ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಳಗಿ : ಬದು ನಿರ್ಮಾಣಕ್ಕಾಗಿ ಮೂರು ವರ್ಷಗಳ ಹೆಚ್.ಡಿ.ಎಫ್.ಸಿ ಸಾತ್

ಕಾಳಗಿ, WORT ಸಂಸ್ಥೆಯ ಹೆಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನಾ ಜಲಾನಯನ ಉದ್ಘಾಟನಾ ಕಾರ್ಯಕ್ರಮ ಕಂದಗೋಳ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜ್ಯೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಲಾಯಿತು.
ವಾಟರ್ ಸಂಸ್ಥೆಯ ಹೆಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನ ಜಲಾಯನ ಉದ್ಘಾಟನೆ ಕಾರ್ಯಕ್ರಮ ಜಿಲ್ಲಾ ಪಂಚಾಯತ್ ಸಿ ಇ ಓ ಭುವರಸಿಂಗ್ ಮೀನಾ ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮವನ್ನು ಕಂದಗೊಳ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಡಬ್ಲ್ಯೂ ಆರ್ ಟಿ ಸಂಸ್ಥೆ ಈ 10 ಗ್ರಾಮಗಳನ್ನು ಆಯ್ಕೆ ಮಾಡಿದ್ದು ಸಂತೋಷದ ವಿಷಯ ಈ ಗ್ರಾಮಗಳ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಪ್ರದೇಶ ಗುಡ್ಡಗಾಡು ಆಗಿರುವುದರಿಂದ ಮಳೆ ಬಂದಾಗ ಹರಿದು ಓಡಿ ಹೋಗುವ ನೀರು, ನಡೆಯುವ ಹಾಗೆ, ಮತ್ತು ನಡೆದು ಹೋಗುವ ನೀರು ನಿಲ್ಲುವ ಹಾಗೆ, ಮತ್ತು ನಿಂತ ನೀರು ಇಂಗುವ ಹಾಗೆ, ಇಂಗಿದ ನೀರು ಬಾವಿ ಮತ್ತು ಕೊಳವೆ ಬಾಯಿಂದ ತೆಗೆದುಕೊಂಡು ಪರಿವರ್ತನೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು. ಮತ್ತು ವರ್ಷದಮಳೆಯಿಂದ ಎಕ್ಕರೆಯಲ್ಲಿ 20 ಕುಂಟಲ ಮಣ್ಣು ಹರಿದು ಹೋಗುತ್ತದೆ, ಹಾಗೆ ಒಂದು ಎಕರೆಯಲ್ಲಿ ಬೆಳೆದ ತೊಗರಿ ಕಟ್ಟಿಗೆ, ಹತ್ತರಿಂದ ಹನ್ನೆರಡು ಕ್ವಿಂಟಲ್ ಬರುತ್ತದೆ, ಅದರಿಂದನೂ ತಾವು ಅರಣಿ ಹಾಕಿಕೊಂಡು ಗೊಬ್ಬರ ಮಾಡಿಕೊಳ್ಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷರು ವೀರಣ್ಣ ಗಂಗಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ ಪಾಟೀಲ್ ಗೊಣಗಿ, ಮಂಜುಳಾ ಸಿಂಗೆ ಅಧ್ಯಕ್ಷರು ಗ್ರಾಮ ಪಂಚಾಯತ, ನಾಗವೇಣಿ ರಾಠೋಡ ಅಧ್ಯಕ್ಷರು ಗ್ರಾಮ ಪಂಚಾಯತ,ಕೆವಿಕೆ ಅಧಿಕಾರಿಗಳಾದ ರಾಜೇಂದ್ರ, ತಾಲೂಕ ಪಂಚಾಯತ್ ಅಧಿಕಾರಿಯಾಗಿ ಬಸಲಿಂಗಪ್ಪ ಡಿಗ್ಗಿ, ತಾಲೂಕ ಕೃಷಿ ಅಧಿಕಾರಿಯಾದ ಸಂಜುಕುಮಾರ, ವಿಕಾಸ್ ಪಟೇದಾರ್, ಚೇತನ್ ಪಾಟೀಲ್, ಮತ್ತು ಪಂಚಾಯತ ಅಧಿಕಾರಿಗಳು, ರೈತ ಮುಖಂಡರು ರೇವಣಸಿದ್ಧಪ್ಪ, ಸಾತ್ನೂರ, ಮಂಜು ಪಾಟೀಲ್, ಗುರು ಬೋಧನ್, ಸಿದ್ದನಗೌಡ, ಸಿದ್ದು ಪಾಟೀಲ್, ಚಂದ್ರಕಾಂತ ಸಿಂಗೆ, ಮಲ್ಲು ವಟುವಟಿ, ರಾಜು ದೊಡ್ಡ ಮನಿ, ಶಿವಾನಂದ್ ಗೌಡಪ್ಪನವರ, ಮತ್ತು ಆಯ್ಕೆಯಾದ 10 ಗ್ರಾಮಗಳಾದ ಕಂದಗೂಳ, ವಟವಟಿ, ರೇವಾಯಿ , ಬೇಡಸೂರ್, ಮುಕ್ರಂಬಾ, ಗೊಣಗಿ, ದುತ್ತರ್ಗಾ, ಪಂಗರಗಾ, ಮಾವಿನಸುರ, ಅರಣಕಲ್, ಗ್ರಾಮದ ಸುಮಾರು 400ಕ್ಕೂ ಹೆಚ್ಚು ರೈತರು ರೈತ ಮಹಿಳೆಯರು ಭಾಗವಹಿಸಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!