ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆರ್.ಪಿ.ಡಿ ಟಾಸ್ಕ್ ಪೋರ್ಸ್ ಗುರುಮಠಕಲ್ ತಾಲೂಕ ಅಂಗವಿಕಲರ ಒಕ್ಕೂಟ ವತಿಯಿಂದ ವಾರ್ಷಿಕ ಸಾಧನ ಹಾಗೂ ಮುಂದಿರುವ ಸವಾಲುಗಳ ಕುರಿತಾದ ಸಭೆ

ಯಾದಗಿರಿ/ಗುರುಮಠಕಲ್: ಇಂದು ಗುರುಮಠಕಲ್ ತಾಲೂಕಿನ ಅಂಗವಿಕಲರ ಒಕ್ಕೂಟ ವತಿಯಿಂದ ವಾರ್ಷಿಕ ಸಾಧನ ಹಾಗೂ ಮುಂದಿರುವ ಸವಾಲುಗಳ ಕುರಿತಾದ ಸಭೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದು ಕರೆಯಲಾಗಿತ್ತು.

APD ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಜಿಲ್ಲೆಯ ಅಧಿಕಾರಿಗಳಾದ ಶ್ರೀ ರಮೇಶ ದುಂಡಪ್ಪ ಹಾಗೂ ಶ್ರೀ ಸಂಜಿವ್ ಕುಲಕರ್ಣಿ ಅಜೀಮ್ ಪ್ರೇಮ್ ಜಿ ಫೌಂಡೇಷನ್ ವ್ಯವಾಸ್ಥಾಪಕರು. APD ಸಂಸ್ಥೆಯ ಶ್ರೀ ನಾಗಪ್ಪ ಜಿ.ಅವಟಿ ನೀತಿ ಮತ್ತು ವಕಾಲತ್ತು ವಿಭಾಗ ಮುಖ್ಯಸ್ಥರು. ಕು.ಸಂಪ್ರತಾ,LCA ಕಾರ್ಯಕ್ರಮದ ವ್ಯವಸ್ಥಾಪಕರು, ವಿರುಪಾಕ್ಷ ಮಾಲಿ ಪಾಟೀಲ ತಾಲೂಕ ಸಂಯೋಜಕರು, ಸಿದ್ದನಗೌಡ ನಜರಪೂರ ತಾಲೂಕ RPD ಟಾಸ್ಕ್ ಫೋರ್ಸ್ ಆಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು, ತಾಲೂಕಿನ ವಿವಿಧ ಗ್ರಾಮ ಪಂಚಾಯತಿ VRW (Village Rehabilitation Worker) and URW (Urban Rehabilitation Worker) ಗಳಾದ ಶ್ರೀ ಕುಮಾರ, ಶಿಲ್ಪಾ, ರೇಷ್ಮಾ, ನಾಗಮಣಿ, ಸುರೇಶ, ಗಂಗಪ್ಪ ,ಹನುಮಂತ, ಮಲ್ಲಿಕಾರ್ಜುನ ಸೇರಿದಂತೆ ಆರ್.ಪಿ.ಡಿ ಟಾಸ್ಕ್ ಪೋರ್ಸ್ ಗುರುಮಠಕಲ್ ಸದಸ್ಯರು ಮತ್ತು ತಾಲೂಕಿನ ವಿವಿಧ ಕಡೆಗಳಿಂದ ಇಂದು ವಿಕಲ ಚೇತನರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಾರ್ಷಿಕ ಸಭೆಯ ಉದ್ದೇಶಿಸಿ ಮಾತನಾಡಿದ APD ತಾಲೂಕಿನ ಸಂಯೋಕರಾದ ವಿರುಪಾಕ್ಷ ಮಾಲಿಪಾಟೀಲ ಆರ್.ಪಿ.ಡಿ ಟಾಸ್ಕ್ ಪೋರ್ಸ್ ಗುರುಮಠಕಲ್ ತಾಲೂಕ ಅಂಗವಿಕಲರ ಒಕ್ಕೂಟ ಒಂದು ವರ್ಷ ಪೂರ್ಣಗೊಂಡಿದ್ದು, ಈ ಒಂದು ವರ್ಷದ ಅವಧಿಯಲ್ಲಿ ಆರ್.ಪಿ.ಡಿ ಟಾಸ್ಕ್ ಪೋರ್ಸ್ ಗುರುಮಠಕಲ್ ವತಿಯಿಂದ ಎಲ್ಲಾ 21 ಭಾಗೆಯ ವಿಕಲಚೇತನರ ಸಮೃದ್ಧಿಗೆ ಕೈಗೊಂಡಿರುವ ಕಾರ್ಯಗಳ ಕುರಿತು ವಿವರ ನೀಡಿದರು.

ನಗರ ಹಳ್ಳಿ ಮತ್ತು ಪಂಚಾಯತಿ ಪಟ್ಟದಲ್ಲಿ ವಿಕಲಚೇತನರ ಸ್ವ-ಸಹಾಯ ಸಂಘಗಳ ಗುಂಪು ರಚನೆ ಮತ್ತು ಸದಸ್ಯರ ಬಲವರ್ಧನೆ ಕುರಿತಾಗಿ, ಗ್ರಾಮಿಣ ಅಂಗವಿಕಲರ ಪುರ್ನವಸತಿ ಕಾರ್ಯಕ್ರಮಕ್ಕೆ ಸಹಕಾರ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ವೈದ್ಯಕೀಯ, ಮತ್ತು ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ವಿಕಲಚೇತನರ ಪುನ:ಶ್ವೇತನದಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುವುದರ ಕುರಿತಾಗಿ, ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವುದು ,ಸರಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿಕಲಚೇತನರ ಸ್ನೇಹಿ ವಾತಾವರಣವನ್ನು ಖಾತ್ರಿಗೊಳಿಸುವ ಕುರಿತು, ವಿಕಲಚೇತನರ ಪರವಾಗಿರುವ ಕಾಯ್ದೆಗಳು ಮತ್ತು ಇನ್ನೂ ಹಲವು ವಿಕಲಚೇತನರ ಸಮಸ್ಯೆಯನ್ನು ತಳಮಟ್ಟದಿಂದ ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುವುದು, ವಿಕಲಚೇತನರ ಆರೈಕೆದಾರರ ಭತ್ಯ, ಸರ್ಕಾರಿ ಯೋಜನೆಗಳನ್ನು ಸಮಪರ್ಕವಾಗಿ ಸದ್ಬಳಕೆ ಮಾಡುವುದರ ಕುರಿತಾಗಿ ಸಭೆಯಲ್ಲಿ ವಿವರಿಸಲಾಯಿತು.

ಶೇ. 5% ಅನುದಾನದ ಬಗ್ಗೆ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳ ಜೊತೆ ಮಾಹಿತಿ ಪಡೆದು ಸಮರ್ಪಕ ರೀತಿಯಲ್ಲಿ ಅನುದಾನ ಬಳಕೆಗೆ ಮನವಿ ಸಲ್ಲಿಸಲು ತಿರ್ಮಾನ ಕೈಗೊಳ್ಳಲಾಗುವುದು ಎಂದು APD ತಾಲೂಕ ಸಂಯೋಜಕರಾದ ವಿರುಪಾಕ್ಷ ಮಾಲಿ ಪಾಟೀಲ ತಿಳಿಸಿದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ