ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಯನ್ನು ಉದ್ದೇಶಿಸಿ ಜಾಗತಿಕ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷರಾದ ನರಸಿಂಹರಾಜಪುರದ ಬಸವಕೇಂದ್ರದ ಬಸವಯೋಗಿಪ್ರಭುಗಳು ಆಶೀರ್ವಚನ ನೀಡಿದರು.
ಬಸವಣ್ಣನವರಾಗಲಿ ಅವರ ವಚನಗಳಾಗಲಿ ಒಂದು ದೇಶಕ್ಕೆ ಒಂದು ಕಾಲಘಟ್ಟಕ್ಕೆ ಒಂದು ಜಾತಿಗೆ ಸೀಮಿತವಲ್ಲ.ಬಸವಣ್ಣನವರು ಕಾಲತೀತ ದೇಶಾತೀತ ಅವರು ವಿಶ್ವಗುರು ಜಗಜ್ಯೋತಿ ಎಲ್ಲರೂ ಬಸವ ತತ್ವದಂತೆ ನಡೆದರೆ ವಿಶ್ವದ ಸಮಸ್ಯೆಗಳನ್ನು ಬಗೆಹರಿಸಬಹುದು ಎಲ್ಲಾ ವರ್ಗದ ಕಾಯಕ ಜೀವಿಗಳನ್ನು ಅಪ್ಪಿಕೊಂಡು ಎಲ್ಲಾ ಕಾಯಕಕ್ಕೂ ಸಮಾನತೆ ಕೊಟ್ಟ ಮಹಾನುಭಾವ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಇಷ್ಟಲಿಂಗವನ್ನು ಕೊಡುವುದರ ಮೂಲಕ ಅನುಭವ ಮಂಟಪದಲ್ಲಿ
ಸಮಾನತೆ ನೀಡಿದರು.ಬಸವಣ್ಣನ ನೆನೆವುದೆ ಪರಮತತ್ವ ಬಸವಣ್ಣನ ನೆನೆವುದೆ ಮಹದನುಭಾವ
ಬಸವಣ್ಣನ ನೆನೆದು ಸಮಸ್ತ ಗಣಂಗಳೆಲ್ಲರೂ ಅತಿಶುದ್ಧರಾದರು ಎಂದು ಮಡಿವಾಳ ಮಾಚಿದೇವ ಹೇಳುತ್ತಾರೆ.ಭ್ರಷ್ಟಾಚಾರ ಮೂಢನಂಬಿಕೆ ಕಂದಾಚಾರ ಅಸಮಾನತೆ ದ್ವೇಷದಿಂದ ತುಂಬಿಕೊಂಡಿರುವ ಜಗತ್ತನ್ನು ಬಸವಾದಿ ಶರಣರ ವಚನಗಳಿಂದ ಮಾತ್ರ ಶುದ್ಧೀಕರಣ ಮಾಡಲು ಸಾಧ್ಯವಿದೆ.ಬಸವಣ್ಣನವರು ನೀಡಿದ ಇಷ್ಟಲಿಂಗ ಜಗದಗಲ ಮುಗಿಲಗಲ ಮಿಗೆಯಗಲ
ನಿಮ್ಮಗಲ ಪಾತಾಳದಿಂತ್ತತ್ತ
ಬ್ರಹ್ಮಾಂಡದಿಂತ್ತತ್ತ ಆಗಮ್ಯ ಆಗೋಚರ ಅಗಮ್ಯ ಆಗೋಚರ ಶರಣರ ಕರಸ್ಥಲದಲ್ಲಿ ಚುಳುಕಾದ ಚೇತನವಾಗಿದೆ ಎಂದರು.
ಸಾನಿಧ್ಯವಹಿಸಿದ್ದ ಮದ್ಗರ್
ಲಿಂಗಯ್ಯನ ಹುಂಡಿಯ ವಿರಕ್ತ ಮಠದ ಗೌರಿಶಂಕರ ಸ್ವಾಮೀಜಿ ಮಾತನಾಡಿ ಲಿಂಗಾಯತ ಧರ್ಮದಲ್ಲಿ ದಾನವಿಲ್ಲ ದಾಸೋಹವಿದೆ
ಹೋಮ ಹವನ ಅನ್ಯದೇವರ ಪೂಜೆಯನ್ನು ಲಿಂಗವಂತರು ಮಾಡಬಾರದು.ಇಷ್ಟಲಿಂಗವನ್ನು ಕಣ್ತೆರೆದು ನೋಡುವುದರ ಮೂಲಕ
ಧ್ಯಾನಿಸಬೇಕು ಎಂದರು.ಬಸವಣ್ಣನವರೇ ಲಿಂಗಾಯತ ಧರ್ಮದ ಗುರು ವಚಗಳೇ ನಮ್ಮ ಧರ್ಮದ ಗ್ರಂಥ ಎಂದು ಹೇಳಿದರು.ತಾಲೂಕು ಜಾಗತಿಕ ಮಹಾಸಭಾದ ಅಧಕ್ಷ ಟಿ.ಎಂ.ರವಿ ಮಾತನಾಡಿದರು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಹದೇವಪ್ಪ ಸೇತುವೆ ಮಠದ ಸಹಜಾನಂದ ಸ್ವಾಮಿಗಳು
ಬಿಲಿಗೆರೆಹುಂಡಿ ಗುರು ಮಲ್ಲೇಶ್ವರ ಮಠದ ಗುರುಸ್ವಾಮೀಜಿ ಚೌಹಳ್ಳಿ ಲಿಂಗರಾಜಪ್ಪ ನಂಜನಗೂಡು ನಂಜಪ್ಪ ಗುರುಸಿದ್ದಮ್ಮ ಪ್ರಧಾನ ಕಾರ್ಯದರ್ಶಿ ಬಸವಣ್ಣ ಸದಸ್ಯರು ಪದಾಧಿಕಾರಿಗಳು ಹೆಳವರಹುಂಡಿ ಬಸವೇಶ್ವರ ಭಜನಾ ಬಳಗ
ಬಸವ ಭಕ್ತರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ