ಸಮಾಜ ಪಕ್ಷ ಬೀದರ್ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ.ಜಿ.ಅಸ್ಕರ್ ಹಾಗೂ ಇ.ಬಿ.ಸಿ.ಐ ಚರ್ಚ್ ಸಂಸ್ಥಾಪಕರಾದ ರೆವೆರೆಂಡ್ ಶ್ರೀಶಾದ್ರಕ್ ಪಿ ಸೀತಲಗೇರ,ಪ್ರೇಯರ್ ಪವರ್ ಸಭಾ ಪಾಲಕರಾದ ಶ್ರೀ. ಸ್ವಾಮಿದಾಸ್ ಮತ್ತು ಬಹುಜನ ಸಮಾಜ ಪಕ್ಷ ಕಾರ್ಯಕರ್ತರಾದ ಶ್ರೀ. ಜೈವಂತ್ ಸಾಗರ್ ಹಾಗೂ ಪಕ್ಷದ ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ:ರೋಹನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ