ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ರೈತರ ಹಬ್ಬವಾದ ಕಾರ ಹುಣ್ಣಿಮೆ ಹಬ್ಬವನ್ನು ರೈತರು ಅದ್ದೂರಿಯಿಂದ ಆಚರಿಸುತ್ತಾರೆ ಎತ್ತುಗಳಿಗೆ ಸ್ನಾನ ಮಾಡಿಸಿ ವಿವಿಧ ಬಣ್ಣಗಳಿಂದ ಅಲಂಕರಿಸಿ ಎತ್ತುಗಳನ್ನು ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮುಖಾಂತರ ಆನೆ ಮೂರ್ತಿ ಹತ್ತಿರ ತರುತ್ತಾರೆ ಕೆಂಪಟ್ಟಿಗೆ ಹೋಗುವ ರಸ್ತೆಗೆ ಅಡ್ಡಲಾಗಿ ಬನ್ನಿಯನ್ನೂ ಹಾಕಿರುತ್ತಾರೆ ಆ ಬನ್ನಿಯನ್ನು ಜಿಗಿದುಕೊಂಡು ಎತ್ತುಗಳು ಓಡುತ್ತವೆ ಇದರಿಂದ ರೈತರು ಕಾರ ಹುಣ್ಣಿಮೆಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ಮತ್ತು ಊರಿನ ಎಲ್ಲಾ ಜನರು ಒಂದೇ ಜಾಗದಲ್ಲಿ ಕೂಡಿರುತ್ತಾರೆ, ಎತ್ತುಗಳು ಬನ್ನಿ ಜಿಗಿದ ತಕ್ಷಣವೇ ಜನರು ಆ ಬಣ್ಣವನ್ನು ತೆಗೆದುಕೊಂಡು ಹೋಗುತ್ತಾರೆ. ಆ ಬನ್ನಿಯನ್ನು ತಂದು ತಮ್ಮ ಮನೆಯ ಮೇಲೆ ಎರಚುತ್ತಾರೆ ಇದರಿಂದ ಕಾರ ಹುಣ್ಣಿಮೆ ಹಬ್ಬ ಮುಕ್ತಾಯವಾಗುತ್ತದೆ.
ಈ ಹಬ್ಬದಲ್ಲಿ ಗಣ್ಯ ವ್ಯಕ್ತಿಗಳಾದ ಮಲ್ಲಿಕಾರ್ಜುನ ಪಾಟೀಲ, ಚನ್ನಗೌಡ ಪಾಟೀಲ, ವೀರೇಂದ್ರ ಪಾಟೀಲ, ವಿಠ್ಠಲ ವಾಳಕೆ, ಅಶೋಕ ಖೋಕಾಟೆ, ಅಶೋಕ್ ಚುಬಚೆ, ಮಾಯಪ್ಪ ಗಾಂಜಾಗೋಳ, ಅನಿಲ ಗುರವ ಮತ್ತು ಊರಿನ ಸಮಸ್ತ ನಾಗರಿಕರು ಪಾಲ್ಗೊಂಡಿದ್ದರು.
ವರದಿಗಾರ. ವಿಠ್ಠಲ ಖೋಕಾಟೆ ಅಥಣಿ
