ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೈತರು ಸಂಭ್ರಮಿಸುವ ಹಬ್ಬವೇ ಕಾರ ಹುಣ್ಣಿಮೆ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಎಲ್ಲರೂ ಒಗ್ಗಟ್ಟಿನಿಂದ ಇಡೀ ಗ್ರಾಮವು ಸಂಭ್ರಮಿಸಿದ್ದಾರೆ. ವರ್ಷದ ಮುಂಗಾರಿನಲ್ಲಿ ಬರುವ ಕಾರ ಹುಣ್ಣಿಮೆಯ ಮೊದಲ ಹಬ್ಬವಾಗಿದೆ. ಈ ಕಾರ ಹುಣ್ಣಿಮೆಯನ್ನು ರೈತರು ಸಂಭ್ರಮಿಸುವ ಹಬ್ಬವಾಗಿದೆ. ಈ ಮುಂಗಾರಿನ ಮೊದಲ ಹಬ್ಬವೇ ರೈತರಿಗೆ, ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬವಾಗಿದೆ. ಅನ್ನದಾತ ಎಲ್ಲರಿಗೂ ಅನ್ನವನ್ನು ನೀಡುತ್ತಾನೆ, ಅನ್ನದಾತನಿಗೆ ಸಾಥ್ ಕೊಡುವ ಎತ್ತುಗಳಿಗೆ ಗೌರವಿಸುವ ಸಲುವಾಗಿ ನಮ್ಮ ಹಿರಿಯರು ಕಾರ ಹುಣ್ಣಿಮೆಯನ್ನು ಆಚರಿಸುತ್ತಾ ಬಂದಿದ್ದಾರೆ. ಹೀಗಾಗಿ ಇಂದಿನ ಪೀಳಿಗೆಯವರು ಈ ಕಾರ ಹುಣ್ಣಿಮೆಯನ್ನು ಆಚರಿಸುತ್ತಾ ಬರಬೇಕು ಗ್ರಾಮದ ರೈತರು ಎತ್ತುಗಳಿಗೆ ಬಣ್ಣ ಬಣ್ಣಗಳಿಂದ ಅಲಂಕಾರ ಮಾಡಿ, ಔಷಧಿ ಗುಣವುಳ್ಳ ಘೋಟಿ ಕುಡಿಸಿ, ಪೂಜೆ ಮಾಡಿ ಎತ್ತುಗಳಿಗೆ ಆಹಾರವನ್ನು ಉಣಿಸುವುದು, ಹೋಳಿ ಹುಣ್ಣಿಮೆ ಮೀಸಲು, ಕಾರಹುಣ್ಣಿಮೆ ಎಂಜಲುಯಾಗಿ ರಟಕಲ್ ಗ್ರಾಮದಲ್ಲಿ ಅದ್ದೂರಿಯಾಗಿ ಕಾರ ಹುಣ್ಣಿಮೆ ಆಚರಣೆ ಮಾಡುತ್ತೇವೆ. ಊರಿನ ಚಾಜದ ಗೌಡರಾದ ಸುಭಾಷ ಪಾಟೀಲ್ ರವರ ಮನೆಯಿಂದ ಬಂದು ಊರ ಪ್ರಮುಖ ಬೀದಿಯಲ್ಲಿ ಬಾಜಾ, ಭಜಂತ್ರಿಯೊಂದಿಗೆ ಚಿಕ್ಕ ಅಗಸಿಯಲ್ಲಿ ಕರಿ ಕಡಿಯುವ ಮೂಲಕ ಹನುಮಾನ್ ದೇವಸ್ಥಾನದಲ್ಲಿ ಹೋಗುವ ರೈತರು ಸಂಭ್ರಮಿಸುತ್ತಾರೆ ಮತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು ಎಂದು ವೀರಣ್ಣ ಗಂಗಾಣಿ ರೈತ ತಾಲೂಕಾಧ್ಯಕ್ಷರು ರೈತ ಸೇನೆ ಹಾಗೂ ರೈತ ಸಂಘ ಹೇಳಿದರು.
ಈ ಸಂದರ್ಭದಲ್ಲಿ ರೈತರುಗಳಾದ ಮಹೇಶ್ ಬಿಜ್ಜನಹಳ್ಳಿ, ರೇವಣಸಿದ್ದಪ್ಪ ಕುರಕೋಟ, ಚಂದ್ರಕಾಂತ್ ಭೀಮಳ್ಳಿ ಶಾಂತಯ್ಯ ಸ್ವಾಮಿ, ತಿಪ್ಪಣ್ಣ ಚಿಕ್ಕ ಅಗಸಿ, ಶೇಟಪ್ಪ ದತ್ತರಗಿ ಬಸವರಾಜ ಹಡಪದ,ವೀರಣ್ಣ ಸಿಗಿ,ಹುಚ್ಚಪ್ಪ ಹಂದ್ರಳ್ಳಿ, ನಾಗಯ್ಯ ಸ್ವಾಮಿ,ಹಣಮಂತ ಚಿಕ್ಕಅಗಸಿ. ಪ್ರಕಾಶ್ ಹಲಗಿ, ವೈಜನಾಥ ತಳವಾರ್ ಇನ್ನೂ ಅನೇಕ ರೈತರು ಭಾಗಿಯಾಗಿದ್ದರು.

ವರದಿ ಚಂದ್ರಶೇಖರ್ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ