ಕಲಬುರಗಿ : ಜಿಲ್ಲೆಯ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ಮುಖ್ಯ ಹೆದ್ದಾರಿ ರಸ್ತೆ ಸುಮಾರು 2ಗಂಟೆ ಕಾಲ ಬಂದ್ ಮಾಡಿ ಕೊರವಿ ಗ್ರಾಮದಲ್ಲಿ ಮೂಲ ಭೂತ ಸೌಕರ್ಯ ಹಾಗೂ ಶ್ರೀ ಕೊರವಂಜಿಶ್ವರಿ ದೇವಸ್ಥಾನ ಐತಿಹಾಸಿಕ ಸ್ಥಳ ಸರ್ಕಾರದ ದತ್ತಿ ಇಲಾಖೆಗೆ ಸೇರ್ಪಡೆ ಆಗಬೇಕು. ಶ್ರೀ ಕೊರವಂಜಿಶ್ವರಿ ದೇವಸ್ಥಾನಕ್ಕೆ ದರ್ಶನಕ್ಕೆ ಹೊರ ರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟ, ದುದುನಿ, ಹೀಗೆ ದೇವಿಯ ದರ್ಶನಕ್ಕೆ ಬರುತಿದ್ದಾರೆ ಹೀಗಾಗಿ ಬಂದ ಭಕ್ತರಿಗೆ ಬಸ್ಸಿನ ತೊಂದ್ರೆ ಆಗುತ್ತಿರುವದು ಹಾಗೂ ಬೆಳಿಗ್ಗೆ ಶಾಲೆ ಮಕ್ಕಳಿಗೆ ಕೂಡ ಸರಿಯಾದ ಟೈಮಿಗೆ ಶಾಲೆಗೆ ಹೋಗುವದಕ್ಕೆ ಆಗುತ್ತಿಲ್ಲ ಆದ ಕಾರಣ ವೇಗ ದೂತ ಬಸ್ ನಿಲ್ಲಿಸಬೇಕು, ರೈತರ ಬೆಳೆದ ತೊಗರಿಗೆ ಸರಿಯಾದ ಬೆಲೆ ಕೊಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಕಾಳಗಿ ತಹಸೀಲ್ದಾರ್ ಪೃಥ್ವಿ ರಾಜ್ ಪಾಟೀಲ್ ಹಾಗೂ ಚಿಂಚೋಳಿ ಬಸ್ ಡಿಪೋ ಅಧಿಕಾರಿ ಸುರೇಶ ತೆಗಲತಿಪ್ಪಿ, ಉಪ ತಹಸೀಲ್ದಾರ್ ರವಿಕುಮಾರ್ ಕೊಡ್ಲಿ, ಗಂಗಾದರ್ Ad ತಾಲ್ಲೂಕು ಪಂಚಾಯತ್ ಕಾಳಗಿ, ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಶರಣಬಸಪ್ಪ ಮಮಶೆಟ್ಟಿ, ಪರಮೇಶ್ವರ್ ಕಾಂತ್ ಹಾಗೂ ಸಮಸ್ತ ಕೊರವಿ ಗ್ರಾಮಸ್ಥರು ಹಾಗೂ ಕುಡಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ ಆರ್ ಪಾಟೀಲ್



















