ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನಕ್ಷ ಮೆಟ್ಯಾಲ್

ಬೆಳಗಾವಿ/ ಬೈಲಹೊಂಗಲ: ಪಂಜಾಬ್ ನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೈಲಹೊಂಗಲದ ತಿರಂಗಾ ಕರಾಟೆ ಅಕಾಡೆಮಿ ಕರಾಟೆ ಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಭರ್ಜರಿ ಪದಕ ಬೇಟೆಯಾಡಿಯಾಡಿದ್ದು ಬೈಲಹೊಂಗಲ ಪಟ್ಟಣದ ಪ್ರಭು ನಗರದ ಮಾಜಿ ಯೋಧ ಸಂತೋಷ ಮೆಟ್ಯಾಲ್ ಸುಪುತ್ರ ನಕ್ಷ ಮೆಟ್ಯಾಲ್ ಈ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟದಲ್ಲಿ ಬೈಲಹೊಂಗಲದ ಕೀರ್ತಿ ಹೆಚ್ಚಿಸಿದ್ದಾರೆ.

ಪಂಜಾಬ್ ರಾಜ್ಯದ ಕಪುರ್ಥಾಲಾ ಜಿಲ್ಲೆಯ ಸುಲ್ತಾನಪುರ ಲೋಧಿಯಲ್ಲಿ ಕಳೆದ ಏಪ್ರಿಲ್ 25 ರಿಂದ 27ರವರೆಗೆ ಆಲ್ ಗೋಜು ಆರ್.ವಾಯ್.ಯು. ಕರಾಟೆ ಫೆಡರೇಷನ್‌ ಆಫ್ ಇಂಡಿಯಾ ಕರಾಟೆ ಇಂಡಿಯಾ ಆರ್ಗನೈನೇಷನ್, ವರ್ಡ್ಲ್ ಗೋಜು ಆರ್.ವಾಯ್.ಯು. ಕರಾಟೆ ಯೂನಿಯನ್ ಹಾಗೂ ಏಷಿಯನ್ ಗೋಜು ಆರ್.ವಾಯ್.ಯು. ಕರಾಟೆ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ 2ನೇ ಆಲ್ ಗೋಜು ಆರ್‌‌.ವಾಯ್.ಯು. ನ್ಯಾಶನಲ್ ಕರಾಟೆ ಚಾಂಪಿಯನ್ ಶಿಪ್ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬೈಲಹೊಂಗಲದ ತಿರಂಗಾ ಕರಾಟೆ ಅಕಾಡೆಮಿ 16 ಕರಾಟೆ ಪಟುಗಳು 6 ಬಂಗಾರ, 6 ಬೆಳ್ಳಿ ಹಾಗೂ 10 ಕಂಚಿನ ಪದಕಗಳನ್ನು ಗೆದ್ದು ಸಾಧನೆ ಮೆರೆದಿದ್ದಾರೆ.

ನಕ್ಷ ಮೆಟ್ಯಾಲ್ 2 ಚಿನ್ನ, ಪ್ರಣವ್ ಅಂಗಡಿ 1 ಚಿನ್ನ-1 ಕಂಚು, ನಿಕೇತನ್ 1 ಚಿನ್ನ, ಕಾರ್ತಿಕೇಯ್ ಎಸ್ 1 ಕಂಚು-1 ಬೆಳ್ಳಿ, ಆಹನ್ ಸಾಧುನವರ 2 ಕಂಚು, ವಿಧಿ ಭಟ್ 1 ಚಿನ್ನ, ಕರಣ್ ಶ್ರೇಷ್ಠಾ 1 ಬೆಳ್ಳಿ, ಸುಬ್ರಮಣ್ಯ ಎಚ್ 1 ಕಂಚು, ಯುಕ್ತಿ ಹೊಸುರ 1 ಬೆಳ್ಳಿ, ಪ್ರಣದ್ ಜಿ 1 ಬೆಳ್ಳಿ, ಪ್ರಣವ್ ಜಿ 1 ಕಂಚು, ಸಿದ್ಧಾರೂಢ ಮೇಟ್ಯಾಲ್ 1 ಕಂಚು, ಜ್ಯೋತಿ 1 ಬೆಳ್ಳಿ, ನಂದನ್ 1 ಕಂಚು, ಭುವನ್ ಹೊಳಿ 1 ಕಂಚು, ಅಕ್ಷಯ್ ಮೇಟ್ಯಾಲ್ 1 ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.ಮಕ್ಕಳ ಸಾಧನೆಗೆ ಪೋಷಕರು, ಅಕಾಡೆಮಿ ಆಡಳಿತ ಮಂಡಳಿ, ತರಬೇತಿದಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ : ಭೀಮಸೇನ ಕಮ್ಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ