ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

“ಹೂಬಳ್ಳಿ ಲೇಖಕಿಯರ ಬಳಗದ ವಾರ್ಷಿಕೋತ್ಸವ

ಹುಬ್ಬಳ್ಳಿ: “ಹೂಬಳ್ಳಿ ಲೇಖಕಿಯರ ಬಳಗವು” ತನ್ನ ವಾರ್ಷಿಕೋತ್ಸವವನ್ನು ರಾಜೀವ ನಗರದ ಉದ್ಯಾನವನದಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿತು. ಇದರ ನಿಮಿತ್ತ ಕನ್ನಡದ ಹಿರಿಯ ಲೇಖಕಿಯರಾದ ವೈದೇಹಿ ಹಾಗೂ ತ್ರಿವೇಣಿಯವರ ಬರವಣಿಗೆಯ ಕುರಿತು ಓದು ಮತ್ತು ವಿಶ್ಲೇಷಣೆಯ ಕಾರ್ಯ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಲೇಖಕಿಯರಾದ ಪದ್ಮಜಾ ಉಮರ್ಜಿ,ಗಾಯತ್ರಿ ರವಿ, ಅನ್ನಪೂರ್ಣಾ ಅಗಡಿ,ಸುನಂದಾ ಶ್ಯಾಗೋಟಿ, ಸುನಿತಾ ಹುಬ್ಳೀಕರ್ ಇವರು ತ್ರಿವೇಣಿಯವರ ಕಾದಂಬರಿಗಳ ಕುರಿತು ವಿಶ್ಲೇಷಿಸಿದರೆ, ವೇದೇಹಿಯವರ ಬರವಣಿಗೆಯ ವಿಶ್ಲೇಷಣೆಯಲ್ಲಿ ಸಂಧ್ಯಾ ದೀಕ್ಷಿತ್, ರೂಪಾ ಜೋಶಿ, ಮಹದೇವಿ ಮುಡಕೆ, ಕವಿತಾ ಪೂರ್ಣಾನಂದ, ಸುಜಾತಾ ಹೆಬ್ಬಾಳದ ಮುಂತಾದವರು ಭಾಗವಹಿಸಿದ್ದರು. ಬಳಗದ ಅಧ್ಯಕ್ಷರಾದ ಡಾ ಸರೋಜಾ ಮೇಟಿ ಲೊಡಾಯ, ನೇತ್ರಾ ರುದ್ರಾಪರಮಠ, ನಂದಾ ಕುಲಕರ್ಣಿ,ಶ್ರೀದೇವಿ ಬಿರಾದಾರ ಮುಂತಾದವರೆಲ್ಲಾ ಭಾಗವಹಿಸಿದ್ದರು ಎಂದು ಪ್ರೀತಮ್ ಫೌಂಡೇಷನ್ ಅಧ್ಯಕ್ಷರಾದ.
ನೇತ್ರಾ ರುದ್ರಾಪೂರಮಠ ಅವರು ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ