ಬೆಂಗಳೂರು / ನೆಲಮಂಗಲ: ನಿನ್ನೆ ಅಹಲ್ಯಾಬಾಯಿ ಹೋಲ್ಕರ್ ರವರ 300 ನೇ ಜಯಂತೋತ್ಸವ ಹಿನ್ನಲೆ ರೋಡ್ ಶೋನಲ್ಲಿ ಡಿ.ಜೆ ಬಳಕೆಗೆ ಅನುಮತಿ ನೀಡದ ಪೋಲೀಸರು, ಬಿಜೆಪಿ ನಾಯಕರು ಮತ್ತು ಪೊಲೀಸರ ನಡುವೆ ವಾಕ್ಸಮರ
ನೆಲಮಂಗಲ ನಗರದ ಜಯದೇವ ವೀರಶೈವ ಸಮುದಾಯ ಭವನದಲ್ಲಿ ಅಹಲ್ಯಾಬಾಯಿ ಹೋಲ್ಕರ್ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಹಿನ್ನಲೆ ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರನ್ನ ಸ್ವಾಗತಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಒಂದೆಡೆ ಸಮಾವೇಶಗೊಂಡು ರ್ಯಾಲಿ ಮೂಲಕ ಕರೆತರಲು ಯೋಜನೆ ರೂಪಿಸಿದ್ದರು. ಅದರಂತೆ ಡಿಜೆ ಹಾಕಿಕೊಂಡು ರ್ಯಾಲಿಗೆ ಸಜ್ಜಾಗಿದ್ದ ವೇಳೆ ನೆಲಮಂಗಲ ನಗರ ಠಾಣಾ ಪೊಲೀಸರು ಡಿ. ಜೆ ಹೊರತು ಪಡಿಸಿ ಕೇವಲ ಮೈಕ್ ಬಳಸುವಂತೆ ಸೂಚನೆ ನೀಡಿದ್ರು, ಪೊಲೀಸರ ಆಗ್ರಹಕ್ಕೆ ಮಣಿಯದ ಸ್ಥಳೀಯ ಬಿ.ಜೆ.ಪಿ ನಾಯಕರು ಮತ್ತು ಕಾರ್ಯಕರ್ತರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು.
ಈ ನಡುವೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಗಾತ್ರದ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ರೋಡ್ ಶೋನಲ್ಲಿ ರಾಜ್ಯಾಧ್ಯಕ್ಷರಿಗೆ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದರಿ, ರಾಜ್ಯ ವಕ್ತಾರ ದೊಡೇರಿ ವೆಂಕಟೇಶ್, ನೆಲಮಂಗಲ ಯೋಜನಾ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಮಲ್ಲಣ್ಣ ಸಾಥ್ ನೀಡಿದರು.
ಇನ್ನೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜಯೇಂದ್ರ, ನಾನು ರಾಜ್ಯದ ಜವಾಬ್ದಾರಿ ಹೊತ್ತ ಬಳಿಕ ಮೊದಲ ಬಾರಿಗೆ ನೆಲಮಂಗಲಕ್ಕೆ ಆಗಮಿಸಿದ್ದೇನೆ. ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಲ್ಕರ್ ರವರ 300ರ ಜನ್ಮದಿನವನ್ನು ಅರ್ಥಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ಯಶಸ್ವಿಯಾಗಿ ಆಚರಣೆ ಮಾಡ್ತಿದ್ದೇವೆ. ಅಹಲ್ಯಾಬಾಯಿ ಓರ್ವ ವೀರ ಮಹಿಳೆ, ಔರಂಗಜೇಬನ ಮಟ್ಟ ಹಾಕೋ ನಿಟ್ಟಿನಲ್ಲಿ ಹೋರಾಟ ಮಾಡಿದ ವೀರ ನಾರಿ, ಮೊಘಲರು ಹಿಂದೂ ಸಮಾಜದ ದೇವಾಲಯಗಳನ್ನು ಧ್ವಂಸ ಮಾಡಿದರು, ಅಂತಹ ಸಮಯದಲ್ಲಿ ಅಹಲ್ಯಾಬಾಯಿ ದೇವಾಲಯಗಳನ್ನು ಪುನಶ್ಚೇತನಗೊಳಿಸಿದರು ಎಂದರು.
ಯಡಿಯೂರಪ್ಪ ಸಿ. ಎಂ. ಆಗಿದ್ದಾಗ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ನೀಡಿದ್ರು, ಆ ಯೋಜನೆ ಮೂಲಕ ಬಡವರ ಮನೆಗೆ ಹೆಣ್ಣು ಮಕ್ಕಳು ಶಾಪ ಅಲ್ಲ ಅಂದ್ರು, ಮಾನ್ಯ ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಶ್ಮೀರದಲ್ಲಿ 26 ಭಾರತೀಯರ ಹತ್ಯೆ ಆಯ್ತು, ಪತಿಯನ್ನು ಕಳೆದುಕೊಂಡ ಹೆಣ್ಣು ಮಕ್ಕಳು ವಿಧವೆಯಾದ್ರು, ಉಗ್ರಗಾಮಿಗಳಿಗೆ ಆಪರೇಷನ್ ಸಿಂಧೂರದ ಮೂಲಕ ತಕ್ಕ ಉತ್ತರ ನೀಡಿ, ದೇಶದ್ರೋಹಿಗಳ ಅಡಗುತಾಣಗಳನ್ನು ಧ್ವಂಸಗೊಳಿಸಿದ ಉಗ್ರಗಾಮಿಗ ಮೇಲೆ ನಮ್ಮ ಯೋಧರು ದಾಳಿ ನಡೆಸಿ ಸದೆ ಬಡಿದರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿಂದ
ಸಿದ್ದರಾಮಯ್ಯ ಸರ್ಕಾರ ದರ್ಪ, ಅಧಿಕಾರ ದುರ್ಭಳಕೆ ಮಾಡಿಕೊಂಡು ಪಾಳೆಗಾರಿಕೆ ಮಾಡುತ್ತಿದ್ದಾರೆ, ಹಿಂದೂ ಕಾರ್ಯಕರ್ತರನ್ನ ಹೆದರಿಸುತ್ತಿದೆ, ಮಂಗಳೂರಲ್ಲಿ ಹಿಂದೂಗಳ ಮೇಲೆ ಕೇಸ್ ಮಾಡಿ ಸಿದ್ದರಾಮಯ್ಯ ಸರ್ಕಾರ ಗೂಂಡಾ ವರ್ತನೆ ತೋರುತ್ತಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುತ್ತೆ ಎಂದರು.
ನಟ ಕಮಲ್ ಹಾಸನ್ ಬಗ್ಗೆ ವಿಜಯೇಂದ್ರ ವಾಗ್ದಾಳಿ…
ನಟ ಕಮಲ್ ಹಾಸನ್ ತಮಿಳು ಭಾಷೆ ಬಗ್ಗೆ
ಪ್ರೀತಿ ಇರಬಹುದು, ಆದ್ರೆ ಸರಿಯಾದ ಮಾಹಿತಿ ಇಲ್ಲದೆ ಹೇಳಿಕೆ ಕೊಟ್ಟಿರೋದು ಅಕ್ಷಮ್ಯ ಅಪರಾಧ, ಉದ್ಧಟತನ ಬಿಟ್ಟು ಕ್ಷಮೆಯಾಚಿಸಬೇಕು, ಉಚ್ಚನ್ಯಾಯಾಲಯ ಹೇಳಿರೋದು ಸ್ವಾಗತಾರ್ಹ, ಆಗಿರೋ ತಪ್ಪನ್ನ ತಿದ್ದೊಂಡು ಕ್ಷಮೆ ಕೇಳಬೇಕೆಂದು ನೆಲಮಂಗಲದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
- ಕರುನಾಡ ಕಂದ
