ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬುದ್ಧ,ಬಸವ,ಅಂಬೇಡ್ಕರ ರವರ ತತ್ವಾದರ್ಶಗಳು ವಿದ್ಯಾರ್ಥಿಗಳಿಗೆ ಆದರ್ಶವಾಗಲಿ:ಟೆಂಗಳಿ ಅಭಿಪ್ರಾಯ

ಕಲಬುರಗಿ: ಬುದ್ಧ,ಬಸವ,ಅಂಬೇಡ್ಕರ ಅವರ ತತ್ವಾದರ್ಶಗಳು ಇಂದಿನ ವಿಧ್ಯಾರ್ಥಿಗಳಿಗೆ ಆದರ್ಶವಾಗಲಿ ಎಂದು ಪ್ರಗತಿಪರ ಚಿಂತಕರಾದ ಡಾ.ಅನೀಲ ಟೆಂಗಳಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕಲಾ ಮಂಡಳದಲ್ಲಿ ಕರವೇ(ಕಾವಲುಪಡೆ) ವತಿಯಿಂದ ಹಮ್ಮಿಕೊಂಡ ಬುದ್ಧ,ಬಸವ ಅಂಬೇಡ್ಕರ ರವರ ಜಯಂತೋತ್ಸವ ಪ್ರಯುಕ್ತ ಆಯೋಜಿಸಿದ ಪ್ರಭುದ್ಧ ಭಾರತ ಸಂಕಲ್ಪ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಪ್ರಸ್ತುತ ಸಾಲಿನಲ್ಲಿ ಭಗವಾನ ಗೌತಮ ಬುದ್ಧ,ಕನ್ನಡ ವಚನಕಾರ ಬಸವಣ್ಣ,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ರವರ ವಿಚಾರಧಾರೆಗಳು, ಸಂವಿಧಾನದ ಪೀಠಿಕೆ ಓದುವುದು ತಿಳಿದುಕೊಳ್ಳುವುದು ಇಂದಿನ ವಿಧ್ಯಾರ್ಥಿಗಳಿಗೆ ಪ್ರಸ್ತುತ ಸಾಲಿನಲ್ಲಿ ತುಂಬಾ ಮುಖ್ಯವಾಗಿದೆ ಎಂದರು.ಕರವೇ ಕಾವಲುಪಡೆ ಸಂಘಟನೆ ವತಿಯಿಂದ ಆಯೋಜನೆಗೊಂಡ ಬುದ್ದ,ಬಸವ,ಅಂಬೇಡ್ಕರ ರವರ ಜಯಂತೋತ್ಸವದ ಸಂದರ್ಭದಲ್ಲಿ ಪ್ರಭುದ್ಧ ಭಾರತ ಸಂಕಲ್ಪ ಚಿಂತನ ಮಂಥನ ಕಾರ್ಯಕ್ರಮ ಅರ್ಥಪೂರ್ಣ ಎಂದು ಆಶಯ ವ್ಯಕ್ತಪಡಿಸಿದ್ದರು.
ನಂತರ ಪ್ರಾಸ್ತವಿಕ ನುಡಿಯನ್ನು ಕರವೇ(ಕಾವಲುಪಡೆ) ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ನಮ್ಮ ಸಂಘಟನೆಯಿಂದ ಬುದ್ಧ,ಬಸವ,ಅಂಬೇಡ್ಕರ, ಜಯಂತಿಯ ಜೊತೆಯಲಿ ಪ್ರಭುದ್ಧ ಬಾರತ ಸಂಕಲ್ಪ ಚಿಂತನ ಮಂಥನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ,ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಬುದ್ಧ ಭಾರತ ಪುರಸ್ಕಾರ ನೀಡಲು ತುಂಬಾ ಸಂತೋಷ ಉಂಟಾಗಿದೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯ‌ನ್ನು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಗಣೇಶ ವಳಕೇರಿ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ‌ ಜಗನ್ನಾಥ ಸೂರ್ಯವಂಶಿ, ಲಿಂಗರಾಜ ಸಿರಗಾಪೂರ,ಬಸವರಾಜ ಬೀರಬಿಟ್ಟಿ, ಬಸವರಾಜ ನಾಟೀಕಾರ, ಶಿವುಕುಮಾರ ಅಜಾದಪೂರ,ರವಿ ವಾಲಿ,ಜೈರಾಜ ಕಿಣಗಿಕರ್,ಆನಂದ ತೆಗನೂರ ಸೇರಿದಂತೆ ಇತರರು ಆಗಮಿಸಿದ್ದರು.

ಪ್ರಭುದ್ಧ ಭಾರತ ಗೌರವ ಪುರಸ್ಕಾರ:
ರವೀಂದ್ರ ಶಾಬಾದಿ,ಮೈಲಾರಿ ಶೆಳ್ಳಗಿ,ಡಾ.ಶಿವಶರಪ್ಪ ಕೋಡ್ಲ, ಅಯ್ಯಣ್ಣಾ ಜಿ ಹಾಲಭಾವಿ,ಗೋಪಾಲರಾವ ತೇಲಂಗಿ,ಡಾ.ರಾಜಶೇಖರ ಮಾಂಗ,ಬಸವರಾಜ ಜವಳಿ ಇವರನ್ನು ಪ್ರಭುದ್ಧ ಭಾರತ ಪುರಸ್ಕಾರ ಗೌರವ ನೀಡಿ ಗೌರವಿಸಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ