ಯಡ್ರಾಮಿ :ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ದಿ. 12 /10/2025ರಂದು ಸ್ಟಾರ್ ಫಂಕ್ಷನ್ ಹಾಲ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಯಡ್ರಾಮಿ ತಾಲೂಕಿನ ವಿದ್ಯಾರ್ಥಿಗಳು ಅಮೋಘವಾದ ಸಾಧನೆ ಮಾಡಿದ್ದಾರೆ ಈ ಕರಾಟೆ ಕ್ರೀಡಾಕೂಟದಲ್ಲಿ ಸುಮಾರು 600 ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕರಾಟೆ ಸ್ಪರ್ಧೆಯಲ್ಲಿ ಪ್ರಜ್ವಲ್ ಎನ್. ಮ್ಯಾಗೇರಿ ಮೂರನೇ ಸ್ಥಾನ, ಪಾಂಡು ಸೋಮು ರಾಥೋಡ್ ಮೂರನೇ ಸ್ಥಾನ, ಶ್ರೀಕಾಂತ್ ವಿಜಯ್ ಕುಮಾರ್ ರಾಥೋಡ್ ಮೂರನೇ ಸ್ಥಾನ, ನಕುಲ್ ಲಕ್ಷ್ಮಣ್ ರಾಠೋಡ್ ಎರಡನೇ ಸ್ಥಾನ, ಸತೀಶ್ ಲಕ್ಷ್ಮಣ್ ನಾಟಿಕರ್ ಮ್ಯಾಗೇರಿ ಪ್ರಥಮ ಸ್ಥಾನ, ಶ್ರೀ ನೀಲ ಶರಣಪ್ಪ ದೇವರಮನಿ ಮೂರನೇ ಸ್ಥಾನ, ವೈಷ್ಣವಿ ಲಿಂಗಣ್ಣ ಭಟ್ ಜೋಶಿ 3ನೇ ಸ್ಥಾನ, ತಸ್ಲಿಂ ದವಲಸಾಬ್ ನದಾಫ್ ಎರಡನೇ ಸ್ಥಾನ, ಅನ್ನಪೂರ್ಣ ಲಿಂಗಣ್ಣ ಜಮಾದಾರ್ ಎರಡನೇ ಸ್ಥಾನ, ವರ್ಷ ಅಣ್ಣಾರಾಯ ಪಾಟೀಲ್ ಎರಡನೇ ಸ್ಥಾನ, ಮಾಳಪ್ಪ ಶರಣಪ್ಪ ತಗ್ಗಿನಮನಿ ಪ್ರಥಮ ಹಾಗೂ ದ್ವಿತೀಯ ಸ್ಥಾನ, ಅಜಯ್ ಚಂದ್ರಕಾಂತ್ ತಳವಾರ್ ಪ್ರಥಮ ಸ್ಥಾನ, ವೀರೇಶ್ ಪ್ರಕಾಶ್ ನಾಯ್ಕೋಡಿ ದ್ವಿತೀಯ ಹಾಗೂ ತೃತೀಯ ಸ್ಥಾನ, ಸುವರ್ಣ ಮೌನೇಶ್ ನಾಟಿಕರ್ ತೃತೀಯ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಯಡ್ರಾಮಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಯಡ್ರಾಮಿ ತಾಲೂಕ ಶೋಟೋ ಕಾನ ಕರಾಟೆ ಅಸೋಸಿಯೇಷನ್ ಕರಾಟೆ ಶಿಕ್ಷಕರಾದ ಸೇನಸೈ ಪ್ರಶಾಂತ್ ಹನಗಂಡೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















