ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಾಸಕ ಅಜಯ್ ಸಿಂಗ್ ಯಡ್ರಾಮಿ ವಿರಕ್ತಮಠದ ಆಸ್ತಿಯನ್ನು ಕೂಡಲೇ ಕೈ ಬಿಡಬೇಕು ಶಂಕರ್ ಗೌಡ ಕನ್ನೊಳ್ಳಿ ಆಗ್ರಹ

ಕಲಬುರಗಿ/ ಯಡ್ರಾಮಿ : ಪಟ್ಟಣದ ಶ್ರೀ ಸಿದ್ದಲಿಂಗೆಶ್ವರ ವಿರಕ್ತಮಠದ ಆಸ್ತಿಯನ್ನು ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಅವರು ತಮ್ಮ ತಾಯಿ ಪ್ರಭಾವತಿ ಧರ್ಮಸಿಂಗ್ ಅವರ ಹೆಸರಿನ ಮೇಲೆ ಖರೀದಿಸಿರುವುದು ಖಂಡನೀಯವಾಗಿದೆ ಎಂದು ಯಡ್ರಾಮಿ ತಾಲೂಕ ಸಮಾಜ ಸೇವಕರಾದ ಶಂಕರ್ ಗೌಡ ಕನ್ನೊಳ್ಳಿ ಸುಂಬುಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅವ್ಯವಸ್ಥೆಯ ವಿರುದ್ಧ ಮಠದ ಭಕ್ತ ಸಮುದಾಯ ಹಾಗೂ ಹಾಗೂ ತಾಲೂಕಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಲ್ಲದೆ ಶಾಸಕರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಒಬ್ಬ ತಾಲೂಕಿನ ಜನಪ್ರತಿನಿಧಿಯಾಗಿ ಹೀಗೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಹಣ ಇದ್ದ ಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೆ ಹೇಗೆ ನಿಮಗೆ ಮಿನಿ ವಿಧಾನಸೌಧ ಕಟ್ಟುವುದಕ್ಕೆ ಶ್ರೀ ಮಠದ ಆಸ್ತಿನೆ ಬೇಕಾ ಬೇರೆ ಯಾವ್ದು ಬೇಡ್ವಾ ಎಂದು ಸಮಾಜ ಸೇವಕರಾದ ಶಂಕರ್ ಗೌಡ ಕನ್ನೊಳ್ಳಿ ಸುಂಬುಡ ಅವರು ಶಾಸಕರಿಗೆ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಪಟ್ಟಣದಲ್ಲಿರುವ ಕೃಷ್ಣ ಮೇಲ್ದಂಡೆಯ ಯೋಜನೆಯ ಜಮೀನು ಖಾಲಿ ಬಿದ್ದಿದೆ ಈ ಭೂಮಿ ಮಿನಿ ವಿಧಾನಸೌಧ ಕಟ್ಟಲು ಎಂದು ಪಹಣಿಯಲ್ಲಿ ದಾಖಲಾಗಿದ್ದರೂ ಸಹಿತ ತಾಲೂಕಿನ ಶಾಸಕರು ನಮ್ಮ ಮಠದ ಆಸ್ತಿಯ ಮೆಲೆ ಕಣ್ಣು ಯಾಕೆ ಹಾಕಿದ್ದಾರೆ ಎಂದು ಸಮಾಜ ಸೇವಕರಾದ ಶಂಕರ್ ಗೌಡ ಕನ್ನೊಳ್ಳಿ ಅವ್ರು ಶಾಸಕರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಅದೇ ರೀತಿಯಾಗಿ ಸ್ಥಳೀಯರ ಗಮನಕ್ಕೂ ತರದೆ ಹಾಗೂ ಭಕ್ತರ ಗಮನಕ್ಕು ತರದೇ ಶಾಸಕರು ಕಿರಿಯ ಸ್ವಾಮೀಜಿಯ ಮನವೊಲಿಸಿ ಮಠದ ಆಸ್ತಿಯನ್ನು ನೊಂದಣಿ ಮಾಡಿಕೊಂಡಿದ್ದಾರೆ ಇದಕ್ಕೂ ಮೊದಲು ನಾವು ಮಠದ ಸ್ವಾಮೀಜಿಯವರನ್ನು ಭೇಟಿ ಮಾಡುತ್ತೇವೆ ಮಠಕ್ಕೆ ಹಣದ ಅವಶ್ಯಕತೆ ಇದ್ರೆ ಭಕ್ತರಿಂದ ದೇಣಿಗೆಯನ್ನು ಸಂಗ್ರಹ ಮಾಡುತ್ತೇವೆ ಈ ವಿಷಯದ ಕುರಿತು ಸ್ವಾಮೀಜಿಯವರನ್ನು ಪ್ರಶ್ನೆ ಮಾಡುತ್ತೇವೆ ಈ ಕೂಡಲೆ ಮಠದ ಆಸ್ತಿಯ ಮುಟೇಶನ್ ರದ್ದುಪಡಿಸಬೇಕು ಶಾಸಕರಾದ ಡಾ ಅಜಯ್ ಸಿಂಗ್ ಅವ್ರು ಮಠದ ಆಸ್ತಿಯನ್ನು ಕೈಬಿಡಬೇಕು ಒಂದು ವೇಳೆ ಈ ವಿಷಯದ ಕುರಿತು ನಿರ್ಲಕ್ಷ್ಯ ವಹಿಸಿದರೆ ಯಡ್ರಾಮಿ ತಾಲೂಕಿನಲ್ಲಿ ಮಠದ ಭಕ್ತರೊಂದಿಗೆ ರಸ್ತಾ ರೋಕೊ ಚಳುವಳಿಯನ್ನು ಶಾಸಕರ ವಿರುದ್ಧ ದಿಕ್ಕಾರವನ್ನು ಕೂಗಿ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಾಜ ಸೇವಕರಾದ ಶಂಕರ್ ಗೌಡ ಕನ್ನೊಳ್ಳಿ ಸುಂಬಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ