ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾಣೆಯಾದ ವ್ಯಕ್ತಿ:ಪತ್ತೆಗೆ ಮನವಿ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಿಹಾಳ ಗ್ರಾಮದ ಮಲ್ಲೇಶ ಎಂಬ ವ್ಯಕ್ತಿ 2024ರ ಮೇ 18 ರಂದು ಬೆಳಿಗ್ಗೆ 9.30 ಗಂಟೆಗೆ ಸುಮಾರಿಗೆ ತನ್ನ ಅಕ್ಕಳ ಮನೆಯಾದ ಶಹಾಪೂರ ತಾಲೂಕಿನ ಶಿರವಾಳ ಗ್ರಾಮಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾನೆ ಎಂದು ಸರೋಜಮ್ಮ ಲಿಖಿತ ದೂರು ಸಲ್ಲಿಸಿದ ಅನ್ವಯ ಕಾಣೆಯಾದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ವಡಗೇರಾ ಪೋಲಿಸ್ ಠಾಣೆ ಪಿ.ಎಸ್.ಐ ಜಯಶ್ರೀ ಅವರು ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಪಟ್ಟಿ 50 ವರ್ಷ, ಪುರುಷನಾಗಿದ್ದು, ಎತ್ತರ 162 ಸೇ.ಮೀ, ಕೂದಲು ಕಪ್ಪು ಮತ್ತು ಬಿಳಿ ಮಿಶ್ರೀತ, ಮೈಬಣ್ಣ ಕಪ್ಪು, ಮುಖ ಉದ್ದ, ನೇರವಾದ ಮೂಗು, ಮೈಕಟ್ಟು ದಪ್ಪನೆ ಮೈಕಟ್ಟು, ಬಿಳಿ ಬಣ್ಣದ ಉದ್ದನೆಯ ತೋಳಿನ ಅಂಗಿ ಒಂದು ತಿಳಿ ನೀಲಿ ಬಣ್ಣದ ಲುಂಗಿ ಮತ್ತು ಒಂದು ಹಳದಿ ಬಣ್ಣ ಶಲ್ಯ ಧರಿಸಿದ ಉಡುಪು ಇದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಯಾವುದಾದರೂ ಮಾಹಿತಿ ತಿಳಿದು ಬಂದಲ್ಲಿ ವಡಗೇರಾ ಪೋಲಿಸ್ ಠಾಣೆಗೆ ಮತ್ತು ಜಿಲ್ಲಾ ನಿಯಂತ್ರಣ ಕೊಣೆಗೆ ಯಾದಗಿರಿ ಪೊಲೀಸ್ ಅಧೀಕ್ಷಕರ ಕಛೇರಿ ದೂ.ಸಂ. 08473 253738,
100 ಯಾದಗಿರಿ
ಸಿಪಿಐ ವೃತ್ತ ಕಛೇರಿ ದೂ.ಸಂ.08473 251114, ಮೊ.ನಂ.9480803534,
ವಡಗೇರಾ ಪಿ.ಎಸ್.ಐ ಪೊಲೀಸ್ ಠಾಣೆ ಮೊ.ನಂ.9480803577ಗೆ ಮಾಹಿತಿ ನೀಡಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:ಶಿವರಾಜ ಸಾಹುಕಾರ್ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ