
ದಕ್ಷಿಣ ಕನ್ನಡ/ ಮುಕ್ಕ :ಕರುನಾಡ ಕಂದ ಪತ್ರಿಕೆಯ ಸಂಪಾದಕರಾದ ಶ್ರೀ ಬಸವರಾಜ ಬಳಿಗಾರ ರವರು ದಕ್ಷಿಣ ಕರ್ನಾಟಕ ಪ್ರವಾಸದಲ್ಲಿದ್ದು ನಿನ್ನೆ ದಿನಾಂಕ 30/09/2025 ರಂದು ಬೆಳಿಗ್ಗೆ ಗಂಟೆ 11.00 ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರ ಶ್ರೀ ಚಂದ್ರಶೇಖರ ಹೆಬ್ಬಾರ್ ಕೊಲ್ಯ ರವರ ಕಛೇರಿಗೆ ಭೇಟಿ ಕೊಟ್ಟು
ಸಂಪಾದಕ ಮತ್ತು ವರದಿಗಾರರ ಸಂಭಾಷಣೆಯಲ್ಲಿ ಪತ್ರಿಕೆಯ ಆಗುಹೋಗು, ಸುದ್ದಿ ಬಿಡುಗಡೆ, ಪತ್ರಿಕೆ ಮತ್ತು ವರದಿಗಾರರ ಶ್ರೇಯೋಭಿವೃದ್ಧಿ ಬಗ್ಗೆ ವಿಚಾರ ವಿನಿಮಯ ಮಾಡಿದರು.

ಕರುನಾಡ ಕಂದ ಜನ ಜಾಗೃತಿ ವೇದಿಕೆಯ ಬೆಳವಣಿಗೆ ಬಗ್ಗೆಯೂ ವಿಚಾರ ವಿನಿಮಯ ಮಾಡಲಾಗಿ, ಜಿಲ್ಲಾ ಮಟ್ಟದಲ್ಲಿ 50 ಸದಸ್ಯರು ವೇದಿಕೆಯಲ್ಲಿ ಸದಸ್ಯತನ ಪಡೆದಲ್ಲಿ ತಾಲೂಕು ಮಟ್ಟದಲ್ಲಿ ಘಟಕ ರಚಿಸಿ ತಾಲೂಕು ಮಟ್ಟದಲ್ಲಿ ಕಾರ್ಯಾಧ್ಯಕ್ಷರನ್ನು ಆರಿಸಲಾಗುವುದೆಂದು ತಮ್ಮ ನಿರ್ಧಾರ ವ್ಯಕ್ತ ಪಡಿಸಿದರು.
ಸಂಪಾದಕರು ತಮ್ಮ ಕಾರ್ಯ ನಿಮಿತ್ತ ಶಿವಮೊಗ್ಗ ಕಡೆ ಪ್ರಯಾಣ ಬೆಳೆಸಿದರು.

ಕಛೇರಿ ಮ್ಯಾನೇಜರ್ ಶ್ರೀ.ಶಿವಪ್ರಸಾದ್ ಹೊಳ್ಳ ಸ್ವಾಗತಿಸಿದರು ಮತ್ತು ಸಭೆಯನ್ನು ನಿರ್ವಹಿಸಿದರು.
ವರದಿ. ಚಂದ್ರಶೇಖರ ಹೆಬ್ಬಾರ್ ಕೊಲ್ಯ




















