ಬಳ್ಳಾರಿ / ಕಂಪ್ಲಿ : ಸ್ಥಳೀಯ ಸರ್ಕಾರಿ ಪ್ರಥಮದರ್ಜೆ ಕಾಲೇಜನಲ್ಲಿ ಗುರುವಾರದಂದು ಆಂತರಿಕಗುಣಮಟ್ಟ ಭರವಸ ಕೋಶದಡಿ 2024 – 25ನೇ ಸಾಲಿನ ಸಮಿತಿಗಳ ಮುಕ್ತಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಂಪ್ಲಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೆ.ಎನ್.ಗಣೇಶ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿ
ಕಾಲೇಜಿನ ಅಭಿವೃದ್ಧಿಗೆ ನಮ್ಮ ಸರ್ಕಾರ ಸಾಕಷ್ಟು ಶ್ರಮಿಸಿದ್ದೇವೆ. ಲಭ್ಯ ಸಂಪನ್ಮೂಲ ಬಳಸಿಕೊಂಡು ಗುಣಾತ್ಮಕ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಆಸಕ್ತಿ ತೋರಿಸಬೇಕು.
ಪದವಿ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ ಬೆಳೆದು ಕಾಲೇಜಿಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕು
ಹಾಗೂ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಎಂ.ಎ ಮತ್ತು ಎಂ. ಕಾಂ. ಸ್ನಾತಕ ಪದವಿ ಕೋರ್ಸ್ ಗಳನ್ನು ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಕಾಲೇಜು ಪ್ರಾರಂಭಕ್ಕೆ ಮಾನ್ಯ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದರು.
ಪ್ರಾಂಶುಪಾಲರಾದ ಬಾಲಾಜಿ ಎಂ. ಪಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಮಾತನಾಡಿ ವಿದ್ಯಾರ್ಥಿಗಳಿಗೆ ಸಮಯ ಪಾಲನೆ, ಶಿಸ್ತು ತುಂಬಾ ಮುಖ್ಯ ಅವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಉನ್ನತವಾದ ಸಾಧನೆಯನ್ನು ಮಾಡಲು ಸಾಧ್ಯ ಎಂದು ಹೇಳಿದರು. ಸಂಚಲಕರಾದ ಡಾ. ಮಹೇಶ ಒಂದು ವರ್ಷದ ವಿವಿಧ ಸಮಿತಿಗಳ ವಾರ್ಷಿಕ ಪ್ರಗತಿಯನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ, ಸರಕಾರಿ ಬಾಲಕಿಯರ ಪಿಯು ಕಾಲೇಜಿನ ಪ್ರಾಂಶುಪಾಲ ಮಹಮ್ಮದ ಶಫಿ, ಸಂಶೋಧನೆ ಮತ್ತು ಬಿಡಿ ಲೇಖನಗಳ ಬರವಣಿಗೆಯ ಗೌರವಾರ್ಥವಾಗಿ ಡಾ.ಕೆ ಮಹೇಶ ಹಾಗೂ ಡಾಕ್ಟರೇಟ್ ಪದವಿಯನ್ನು ಪಡೆದ ಡಾ.ಮಮತ ಜಿ.ಎಂ. ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಷಣ್ಮುಖಪ್ಪ, ಪುರಸಭಾ ಸದಸ್ಯ ಕಸಿ. ಆರ್. ಹನುಮಂತ, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಕೆ. ಶಿವಕುಮಾರ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಅಧ್ಯಕ್ಷ ಶರಣಬಸವನಗೌಡ, ಮುಖಂಡರಾದ ಬಿ. ನಾರಾಯಣಪ್ಪ, ಬಿ. ಜಾಫರ ಸಾಧಿಕ್, ಉಪನ್ಯಾಸಕರಾದ ಡಾ.ಜೆ. ಕೃಷ್ಣ, ಡಾ.ಅನ್ನಪೂರ್ಣಗುಡುದೂರು, ರಾಜ್ಮಾಟಿ.ಎಂ.
ಡಾ. ಚಂದ್ರಶೇಖರ್ ಬಿಳೇಗುಡ್ಡ,
ಗ್ರಂಥಪಾಲಕ ಆರ್. ವೀರಭದ್ರಪ್ಪ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಬಿ.ಎ ಮತ್ತು ಬಿ.ಕಾಂ ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳು ಹಾಜರಿದ್ದರು.
ಅತಿಥಿ ಉಪನ್ಯಾಸಕ ಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಯಾದ ಕುಮಾರಿ ದೀಪಿಕಾ ಅವರು ಪ್ರಾರ್ಥನಗೀತೆಯನ್ನು ಹಾಡಿದರು, ಡಾ. ಜೆ. ಕೃಷ್ಣರವರು ಅತಿಥಿಗಳನ್ನು ಸ್ವಾಗತಿಸಿದರು, ಮೈನುದ್ದೀನ್ ಭಾಷ ವಂದಸಿದರು.
ವರದಿ :ಜಿಲಾನಸಾಬ್ ಬಡಿಗೇರ್
