ಬಳ್ಳಾರಿ / ಕಂಪ್ಲಿ : ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ಮಂಗಳಮುಖಿ ಸಮುದಾಯದ ರಾಜಮ್ಮ ರವರು ತಮ್ಮ ಜೀವನದ ದೈನಂದಿನ ಭಿಕ್ಷೆಯಿಂದ ಉಳಿತಾಯ ಮಾಡಿದ ಹಣವನ್ನು ಮಾನವೀಯ ಸೇವೆಗೆ ಬಳಸಿಕೊಂಡು, ಸಮಾಜಕ್ಕೆ ಮಾದರಿಯಾದಿದ್ದಾರೆ.
ಸುಮಾರು ₹60,000 ವೆಚ್ಚದಲ್ಲಿ ಗ್ರಾಮದ ಸರ್ಕಾರಿ ಶಾಲೆಯ 150 ವಿದ್ಯಾರ್ಥಿಗಳಿಗೆ ಬ್ಯಾಗ್, ಪ್ಯಾಂಟ್ ಮತ್ತು ಟಿ-ಶರ್ಟ್ಗಳನ್ನು ದಾನವಾಗಿ ನೀಡಿದ ರಾಜಮ್ಮ ಅಕ್ಕನ ಈ ಉದಾತ್ತ ಕಾರ್ಯ ಸಮಾಜದಲ್ಲಿ ನಿಜವಾದ ಸೇವಾಭಾವನೆಯ ಪ್ರತೀಕವಾಗಿದೆ.
ಅವರ ಸೇವೆಯನ್ನು ಗೌರವಿಸಿ, ಕಂಪ್ಲಿ ಪೊಲೀಸ್ ಠಾಣೆಯ ಪಿ. ಐ. ವಾಸುಕುಮಾರ್ ರವರು ಮಾತನಾಡಿ ರಾಜಮ್ಮರವರು ತೋರಿದ ದಾನಶೀಲತೆ ಮತ್ತು ಸಮಾಜದ ಮೇಲಿನ ಬದ್ಧತೆ ಎಲ್ಲರಿಗೂ ಪ್ರೇರಣೆಯಾಗಿದೆ ಸಮಾಜದಲ್ಲಿ ಬದಲಾವಣೆ ತರಲು ಹಣದ ದೊಡ್ಡ ಪ್ರಮಾಣದ ಇಲ್ಲದಿದ್ದರೂ ಉತ್ತಮ ಸೇವಾ ಕಾರ್ಯ ಮಾಡುವ ಮನಸ್ಸಿದ್ದರೆ ಸಾಕು ಎಂಬುದಕ್ಕೆ ಇವರು ನಿದರ್ಶನವಾಗಿದ್ದಾರೆ ಎಂದು ತಿಳಿಸಿ ರಾಜಮ್ಮರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಕಂಪ್ಲಿ ಠಾಣೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ : ಜಲಸಾಬ್ ಬಡಿಗೇರ್



















