ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಬೆಳೆ ಪರಿಹಾರ ಸಿಗದ ಕಾರಣ ಶಾಂತಿಯುತವಾಗಿ ರೈತ ಮುಖಂಡರುಗಳಾದ ವೀರಣ್ಣ ಗಂಗಾಣಿ ಹಾಗೂ ಸಿದ್ದು ಪಾಟೀಲ್ ಹೆಬ್ಬಾಳ್ ಇವರ ನೇತೃತ್ವದಲ್ಲಿ ಅಂಬೇಡ್ಕರ್ ಸರ್ಕಲ್ ದಿಂದ ತಹಶೀಲ್ದಾರ್ ಕಚೇರಿಯವರಿಗೆ ಕಾಳಗಿ ತಾಲೂಕಿನ ಗ್ರಾಮಗಳ ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ತಹಶೀಲ್ದಾರರಾದ ಶ್ರೀ ಪೃಥ್ವಿರಾಜ್ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಫ್ ಐ ಡಿ ಇದ್ದರೂ ಸಹ ಪರಿಹಾರ ಜಮಾ ಮಾಡದೆ ಇರುವುದನ್ನು ರೈತರು ಖಂಡಿಸಿದರು.
ಈಗಾಗಲೇ ಒಂದು ಮತ್ತು ಎರಡನೇ ಕಂತು ಬಂದಿದ್ದು, ಕಲ್ಬುರ್ಗಿ ಜಿಲ್ಲೆಯಲ್ಲಿ 4 ಲಕ್ಷ 17 ಸಾವಿರ ರೈತರು ಇದು ಇದರಲ್ಲಿ 3 ಲಕ್ಷ 17 ಸಾವಿರ ಎಫ್ ಐಡಿ ಮಾಡಿಸಿದ್ದಾರೆ ಅದರೆ 12313 ರೈತರಿಗೆ ಎಫ್ ಐ ಡಿ ಇದ್ದರು ಸಹ ಹಣ ಜಮಾ ಆಗಿಲ್ಲ ಎಂದು ವೀರಣ್ಣ ಗಂಗಾಣಿ ರೈತ ಸಂಘ ತಾಲೂಕ ಅಧ್ಯಕ್ಷರು ಕಾಳಗಿ ದೂರಿದರು.
ಈ ಸಂದರ್ಭದಲ್ಲಿ ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ರೈತ ಸಂಘ ಕಾಳಗಿ, ಸಿದ್ದು ತೆಂಗಳಿ ಹೆಬ್ಬಾಳ ರೈತ ಮುಖಂಡರು ಅರುಣ್ ಕುಮಾರ್, ಪ್ರಭಾಕರ್ ಇಟಗಿ, ಸಿದ್ದಯ್ಯ ಕೊಡದೂರ, ಅಣ್ಣಾರಾವ ಮಡಿವಾಳ, ಶಿವಲಿಂಗಪ್ಪ ದುತ್ತರಗಿ, ರಮೇಶ್ ಸಿದ್ಧನಾಕ, ಉಮೇಶ್ ಕೋನಪ್ಪ, ಶಿವಕುಮಾರ್ ಮಡಿವಾಳ, ಹನುಮಂತ್ ರಾವ್ ಆಲ್ಬ, ಮಾಣಿಕ್ಯಮ್ಮ ರೇವಯ್ಯ, ಜಗನಾಥ್ ಭೂವಿ, ಅರ್ಜುನ್ ಸಾಹೇಬಣ್ಣ ದೇವ್ಟಿಗಿ, ನಾಗರಾಜ್ ರಾಣ ನಿಪ್ಪಾಣಿ, ನಾಗಣ್ಣ ರೇವಣಸಿದ್ಧಪ್ಪ, ಅಣವೀರಪ್ಪ ಪಾಲಿ, ಗುಂಡಪ್ಪ ಬಿ ಕುನ್ನೂರ್, ನಾಗರಾಜ್ ಶೀಲವಂತ್, ರೇವಣಸಿದ್ದಪ್ಪ ಚಿದ್ದರೆ ನಾವದಗಿ, ಶಂಕ್ರಪ್ಪ ಸಾಯಬಣ್ಣ ಸಾವತಖೇಡ, ಶಂಕರ್ ಇಟಗಿ, ಬಾಬು ಪಟೇಲ್ ರೂಮನಗೂಡು, ರಾಜಣ್ಣ ನಿಪ್ಪಾಣಿ, ವೈಜನಾಥ್ ಬಂಡಪ್ಪ, ಬಸವರಾಜ್ ಜೀವಣಗಿ, ಬಾಬುರಾವ್ ಬೆಡಸೂರ, ಶ್ರೀಮಂತ, ನಿಂಗಪ್ಪ ಅಂಬಣ್ಣ, ಪರಮೇಶ್ವರ್ ಶಿವಶರಣಪ್ಪ, ಗುರುಲಿಂಗಪ್ಪ ಅಷ್ಟಗಿ ನಿಪ್ಪಾಣಿ, ಬಂಡಪ್ಪ ಈರಣ್ಣ, ಹಣಮಂತ್ ಸುತಾರ್, ಶಿವಾನಂದ್ ಆಲ್ಬ, ರಮೇಶ್ ಗುತ್ತೇದಾರ್ ಸೇರಿದಂತೆ ರೈತ ಮುಖಂಡರು ಭಾಗಿಯಾಗಿದ್ದರು.
ವರದಿ ಚಂದ್ರಶೇಖರ ಆರ್. ಪಾಟೀಲ್




















