ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಳೆಗಾಲದಲ್ಲಿ ಈ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಿ …ಖುಷಿ ಖುಷಿಯಾಗಿರಿ!

ಬಿಸಿಲಿನ ಬೇಗೆಯಿಂದ ಬಳಲಿದವರಿಗೆ ಮಳೆ ತಂಪನ್ನು ಹೊತ್ತು ತರುತ್ತದೆ. ಆದರೆ ಎಡೆಬಿಡದೆ ಜಡಿ ಮಳೆ ಸುರಿದಾಗ ಮನಸ್ಸು ಬೋರೆನಿಸುವುದು, ಚಟುವಟಿಕೆಗಳಲ್ಲಿ ಉತ್ಸಾಹ, ಶಕ್ತಿ ಕಳೆದುಕೊಳ್ಳುತ್ತೇವೆ. ತಾಪಮಾನದಲ್ಲಿ ಇಳಿಕೆ ಆದ್ರತೆಯನ್ನು ಹೆಚ್ಚಿಸುತ್ತದೆ, ಸತತವಾಗಿ ದಿನವಿಡೀ ಮಳೆ ಸುರಿಯುತ್ತಿದ್ದರೆ ಉತ್ಸಾಹ ಕುಂದುತ್ತದೆ. ಇಂತಹ ಸಂದರ್ಭದಲ್ಲಿ ದಿನಚರಿಯಲ್ಲಿ ಈ ಆರು ಅಭ್ಯಾಸಗಳನ್ನು ರೂಢಿಸಿಕೊಂಡರೆ ನಮ್ಮಲ್ಲಿನ ಶಕ್ತಿ, ಉತ್ಸಾಹ ಕುಂದುವುದಿಲ್ಲ.

ಬಿಸಿ ಪಾನೀಯ ಮೂಲಕ ದಿನ ಆರಂಭಿಸಿ:

ಮಳೆಗಾಲದಲ್ಲಿ ಬೆಳಗ್ಗೆ ಎದ್ದು ಬಿಸಿ ಪಾನೀಯ ಸೇವಿಸುವ ಮೂಲಕ ನಿಮ್ಮ ದಿನಚರಿ ಆರಂಭಿಸುವುದರಿಂದ ನಿಮ್ಮ ದೇಹದ ಜೀರ್ಣಕ್ರಿಯೆ ಉತ್ತಮವಾಗುವುದಲ್ಲದೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ಹರ್ಬಲ್ ಟೀಗೆ ಶುಂಠಿ ಅಥವಾ ಒಂದೆರಡು ಎಸಳು ತುಳಸಿ ಎಲೆ ಹಾಕಿ ಕುಡಿಯುವುದರಿಂದ ದೇಹದ ಶಕ್ತಿಯ ಮಟ್ಟ ಸುಧಾರಿಸುತ್ತದೆ.
ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಕಟಗೊಂಡ ಒಂದು ಅಧ್ಯಯನ ಪ್ರಕಾರ, ಶುಂಠಿ ಹಾಕಿದ ಚಹಾ ಸೇವಿಸುವುದರಿಂದ ದೇಹದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ. ಇಂತಹ ಸಣ್ಣ ಅಭ್ಯಾಸಗಳು ನಿಮ್ಮ ಮೂಡ್ ನ್ನು ಚುರುಕಾಗಿ ಇರಿಸುವುದಲ್ಲದೆ ದೇಹದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಶಕ್ತಿ ನೀಡುವ ಆಹಾರ ಪದಾರ್ಥ ಸೇವಿಸಿ :

ನಾವು ಸೇವಿಸುವ ಆಹಾರ ಸಮತೋಲಿತ ಪೌಷ್ಠಿಕಾಂಶಭರಿತ ಆಹಾರವಾಗಿದ್ದರೆ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಓಟ್ಸ್, ಕೆಂಪು ಅಕ್ಕಿ, ಇಡಿ ಗೋಧಿ ಸೇವನೆ ದೇಹಕ್ಕೆ ಬಹಳ ಉತ್ತಮ. ತಾಜಾ ಹಣ್ಣು, ತರಕಾರಿಗಳು, ವಿಟಮಿನ್, ಖನಿಜಭರಿತ ಆಹಾರಗಳು ಆಯಾಸ ವನ್ನು ಕಡಿಮೆ ಮಾಡುತ್ತದೆ.
ಕಬ್ಬಿಣದ ಅಂಶ ಹೆಚ್ಚಾಗಿರುವ ಹಣ್ಣು, ತರಕಾರಿಗಳು ಮಳೆಗಾಲದಲ್ಲಿ ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಸಾಕಷ್ಟು ನೀರು ಕುಡಿಯಿರಿ, ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಸುಸ್ತು, ಬಳಲಿಕೆ ಹೆಚ್ಚಾಗುತ್ತದೆ.

ಮಳೆಗಾಲದಲ್ಲಿ ಒಳಾಂಗಣ ಚಟುವಟಿಕೆಗೆ ಆದ್ಯತೆ ನೀಡಿ:

ಹೊರಗೆ ವಾತಾವರಣದಲ್ಲಿ ಧೋ ಎಂದು ಮಳೆ ಸುರಿಯುವಾಗ, ತೇವಾಂಶ ಹವಾಮಾನದಲ್ಲಿ ಹೊರಗೆ ಓಡಾಟ ಅಸಾಧ್ಯವಾದಾಗ ಮನೆಯೊಳಗೆ ವ್ಯಾಯಾಮ, ಯೋಗಾಭ್ಯಾಸ ನಡೆಸಿ.
ದೇಹದ ವರ್ಕೌಟ್ ಮಾಡಿ, ಇದರಿಂದ ಶಕ್ತಿ ಹೆಚ್ಚುತ್ತದೆ. ಎಂಡೋರ್ಫಿನ್ ಮಟ್ಟ ಹೆಚ್ಚಾಗಿ ನಿಮ್ಮ ಮೂಡ್ ಮತ್ತು ಶಕ್ತಿ ಹೆಚ್ಚುತ್ತದೆ. ವ್ಯಾಯಾಮ ಕುರಿತು ಅಮೆರಿಕನ್ ಕೌನ್ಸಿಲ್ ನಡೆಸಿರುವ ಅಧ್ಯಯನ ಪ್ರಕಾರ, ಮಳೆಗಾಲ ದಲ್ಲಿ ಹೊರಗಿನ ಚಟುವಟಿಕೆಯಷ್ಟೇ ಮನೆಯೊಳಗಿನ ಚಟುವಟಿಕೆ ಕೂಡ ಮುಖ್ಯವಾಗುತ್ತದೆ.

ರಿಲ್ಯಾಕ್ಸ್ ಆಗುವ ತಂತ್ರಗಳನ್ನು ರೂಢಿಸಿಕೊಳ್ಳಿ :

ಮಳೆಗಾಲದಲ್ಲಿ ಮೂಡ್ ಸ್ವಿಂಗ್ ಆಗುವುದು, ಆಗಾಗ ಬೇಸರ, ಉದಾಸೀನವಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಯೋಗ, ದೀರ್ಘ ಉಸಿರಾಟ, ಧ್ಯಾನ ಮಾಡುವುದು, ಸಂಗೀತ ಕೇಳುವುದು, ನೃತ್ಯ ಮಾಡುವುದು ಇತ್ಯಾದಿ ಅಭ್ಯಾಸಗಳನ್ನು ಮಾಡಿದರೆ ನಿಮ್ಮಲ್ಲಿ ಸಹಜವಾಗಿ ಉತ್ಸಾಹ ಹೆಚ್ಚುತ್ತದೆ.
ಕ್ಲಿನಿಕಲ್ ಸೈಕಾಲಜಿ ವೃತ್ತಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ಪ್ರಕಾರ, ದೇಹ ಮತ್ತು ಮನಸ್ಸಿಗೆ ಸಾಕಷ್ಟು ಸಕಾರಾತ್ಮಕ ಚಟುವಟಿಕೆ ಗಳನ್ನು ನೀಡಿದರೆ ಒತ್ತಡ ಕಡಿಮೆಯಾಗಿ ಮಾನಸಿಕವಾಗಿ ಆಹ್ಲಾದಕರ ಸ್ಥಿತಿಯಲ್ಲಿ ದಿನವಿಡೀ ಇರಬಹುದು.​

ಸಾಕಷ್ಟು ನಿದ್ದೆ ಮಾಡಿ :

ಮನುಷ್ಯ ಆರೋಗ್ಯವಾಗಿರಲು, ದಿನವಿಡೀ ಚಟುವಟಿಕೆಯಿಂದ ಇರಲು ಸಾಕಷ್ಟು ನಿದ್ದೆ, ವಿಶ್ರಾಂತಿ ಅಗತ್ಯ. ಸರಿಯಾದ ಹೊತ್ತಿನಲ್ಲಿ ಸಾಕಷ್ಟು ನಿದ್ದೆ ಮಾಡದಿದ್ದರೆ ಸುಸ್ತು, ಬಳಲಿಕೆ ಉಂಟಾಗಬಹುದು.
ಮನುಷ್ಯನಿಗೆ ದಿನದಲ್ಲಿ ರಾತ್ರಿ ವೇಳೆ 7ರಿಂದ 8 ಗಂಟೆ ಕಾಲ ನಿರಂತರ ನಿದ್ದೆ ಸಿಗಬೇಕು, ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗನೆ ಏಳುವ ಅಭ್ಯಾಸ ಉತ್ತಮ.
ನ್ಯಾಶನಲ್ ಸ್ಲೀಪ್ ಫೌಂಡೇಶನ್ ಅಧ್ಯಯನ ಪ್ರಕಾರ, ನಿತ್ಯ ನಿದ್ದೆ ಮಾಡುವ ಸಮಯ ನಿಗದಿತವಾಗಿರಬೇಕು, ಅದನ್ನು ದಿನನಿತ್ಯ ರೂಢಿಸಿಕೊಂಡರೆ ನಿಮ್ಮ ದೇಹ ಅದಕ್ಕೆ ಒಗ್ಗಿಕೊಂಡು ಗುಣಮಟ್ಟದ ನಿದ್ದೆ ಸಿಕ್ಕಿ ದೇಹದ ಆರೋಗ್ಯ ಕೂಡಾ ಚೆನ್ನಾಗಿರುತ್ತದೆ.

ವಿಶೇಶ ಲೇಖನ ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ