ಶಹಾಪುರ: ಶಹಾಪುರ ಶಿಕ್ಷಣ ಸೇವಾ ಸಹಕಾರಿ ನಿತ್ಯ ಶೈಕ್ಷಣಿಕ ಸಹಕಾರ ಸಂಘದ ಸೋಮಶೇಖರಯ್ಯ ಹಿರೇಮಠ ಅವರು ರಾಜ್ಯ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಳೆಗಾಲದ ಅಬ್ಬರದಿಂದಾಗಿ ಜನರು ಅನುಭವಿಸುತ್ತಿರುವ ಸಂಕಷ್ಟವನ್ನು ಮನಗಂಡು, ತಮ್ಮ ಮಾಸಿಕ ವೇತನವಾದ ರೂ. ೪೨,೩೨೭ ಅನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.
ಮಳೆಗಾಲದ ಹಾವಳಿಯಿಂದ ತತ್ತರಿಸಿದ ಜನತೆಗೆ ನೆರವಾಗುವ ಉದ್ದೇಶದಿಂದ ಅವರು ಈ ಮಾನವೀಯ ಹೆಜ್ಜೆ ಇಟ್ಟಿದ್ದಾರೆ.
ಅವರ ಈ ಸಾಮಾಜಿಕ ಸೇವಾ ಮನೋಭಾವವನ್ನು ಸಹೋದ್ಯೋಗಿಗಳು ಮತ್ತು ಸ್ಥಳೀಯರು ಶ್ಲಾಘಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್




















