ಬಳ್ಳಾರಿ / ಕಂಪ್ಲಿ : ನಗರದ ಅಂಬೇಡ್ಕರ್ ವೃತ್ತದ ಬಳಿಯಲ್ಲಿರುವ ಬೃಹತ್ ಕಟೌಟ್ ಮುಂಭಾಗದಲ್ಲಿ ಬಳ್ಳಾರಿ ಜಿಲ್ಲಾ ವೀರಶೈವ ಲಿಂಗಾಯತ ಮಹಾವೇಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ನೇತೃತ್ವದಲ್ಲಿ ಜನಪ್ರಿಯ ನಾಯಕ, ಅಭಿವೃದ್ಧಿಯ ಹರಿಕಾರ ಶಾಸಕ ಜಯನ್ ಗಣೇಶ್ ಸಮ್ಮುಖದಲ್ಲಿ ಅವರ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುವ ಜೊತೆಗೆ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಲೇಖನಿ ಸಾಮಗ್ರಿಗಳನ್ನು ಸೋಮವಾರ ವಿಸ್ತರಿಸಲಾಯಿತು.
ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ಮಾತನಾಡಿ ಶಾಸಕ ಜೆ.ಎನ್. ಗಣೇಶ ರವರು ಕಂಪ್ಲಿ ಕ್ಷೇತ್ರದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಜೊತೆಗೆ ಸಾಕಷ್ಟು ನಾನ ಅಭಿವೃದ್ಧಿ ಕಾರ್ಯಗಳೊಂದಿಗೆ ಜನ ಮೆಚ್ಚಿದ ನಾಯಕರಾಗಿದ್ದಾರೆ ಇಂತಹ ಶಾಸಕರು ಸಿಕ್ಕಿದ್ದೇ ನಮ್ಮ ಪುಣ್ಯ. ಸತತ ಸಮಾಜಸೇವೆಗೆ ತಮ್ಮ ಜೀವನವನ್ನೇ ಮೃಪಾಗಿಟ್ಟಿದ್ದಾರೆ ಅವರಿಗೆ ದೇವರು ಇನ್ನಷ್ಟು ಶಕ್ತಿ ಆಯುಷ್ಯ ಆರೋಗ್ಯ ಕಲ್ಪಿಸಲಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಗಲಿ ಎಂದು ಶುಭ ಹಾರೈಸಿದರು.
ನಂತರ ಶಾಸಕ ಜೆ. ಎನ್. ಗಣೇಶ ಮಾತನಾಡಿ ಕ್ಷೇತ್ರದ ಜನರ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ ಕಂಪ್ಲಿ ಕ್ಷೇತ್ರದ ಜನರ ಕೆಲಸ ಮಾಡುವುದಕ್ಕಾಗಿ ಬಂದಿರುವೆ ಅದರಂತೆ ಸತತ ಎರಡು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡುವ ಮೂಲಕ ತಮ್ಮ ಸೇವೆಗೆ ಅನುವು ಮಾಡಿಕೊಟ್ಟಿದ್ದು ಸಮಾಜ ಸೇವೆಗೆ ಶ್ರಮಿಸುವುದು ನನ್ನ ಕರ್ತವ್ಯವಾಗಿದೆ ಎಂದರು.
ಜೂನ್ 5ರಂದು ಶಾಸಕ ಗಣೇಶ ಅವರ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಕೇಕ್ ಕತ್ತರಿಸಿ ವಿಶ್ವಗುರು ಬಸವಣ್ಣನ ನೆನಪಿನ ಕಾಣಿಕೆ ನೀಡುವ ಮೂಲಕ ಸಂಭ್ರಮದಿಂದ ಜನ್ಮದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಿ. ಪ್ರಸಾದ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್ ಸದಸ್ಯರಾದ ಸಿಆರ್ ಹನುಮಂತ, ಮೌಲ, ವೀರಾಂಜನೇಯ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಮುಖಂಡರಾದ ಗಂಗಾಧರ ಮೆಟ್ರಿ, ರಾಜಪ್ಪ, ಬಳೆ ಮಲ್ಲಿಕಾರ್ಜುನ, ಪ್ರಮೋದ ಭಟಾರಿ, ಜಿ. ಮರೆಗೌಡ, ಬಿ. ಜಾಫರ, ರಮೇಶ ನಾಯಕ್, ಕಾಳಿಂಗ ವರ್ಧನ್ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
