ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರಸಭೆ ಪೌರಾಯುಕ್ತರಾದ ರಾಜು ಡಿ. ಬಣಕರ ರವರು ಬಂದ ನಂತರ ನಗರಸಭೆಯ ಕಛೇರಿಯಲ್ಲಿ ಭ್ರಷ್ಟಾಚಾರ ಮಾಡಿರುತ್ತಾರೆ. ಸರ್ವೇ ನಂ. 46/3, 59/1, 135/1, ತ್ರಿಪೂರಾಂತ ಸರ್ವೆ ನಂ. 106/5 ಬಿ ಬಸವಕಲ್ಯಾಣ 34/9. ಸರ್ವೇ ನಂ. 51/6 ತ್ರಿಪೂರಾಂತದಲ್ಲಿ ಅಕ್ರಮ ಖಾತೆ ನೊಂದಣಿ ಮಾಡಿರುತ್ತಾರೆ.
ಬಸವಕಲ್ಯಾಣ ನಗರದ ಸರ್ವೇ ನಂ. 266 ಕರ್ನಾಟಕ ಸರಕಾರದ ಹೆಸರಿನಲ್ಲಿ ಇದ್ದರೂ ಸಹ ಖಾತೆ ಮಾಡಿದ್ದು, ಸರ್ವೇ ನಂಬರ್ 124. 52/1 ಗ್ರಾಮಿಣ ಪ್ರದೇಶದ ಸರ್ವೇ ನಂ. 4/1 ಸರಕಾರದ ಅನುಮೋದನೆ ಪಡೆಯದೆ ನಗರಸಭೆ ಸಂಖ್ಯೆ ಹಾಕಿ ಈ ಖಾತಾ ಮಾಡಿರುತ್ತಾರೆ. ಸದರಿ ಸ್ಥಳವನ್ನು ಪರಿಶೀಲನೆ ಮಾಡಿದಾಗ ಮೂಲಭೂತ ಸೌಲಭ್ಯಗಳು ಇರುವುದಿಲ್ಲ. ಆದರೂ ಕೂಡಾ ಇಂತಹ ಸ್ಥಳದಲ್ಲಿ ಈ -ಖಾತಾ ಮಾಡಿರುತ್ತಾರೆ. ಮತ್ತು 15ನೇ ಹಣಕಾಸಿನಲ್ಲಿ ಕೆಲವು ಕೆಲಸ ಮಾಡದೆ ಕಾಮಗಾರಿ ಬಿಲ್ಲು ಎತ್ತಿರುತ್ತಾರೆ.
ಬಸವಕಲ್ಯಾಣ ನಗರದಲ್ಲಿ ರಸ್ತೆಗುಂಡಿ ಮುಚ್ಚುವ ಸಲುವಾಗಿ ಹಣ ದುರ್ಬಳಕೆ ಹಾಗೂ ಭ್ರಷ್ಟಾಚಾರ ಮಾಡಿರುತ್ತಾರೆ. ಕೆಲವು ಬೋರವೆಲ್ ಗಳು ರಿಪೇರಿ ಮಾಡದೆ ಬೋಗಸ್ ಬಿಲ್ಲನ್ನು ಮಾಡಿರುತ್ತಾರೆಂದು ಬಿ ಎಸ್ ಪಿ ತಾಲೂಕ ಅಧ್ಯಕ್ಷರಾದ ಶಂಕರ ಫುಲೆ ಅವರ ನೇತೃತ್ವದಲ್ಲಿ ಈ ಧರಣಿ ನಡೆಸಲಾಯಿತು.
ತದ ನಂತರ ಬಸವಕಲ್ಯಾಣ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ
ಶಂಕರ್ ಫುಲೆ ಬಿ ಎಸ್ ಪಿ ತಾಲೂಕ ಅಧ್ಯಕ್ಷರು,
ಅಶೋಕ್ ಮಂಠಾಳಕರ ರಾಜ್ಯ ಕಾರ್ಯದರ್ಶಿಗಳು,
ಜ್ಞಾನೇಶ್ವರ್ ಸಿಂಗಾರೆ ರಾಜ್ಯ ಕಾರ್ಯದರ್ಶಿಗಳು,
ಕಪಿಲ್ ಗೋಡ್ಬೋಲೆ ಜಿಲ್ಲಾಧ್ಯಕ್ಷರು,
ಸಚಿನ್ ಗಿರಿ ಜಿಲ್ಲಾ ಉಪಾಧ್ಯಕ್ಷರು,
ರಮೇಶ್ ರಾಠೋಡ್ ತಾಲೂಕು ಉಪಾಧ್ಯಕ್ಷರು,
ಸಚಿನ್ ಕಾಂಬಳೆ ತಾಲೂಕ ಉಪಾಧ್ಯಕ್ಷರು,
ಮಕ್ಬುಲ್ ಸಾಬ್ ತಾಲೂಕ ಸಂಯೋಜಕರು,
ರವಿ ಉದಾತೆ ತಾಲೂಕ ಪ್ರಧಾನ ಕಾರ್ಯದರ್ಶಿಗಳು,
ಮಹಾದೇವ್ ಗಾಯಕ್ವಾಡ್ ತಾಲೂಕ ಕಾರ್ಯದರ್ಶಿಗಳು,
ಚಂದ್ರಶಿಲ ಗಾಯಕ್ವಾಡ ನಗರ ಘಟಕ ಅಧ್ಯಕ್ಷರು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ : ಶ್ರೀನಿವಾಸ ಬಿರಾದಾರ




















