ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಮಹಾಸಭೆ

ಶಿವಮೊಗ್ಗ: ವಿಕಲಚೇತನರು ಅಂದಿನಿಂದ ಇಂದಿನವರೆಗೆ ಶೋಷಣೆಗೊಳ್ಳುತ್ತಾ ದಿನದೂಡುತ್ತಿದ್ದು ಕಾಲ ಬದಲಾಗಬಹುದು ಎಂಬ ಅವರ ನಿರೀಕ್ಷೆ ಹುಸಿಯಾಗಿದೆ ಎಂದು ಇಂಡಿಯನ್ ದಿವ್ಯನ್ಗ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಸಂಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧ ಇಲಾಖೆಗಳು ವಿಕಲಚೇತನರ ವಿಷಯದಲ್ಲಿ ಉದಾರತೆಯನ್ನು ತೋರದೆ ಹಠಮಾರಿ ನಿಲುವನ್ನು ಹೊಂದಿರುವುದಕ್ಕೆ ನನ್ನಲ್ಲಿ ವಿಪುಲ ದಾಖಲೆಗಳಿವೆ ಎಂದ ಅವರು ಸರಕಾರಗಳ ಅಥವಾ ಸರಕಾರದ ಇಲಾಖೆ, ಕಚೇರಿಗಳ ಇಂತಹ ಧೋರಣೆಯು ಪ್ರಗತಿಪರ ಯೋಜನೆಗಳ ಆವಿಷ್ಕಾರಕ್ಕೆ ದೊಡ್ಡ ಅಡಚಣೆಯಾಗುವುದಲ್ಲದೆ ವಿಕಲಚೇತನರನ್ನು ಪ್ರಚಾರದ ಸರಕಾಗಿ ಮತ್ತು ಅನುಕಂಪದ ಅಸ್ತ್ರವಾಗಿ ಬಳಸುತ್ತಿರುವುದಕ್ಕೆ ಪ್ರಭಲ ಸಾಕ್ಷಿಯನ್ನು ನೀಡುತ್ತದೆ. ಅಂತಹ ಕ್ರೂರತನವನ್ನು ಬಿಟ್ಟು ಕೊಟ್ಟು ವಿಶಾಲ ಮನೋಭಾವವನ್ನು ಹೊಂದುವಂತಾಗಬೇಕು ಎಂದು ಅವರು ಮಹಾಸಭೆಯಲ್ಲಿ ಪ್ರತಿಪಾದಿಸಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ರಾಜಕುಮಾರ ಬಿರಾದಾರ ಅವರು ವಿಕಲ ಚೇತನ ಉದ್ಯೋಗಿಗಳ ವಿವಿಧ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಸರಕಾರ ವಿವಿಧ ಇಲಾಖೆ ಹಾಗೂ ಬ್ಯಾಂಕುಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣಗಳು ಕಣ್ಮರೆ ಆಗಿರುವುದಕ್ಕೆ ವಿಷಾದಿಸಿದರು ಮುಂದುವರಿದ ಅವರು ಕ್ರಿಯಾಶೀಲರಲ್ಲದ ಎಕ್ಸಿಕ್ಯುಟಿವ್ ಸಮಿತಿ ಸದಸ್ಯರು ಕ್ರಿಯಾತ್ಮಕವಾಗಿಲ್ಲದಿದ್ದರೆ ಸಂಸ್ಥೆಗೆ ಹೊರೆಯಾಗುತ್ತಾರಲ್ಲದೆ ಅವರನ್ನು ಸಂಸ್ಥೆಯಿಂದ ಬಿಡುಗಡೆಗೊಳಿಸಲು ಯೋಚಿಸಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಕ್ರಮ ಶ್ರೀವಾಸ್ತವ ಅವರು ಸಂಸ್ಥೆಯ ಚಟುವಟಿಕೆ ಮತ್ತು ಸದಸ್ಯತ್ವ ಬೇಡಿಕೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವದಕ್ಕೆ ಹರ್ಷ ವ್ಯಕ್ತಪಡಿಸಿದರಲ್ಲದೆ ನಮ್ಮ ಸಂಸ್ಥೆಯಲ್ಲಿ ವಿಶ್ವಾಸವಿಟ್ಟು ಸದಸ್ಯತ್ವವನ್ನು ಕೋರಿರುವುದಕ್ಕೆ ವಿಕಲಚೇತನರಲ್ಲಿರುವ ಜಾಗೃತಿ ಮನೋಭಾವವೇ ಕಾರಣ ಎಂದು ವಿಶ್ಲೇಷಿಸಿದರು ಮುಂದುವರಿದ ಅವರು ಸಂಸ್ಥೆಯ ಲೆಕ್ಕ ಪತ್ರಗಳೆಲ್ಲಾ ಸಮರ್ಪಕವಾಗಿದ್ದು ಆಡಿಟ್ ವರದಿ ಕೂಡಾ ತಯಾರಾಗುತ್ತಿದೆಯಲ್ಲದೆ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.

ಸಂಘದ ನಿರ್ದೇಶಕರಲ್ಲೊಬ್ಬರಾದ ಶ್ರೀ ಮಧುರ ಮಿಶ್ರ ಮತ್ತು ಶ್ರೀ ಪ್ರವೀಣ್ ಗರ್ಗ್ ಅವರುಗಳು ವಿವಿಧ ವಿಷಯಗಳ ಮೇಲೆ ಬೆಳೆಕು ಚೆಲ್ಲಿದರಲ್ಲದೆ ನಮ್ಮ ಸಂಸ್ಥೆಯಲ್ಲಿ ವಿಶ್ವಾಸ ಇರಿಸಿ ಬಂದಿರುವ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಆಶಿಸಿದರು.

ನೆಟ್ವರ್ಕ್ ಸಮಸ್ಯೆಗಳಿಂದ ಹಲವಾರು ಪದಾಧಿಕಾರಿಗಳು ಭಾಗವಹಿಸಲು ತೊಂದರೆ ಆಗಿರುವುದನ್ನು ಕೂಡಾ ಹಲವರು ಸಭೆಯಲ್ಲಿ ಪ್ರಸ್ತಾಪಿಸಿದ್ದು ಗಮನ ಸೆಳೆಯಿತು.

ಸಂಸ್ಥೆಯ ಮಹಿಳಾ ವಿಭಾಗದ ಕಾರ್ಯದರ್ಶಿ ಡಾ. ಟಿ.ಎಂ. ಸುಮನಾ ಅವರು ನೆರೆದಿರುವ ವಿಕಲಚೇತನ ಬಂಧುಗಳು, ಪದಾಧಿಕಾರಿಗಳನ್ನು ಅವರಲ್ಲಿರುವ ಸೇವಾ ಭಾವನೆಗಳ ಮುಲಕ ಅಭಿನಂದಿಸಿ ಶುಭ ಹಾರೈಸಿದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಹರಿಯಾಣ ರಾಜ್ಯದ ಅಂಗವಿಕಲರ ಆಯುಕ್ತಾಲಯದ ಮಾಜಿ ಆಯುಕ್ತ ಶ್ರೀ ರಾಜಕುಮಾರ ಮಕ್ಕಾದ ಮತ್ತು ಖಜಾಂಚಿ ಶ್ರೀಮತಿ ಟಿ. ಶಿವಮ್ಮ ಮುಂತಾದವರು ಕಾರಣಾಂತರಗಳಿಂದ ಆನ್ಲೈನ್ ಸಭೆಯಲ್ಲಿ ಭಾಗವಹಿಸಲಾಗಲಿಲ್ಲ ಎಂದು ಸಭೆಯ ಗಮನಕ್ಕೆ ತರಲಾಯಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!