ಗುರುಮಠಕಲ್: ತಾಲೂಕಿನ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ ಕಾರ್ಯಕರ್ತರ ಜವಾಬ್ದಾರಿಯನ್ನು ಶುಕ್ರವಾರ ಘೋಷಣೆ ಮಾಡಲಾಯಿತು.
ವಿಶ್ವ ಹಿಂದೂ ಪರಿಷದ್ ಕಲಬುರಗಿ ವಿಭಾಗ ಸಹ ಕಾರ್ಯದರ್ಶಿ ರಾಜೇಂದ್ರ ಬೆಳಗೆರೆ ಹಾಗೂ ಕಲಬುರಗಿ ಬಜರಂಗದಳದ ಪ್ರಾಂತ ಸಹ ಸಂಯೋಜಕ ಶಿವಕುಮಾರ್ ಸುಂಕಲೂರು ಅವರ ಉಪಸ್ಥಿತಿಯಲ್ಲಿ ವಿಶ್ವ ಹಿಂದೂ ಪರಿಷದ್ ಗುರುಮಠಕಲ್ ತಾಲೂಕ ಅಧ್ಯಕ್ಷ ಶ್ರೀಯುತ ಶ್ರೀನಿವಾಸ್ ಯಾದವ್ ಪದಾಧಿಕಾರಿಗಳನ್ನು ಘೋಷಣೆ ಮಾಡಿದರು.
ತಾಲೂಕ ವಿಶ್ವ ಹಿಂದೂ ಪರಿಷದ್ ಕಾರ್ಯದರ್ಶಿಯಾಗಿ ಡಾಕ್ಟರ್ ಹನುಮಂತ, ನಗರ ಅಧ್ಯಕ್ಷರಾಗಿ ಪಾಪಣ್ಣ ಆಳೆಗಾರ, ನಗರ ಸತ್ಸಂಗ ಪ್ರಮುಖ ಭರತ್ ಮಿಟ್ಟ ಅವರನ್ನು ಆಯ್ಕೆ ಮಾಡಲಾಗಿದೆ ಹಾಗೂ ತಾಲೂಕ ಭಜರಂಗದಳ ಸಹ ಸಂಯೋಜಕರಾಗಿ ಬಸವರಾಜ್ ಪಡಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಹಿಂದೂ ಯುವ ಘರ್ಜನೆ ಅಧ್ಯಕ್ಷ ವೆಂಕಟೇಶ್ ಮುದಿರಾಜ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
ವರದಿ: ಜೆ. ಎಸ್. ಭೂಮಾ




















