ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಬಳೆಪೇಟೆಯ ಜಯರಾಮ್ ರವರು ಸ್ಪರ್ಧಿಸಿದ್ದು ಅದರಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ ಇದರ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಳಂದೂರು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಹಾಗೂ ಸ್ನೇಹಿತರಿಂದ ಯಳಂದೂರು ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಜಯರಾಮ್ ರವರಿಗೆ ಸನ್ಮಾನಿಸಲಾಯಿತು .
ಮೊದಲಿಗೆ ಜಯರಾಮ್ ರವರು ಯಳಂದೂರು ಪಟ್ಟಣದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಹಾಗೂ ಮಹರ್ಷಿವಾಲ್ಮೀಕಿ, ಭಗೀರಥ ಮಹರ್ಷಿ, ಬಸವಣ್ಣನವರ, ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು
ನಂತರ ಮಾತನಾಡಿದ ಅವರು ಮೈಸೂರು ಮತ್ತು ಚಾಮರಾಜನಗರ ಸಹಕಾರ ಸಂಘಗಳ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ನನ್ನನ್ನು ಅವಿರೋಧವಾಗಿ ಆಯ್ಕೆಯಾಗಲು ತಾಲೂಕಿನ ಪ್ಯಾಕ್ಸ್ ಸೊಸೈಟಿಗಳು ಕಾರಣ ನಾನು ಅವರಿಗೆ ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ಅದರಂತೆ ನಾನು ಉಪಾಧ್ಯಕ್ಷನಾಗಲು ನಾಡು ಕಂಡ ಶ್ರೇಷ್ಠ ವ್ಯಕ್ತಿ ಮುಖ್ಯಮಂತ್ರಿಯ ಸಿದ್ದರಾಮಯ್ಯರವರು, ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್ ಸಿ ಮಹದೇವಪ್ಪರವರು, ಪಶು ಸಂಗೋಪನೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ರವರು, ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು, ಪುಟ್ಟರಂಗಶೆಟ್ಟಿ ರವರು, ಗಣೇಶ ಪ್ರಸಾದ ರವರು, ಅನಿಲ್ ಚಿಕ್ಕಮಾದು ರವರು, ಮಾಜಿ ಶಾಸಕರಾದ ನರೇಂದ್ರ ಅವರು, ಇವರೆಲ್ಲರ ಪರಿಶ್ರಮದಿಂದ ನಾನು ಉಪಾಧ್ಯಕ್ಷನಾಗಿದ್ದೇನೆ ನನ್ನ ಅಧಿಕಾರದ ಅವಧಿಯಲ್ಲಿ ನಮ್ಮ ತಾಲೂಕಿನ ರೈತರಿಗೆ ಅನುದಾನವನ್ನು ತಂದು ಸಾಲಗಳನ್ನು ಕೊಡಿಸಬೇಕು ಎಂದು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಳಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವೈ ಬಿ ಮಹೇಶ್, ಉಪಾಧ್ಯಕ್ಷರಾದ ಅನಿಲ್, ಮಾಜಿ ಅಧ್ಯಕ್ಷರಾದ ಪಿ ಮಾದೇಶ್ ಉಪ್ಪಾರ್, ನಿರ್ದೇಶಕರುಗಳಾದ ಮಲ್ಲಿಕಾರ್ಜುನ್, ರಾಜಶೇಖರ್, ಪುಟ್ಟರಾಜು, ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷರಾದ ಕಿಸ್ತೂರು ಸಿದ್ದರಾಜು, ಯರಿಯೂರು ನಟರಾಜು, ಪಟ್ಟಣ ಪಂಚಾಯತಿ ಮಾಜಿ ಸದಸ್ಯರುಗಳಾದ ರವಿ, ರಂಗನಾಥ್, ಮಹೇಶ್, ಹಾಗೂ ಕಾಂಗ್ರೆಸ್ ಮುಖಂಡರುಗಳು ಸ್ನೇಹಿತರುಗಳು ಹಾಜರಿದ್ದರು.
ವರದಿ ಉಸ್ಮಾನ್ ಖಾನ್



















