ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕೌಠ ಗ್ರಾಮದಲ್ಲಿ ಹತ್ತಿರ ಸೇತುವೆ ಮೇಲಿನಿಂದ ಶುಕ್ರವಾರ ಸಂಜೆ ಜಿಗಿದಿ ದ್ದಾನೆ ಎನ್ನಲಾಗಿದೆ ಯುವಕನಿಗಾಗಿ ಶೋಧನಾ ಕಾರ್ಯ ಮುಂದುವರಿದಿದೆ ಕುಮ್ಮಟಿ ಗ್ರಾಮದ ನಿವಾಸಿ ಕೃಷ್ಣ ನಾರಲಾವರ್ (30) ಸೇತುವೆ ಮೇಲಿನಿಂದ ನದಿಗೆ ಜಿಗಿದ ಯುವಕನಿಗಾಗಿ ಎರಡು ದಿನಗಳಿಂದ ಪೊಲೀಸರು ಮತ್ತು ಅಗ್ನಿಶಾಮಕದಳದ ಹುಡುಕಾಟ ನಡೆಸುತ್ತಿದ್ದರು. ಕ್ಷಯ ರೋಗದಿಂದ ಬಳಲುತಿದ್ದ ಕೃಷ್ಣ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನಾರೋಗ್ಯ ಕಾರಣ ಮನನೊಂದು ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶoಕಿಸಲಾಗಿದೆ ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ ಕೃಷ್ಣ ಪತ್ತೆಯಾಗಿಲ್ಲ ಇಂದು ಬೆಳಗ್ಗೆಯಿಂದ ಶೋಧಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಿದ್ದಾರೆ ಈ ಬಗ್ಗೆ ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ಸಂಗಮೇಶ ಚಿದ್ರೆ




















