ಸ್ವಾಭಿಮಾನ, ಸಮಾನತೆ ಹಾಗೂ ನ್ಯಾಯಕ್ಕಾಗಿ ನಡೆದ ಮಹಾನ್ ಹೋರಾಟ ಕೋರೆಗಾಂವ್ ಯುದ್ಧ – ಲಾಲಪ್ಪ ತಲಾರಿ
ಯಾದಗಿರಿ/ಗುರುಮಠಕಲ್: 1818ರ ಜನವರಿ 1ರಂದು ನಡೆದ ಭೀಮಾ ಕೋರೆಗಾಂವ್ ಯುದ್ಧವು ದಮನಿತ ವರ್ಗಗಳ ಸ್ವಾಭಿಮಾನ, ಸಮಾನತೆ ಹಾಗೂ ನ್ಯಾಯಕ್ಕಾಗಿ ನಡೆದ ಮಹಾನ್ ಹೋರಾಟ ಎಂದು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಲಾಲಪ್ಪ ತಲಾರಿ ಹೇಳಿದರು.
ದಲಿತ ಸಂಘರ್ಷ ಸಮಿತಿ ವತಿಯಿಂದ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ವೀರಯೋಧರ ಭೀಮ ಕೋರೆಗಾಂವ್ ವಿಜಯೋತ್ಸವ ನಿನ್ನೆ ಡಿಸೆಂಬರ್ 31 ಬುಧವಾರ ಆಚರಿಸಲಾಯಿತು.
ಇತಿಹಾಸಪೂರ್ವಕ ಆಚರಣೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಮಾನತೆ, ಸ್ವಾಭಿಮಾನ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಇದೇ ಮೊದಲ ಬಾರಿ ಆಚರಿಸಲಾಗಿದ್ದು, ಆಚರಣೆ ಪ್ರತಿವರ್ಷ ಮುಂದುವರೆಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗುರುನಾಥ್ ತಲಾರಿ, ಶ್ರೀಕಾಂತ್ ತಲಾರಿ, ಗುರುನಾಥ ಕೆ. ಮತ್ತು ನರೇಶ್ ಎ. ನಾಟೀಕಾರ್ ಹಾಗೂ ಜಗದೀಶ್ ಕಟೇಲಗೆರಿ, ಕೃಷ್ಣ ದಾಸರಿ, ಸಾಯಿ, ಭೀಮಶಪ್ಪ, ಹನುಮಂತ್ ಮುಕ್ಕಿಡಿ, ಭೀಮಶಪ್ಪ, ಚಿಂಟು ಭ್ಯಾಗರಿ, ಭೀಮಶಪ್ಪ ಭ್ಯಾಗರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















