ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಮಾನತೆ ಸಾರಿದ ಮನುಕುಲದ ಶ್ರೇಷ್ಠ ಸಂತ ಬಸವಣ್ಣ

ಬೀದರ್ ಚಿಟಗುಪ್ಪ:ಸಮಾನತೆ,ಸಹೋದರತ್ವ,ಸಹಬಾಳ್ವೆ, ಸೌಹಾರ್ದತೆ,ಮಾನವೀಯತೆ,ಮೌಲ್ಯಾಧಾರಿತ ಸಿದ್ದಾಂತವನ್ನು ಜಾಗತಿಕ ಮಟ್ಟದಲ್ಲಿ ಸಾರಿದ ಮನುಕುಲದ ಶ್ರೇಷ್ಠ ಆಧ್ಯಾತ್ಮಿಕ ಯುಗಪುರುಷ,ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಜಗತ್ತಿನ ಪ್ರಪ್ರಥಮ ಪ್ರವಾದಿ,ಮಹಾಸಂತ ಬಸವಣ್ಣನವರು ಎಂದು ಶರಣ ಚಂದ್ರಶೇಖರ್ ತಂಗಾ ನುಡಿದರು.
ನಗರದ ಶರಣ ಸಂಗಮೇಶ ಎನ್ ಜವಾದಿಯವರ ನಿವಾಸದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ 891ನೇ ಬಸವ ಜಯಂತಿ ಆಚರಣೆ ಅಂಗವಾಗಿ ಉಪನ್ಯಾಸ ನೀಡಿ ಮಾತನಾಡಿದ ಅವರು
ಕಾಯಕ,ದಾಸೋಹ, ಸಮಾನತೆ,ಅಧ್ಯಾತ್ಮ ಹೀಗೆ ಸಮಗ್ರ ಕ್ರಾಂತಿ ಮಾಡಿದ ನಮ್ಮ ನಾಡಿನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಾಯಕ ಬಸವಣ್ಣನವರು. ಬಸವಣ್ಣನವರ ಜಯಂತಿಯ ಈ ಸಂದರ್ಭದಲ್ಲಿ ಅವರಿಗೆ ಭಕ್ತಿಯ ನಮನಗಳು ಸಲ್ಲಿಸುತ್ತೇವೆ ಎಂದರು.

ಬಸವಣ್ಣನವರ ಭಾವಚಿತ್ರಕ್ಕೆ ಕು.ಶೌರ್ಯ ಹಾಗೂ ಕು. ಶ್ರಾವ್ಯ ಪೂಜೆ ನೆರವೇರಿಸಿದರು.
ಅಧ್ಯಕ್ಷತೆಯನ್ನು ಶರಣ ಸಂಗಮೇಶ ಎನ್ ಜವಾದಿ ವಹಿಸಿದ್ದರು.
ಸಮಾರಂಭದಲ್ಲಿ ಮನೋಹರ್ ಜಕ್ಕಾ,ಮನೋಹರ್ ಮೆಧಾ,ಭೀಮಶೆಟ್ಟಿ ವಡ್ಡನಕೇರಾ,ರವಿ ನಿಂಗಣ್ಣಿ,ಚನ್ನವೀರ ಲಾತೂರೆ,ಬಸವರಾಜ ಕಲ್ಲೂರ, ಬಸವರಾಜ ಪಂಗರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ