
ತುಮಕೂರು : ಎಲ್ಲಾ ಮಕ್ಕಳು ವಿದ್ಯಾವಂತರಾಗಬೇಕು ಶಿಕ್ಷಣವು ಎಲ್ಲರನ್ನು ಸದೃಢ ಪ್ರಜೆಯನ್ನಾಗಿ ಮಾಡಿ ಜನರ ಬದುಕನ್ನು ಬದಲಿಸುವ ಮಾರ್ಗ ವಿದ್ಯೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನ ಸಹಾಯ
ಕೊರಟಗೆರೆ ತಾಲ್ಲೂಕು ಎಲೆ ರಾಂಪುರ ಕುಂಚಿಟಿಗರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.
ಹನುಮಂತನಾಥ ಸ್ವಾಮೀಜಿಗಳು ಕೇಂದ್ರ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರು, ದಾನಿಗಳೂ ಆದ ಶ್ರೀ ಜಿಎಲ್ ನರೇಂದ್ರಬಾಬು ರವರಿಂದ ಹುಬ್ಬಳ್ಳಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಶಿರಾ ತಾಲೂಕಿನ ಕಸಬಾ ಹೋಬಳಿಯ ಹರಿ ಅಜ್ಜಿಹಳ್ಳಿ ಗ್ರಾಮದ ವಾಸಿ ಯಂಜಾರಪ್ಪನವರ ಮಗಳಾದ ಯಮುನಾ ವೈ. ಎಂಬ ವಿದ್ಯಾರ್ಥಿನಿಗೆ ಮತ್ತು ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಗೋಣಿ ಹಳ್ಳಿ ಗ್ರಾಮದ ವಾಸಿ, ತುಮಕೂರು ಕುಂಚಿಟಿಗರ ಸಂಘದ ನಿರ್ದೇಶಕರಾದ ವೀರ ನಾಗಪ್ಪನವರ ಅಣ್ಣ ನಾಗರಾಜು ಎಂಬುವರ ಮಗ ಜಿಎನ್ ವಿಕಾಸ್ ಎಂಬುವರಿಗೆ ತಲಾ 50,000 ರೂ. ಗಳಂತೆ ದಾನ ಕೊಡಿಸಿರುತ್ತಾರೆ.
ಈ ಸಂದರ್ಭದಲ್ಲಿ ದಾನಿಗಳಾದ ಜಿಎಲ್ ನರೇಂದ್ರಬಾಬು, ನೇತಾಜಿ ಶ್ರೀಧರ್, ವಕೀಲರಾದ ಶಿವರಾಮ, ನಾಗಣ್ಣ, ಶ್ರೀನಾಥ್ ,ಎಸ್ ಕೆ ನಾಗರಾಜು, ಮೆಡಿಕಲ್ ಹರ್ಷ ,ತಿಮ್ಮೇಗೌಡ, ಮಂಜುನಾಥ್, ಈರಣ್ಣ, ಯಂಜಾರಪ್ಪ ಉಪಸ್ಥಿತರಿದ್ದರು.
ವರದಿ ಪ್ರಸನ್ನ ಕುಮಾರ್




















