ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

14 ವಿದ್ಯಾರ್ಥಿಗಳು ಗಣಿತದಲ್ಲಿ 100 ಕ್ಕೆ100,ಕೋಚರ್ ಎಸ್ ಎಂ ಬಿರಾದಾರ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ 2023-24 ನೇ ಸಾಲಿನಲ್ಲಿ ಒಟ್ಟು 36 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು.ಇದರಲ್ಲಿ 14 ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿಕೊಂಡು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಆ ವಿದ್ಯಾರ್ಥಿಗಳ ಹೆಸರು ಕ್ರಮವಾಗಿ ಇಂತಿವೆ. ಯಮನೂರ ರೊಳ್ಳಿ,ಶ್ರೇಯಾ ಅ ನಾಗಣಿ,ಸಿಂಚನಾ ಸಾ ಮಂಗೊಂಡ,ವಿನಾಯಕ ರಾ ನಾವಿ,ಸುಶ್ಮಿತಾ ಪಾ ಪಾಂಡ್ರೆ,ಸ್ನೇಹಾ ಶಿ ಪ್ರಚಂಡಿ,ವರ್ಷಾ ಸಂ ತಳವಾರ, ಸುಭಾಸಗೌಡ ದಾ ಪಾಟೀಲ,ಶ್ವೇತಾ ಸಿ ಚಿಕ್ಕಮಣೂರ, ಸುಮಿತ ಗು ಪವಾರ,ಸೃಷ್ಟಿ ನಿಂ ದೊಡ್ಡಿ,ಶ್ರವಣ ಬಿರಾದಾರ,ಸಮರ್ಥ ಕ ಮೇತ್ರಿ,ಶರತ ವಾಲಿಕಾರ ಈ ಎಲ್ಲಾ ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎನ್ನುತ್ತಿರುವ ಗಣಿತವನ್ನು ಸರಾಗವಾಗಿ ಅರೆದು ಕುಡಿದಿದ್ದಾರೆ.ಈ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿಯನ್ನು ನೀಡಿದ ಎಸ್ ಎಮ್ ಬಿರಾದಾರ ಶಿಕ್ಷಕರು ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಎಂ ಬಿ ಬಿರಾದಾರ,ಉಪಾಧ್ಯಕ್ಷರಾದ ಅಭಿಮನ್ಯು ಎಂ ಬಿರಾದಾರ,ಆಡಳಿತಾಧಿಕಾರಿಗಳಾದ ಎ ಎಸ್ ಪಾಟೀಲ,ಪ್ರಾಂಶುಪಾಲರಾದ ಎಸ್ ಆರ್ ರಾಠೋಡ,ಮುಖ್ಯ ಗುರುಗಳಾದ ಬಿ ಎಸ್ ಖ್ಯಾದಿ, ಹಾಗೂ ಸಮಸ್ತ ಗುರುಬಸವ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯು ವಿದ್ಯಾರ್ಥಿಗಳಿಗೆ ಮತ್ತು ತರಬೇತಿಯನ್ನು ನೀಡಿದ ಶಿಕ್ಷಕರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ