ಕಳೆದ ಬಾರಿ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಮಹೇಶ ಕುಮಟಳ್ಳಿ ಸೋಲಿನ ನಂತರವೂ ಅಥಣಿ ಬಿಜೆಪಿಯಲ್ಲಿ ಗುಂಪುಗಾರಿಕೆ ಮುಂದುವರೆದಿದೆ ಆಗಾಗ ಒಗ್ಗಟ್ಟಿನ ಮಾತುಗಳು ಕೇಳಿ ಬರುತ್ತವೆ ಆದರೆ ವಾಸ್ತವದಲ್ಲಿ ಹಾಗಿಲ್ಲ ಹಲವಾರು ಬಾರಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಬಂದು ಹೋದರೂ ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು ಆದರೆ ಅವರ ಯಾವ ಕಾರ್ಯಕ್ರಮದಲ್ಲಿಯೂ ಕ್ಷೇತ್ರದ ನಾಯಕರು ಒಂದೆಡೆ ಸೇರಿದ್ದು ಕಂಡು ಬರಲಿಲ್ಲ ಒಬ್ಬರದು ಒಂದೊಂದು ದಿಕ್ಕಾಗಿತ್ತು.
ಗೋಕಾಕ ಶಾಸಕರು ಬಂದಾಗ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಪಕ್ಷಕ್ಕೆ ಸಂಬಂಧ ಪಡದ ನಾಯಕರುಗಳು ಬಿಜೆಪಿ ಪ್ರಮುಖ ನಾಯಕರಂತೆ ವರ್ತಿಸುತ್ತಾರೆ ಆದರೆ ಪಕ್ಷದ ಪ್ರಮುಖ ಜಿಲ್ಲಾ ನಾಯಕರು ಬಂದಾಗ ಮೂಲ ಬಿಜೆಪಿ ಮತ್ತು ಸಂಘ ಪರಿವಾರದವರನ್ನು ಬಿಟ್ಟರೆ ಮಂಡಲ ಸದಸ್ಯರು ಸಹ ಯಾರೂ ಕಾಣಿಸಿಕೊಳ್ಳಲೂ ಇಲ್ಲ, ಕಾರ್ಯಕ್ರಮ ಆಯೋಜನೆ ವೈಯಕ್ತಿಕ ವರ್ಚಸ್ಸಿನ ಮೇಲೆಯೇ ಆಯೋಜಸಿದ್ದು ಎಲ್ಲವೂ ಸರಿ ಇಲ್ಲ ಎನ್ನುವುದನ್ನು ತೋರಿಸಿತು.
ಇತ್ತೀಚೆಗೆ ಶಾಸಕ ರಮೇಶ ಜಾರಕಿಹೊಳಿ ಮಾಜಿ ಶಾಸಕರು ಸೇರಿದಂತೆ ಎಲ್ಲರೂ ಚುರುಕಿನಿಂದ ಕಾರ್ಯ ನಿರ್ವಹಿಸಬೇಕು ಇಲ್ಲದಿದ್ದರೆ ಜಾಗ ಖಾಲಿ ಮಾಡಬೇಕು ಎಂದು ಎಚ್ಚರಿಸಿದರು, ಕಾರ್ಯಕರ್ತರ ದೂರು ದುಮ್ಮಾನಗಳನ್ನು ಆಲಿಸಿದರೂ ಸದ್ಯಕ್ಕೆ ಪ್ರಯೋಜನವಂತೂ ಆಗಿಲ್ಲ ಆದರೆ ಮುಂದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು
ಮಂಡಲ ಪದಾಧಿಕಾರಿಗಳ ರಾಜೀನಾಮೆ ನೀಡಲಾಗಿದೆ, ಹೊಸ ನೇಮಕವಾಗಬೇಕಿದೆ ಬದಲಾವಣೆ ಅನಿವಾರ್ಯವಾಗಿದೆ, ಹಿಂದೆಲ್ಲಾ ಪಕ್ಷದಿಂದ ಅನುಕೂಲ ಮಾಡಿಕೊಂಡವರು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಜಾರಕಿಹೊಳಿ ಕುಟುಂಬದ ಅನ್ಯಪಕ್ಷದವರು ಬಂದಾಗಲೂ ಸಹ ಇವರು ಅಲ್ಲಿಯೂ ಕಾಣಿಸಿಕೊಳ್ಳತ್ತಾರೆ ಹೀಗಾಗಿ ಪರಿವಾರದ ಯಾರೊಬ್ಬರೂ ಕಾಣಿಸಿಕೊಳ್ಳುತ್ತಿಲ್ಲ,
ಕ್ಷೇತ್ರದಲ್ಲಿ ಒಬ್ಬೊಬ್ಬರು ನಾಯಕರದ್ದೂ ಒಂದೊಂದು ಗುಂಪಿದೆ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಜನರು ಸಮಸ್ಯೆಗಳ ಪರಿಹಾರಕ್ಕಾಗಿ ಕಾಯತ್ತಿದ್ದಾರೆ ಆಡಳಿತ ನಡೆಸುವವರು ಸ್ಪಂದಿಸುತ್ತಿಲ್ಲ ಜನಪರ ಹೋರಾಟ ನಡೆಸಬೇಕಿದ್ದ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಕೆಲ ನಾಯಕರು ಆಗೊಂದು ಈಗೊಂದು ಈ ಬಗೆಗೆ ಪತ್ರಿಕಾ ಹೇಳಿಕೆ ನೀಡುತ್ತಾರೆ, ಉಳಿದಂತೆ ಪಕ್ಷದ ಇನ್ನೊಂದು ಗುಂಪಿನ ಸದಸ್ಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಕೈತೊಳೆದುಕೊಳ್ಳುತ್ತಾರೆ.
ಎಲ್ಲರೂ ಒಗ್ಗಾಟಾಗಿ ಒಂದೇ ವೇದಿಕೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತನಕ ಹೋರಾಟ ಮಾಡಿದ ಉದಾಹರಣೆಯೇ ಇಲ್ಲ, ಹಿಂದೆ ಅಥಣಿ ಬಿಜೆಪಿಯ ಭದ್ರಕೋಟೆಯಗಿತ್ತು ಆದರೆ ಈಗ ಅದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ವಶದಲ್ಲಿದೆ. ಮೂಲ ಬಿಜೆಪಿ ಮತ್ತು ಸಂಘ ಪರಿವಾರದ ದಂಡೆ ಇದೆ. ಆದರೂ ನಮ್ಮನ್ನು ಕೇಳುವವರಿಲ್ಲ ಎಂಬುದು ಕಾರ್ಯಕರ್ತರ ದೂರು ಸಾಮನ್ಯವಾಗಿದೆ. ತಾಲೂಕ ಮಟ್ಟದ ಪದಾಧಿಕಾರಿಗಳಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ, ಬಿಜೆಪಿಯ ಯಾರೇ ಪ್ರಮುಖ ನಾಯಕರು ಅಥಣಿಗೆ ಬಂದಾಗ ಪಕ್ಷದ ಕಛೇರಿಗೆ ಭೇಟಿ ನೀಡುವದು ವಾಡಿಕೆ ಆ ಕುರಿತು ಕಾರ್ಯಕರ್ತರ ಅಸಮಧಾನವಿದೆ. “ಬಿಜೆಪಿ ಪಕ್ಷವನ್ನು ಕಾಂಗ್ರೆಸ್ ನವರು ಸೋಲಿಸಲಿಲ್ಲ ಬಿಜೆಪಿಯವರೇ ಸೋಲಿಸಿದ್ದಾರೆ” ಎಂಬುದು ಶ್ರೀ ಸಾಮಾನ್ಯನಿಗೂ ಗೊತ್ತು ಕ್ಷೇತ್ರದಲ್ಲಿ ಕೆಲವರು ಹೆಸರಿಗಷ್ಟೇ ಪದಾಧಿಕಾರಿಗಳು ಆಗಿದ್ದಾರೆ, ಕಾಲೆಳೆಯುವ ತಂತ್ರ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುವುದು ಯಾವಾಗ ಎಂಬುದು ಕಾರ್ಯಕರ್ತರ ಪ್ರಶ್ನೆ.
- ಕರುನಾಡ ಕಂದ
