
ಕೊರಟಗೆರೆ: ಪಟ್ಟಣದ 4ನೇ ವಾರ್ಡ್, ಕಾವಲುಬೀಳು ಗ್ರಾಮದ ನಿವಾಸಿ ರಮೇಶ್ ಎಂಬುವರ ಸಾಕುನಾಯಿ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿತ್ತು, ಇದರಿಂದ ಸಾರ್ವಜನಿಕರಲ್ಲಿ ಭಯಭೀತರಾಗಿದ್ದರು.

ಸಮಾಜ ಸೇವಕರಾದ ನಯಾಜ್ ಬಾಯ್ ಮಾತನಾಡಿ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಚಿರತೆ ಸೆರೆ ಹಿಡಿಯುವದಕ್ಕೆ ಸೂಕ್ತ ಕ್ರಮವಹಿಸುವಂತೆ ತಿಳಿಸಿದರು. ಅರಣ್ಯ ಇಲಾಖೆ ಸೂಕ್ತ ಕ್ರಮವಹಿಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 2ವರ್ಷದ ಚಿರತೆ ಬೋನಿಗೆ ಬಿದ್ದು ಗರ್ಜಿಸುತ್ತಿದ್ದು, ಪಟ್ಟಣದ ಜನರು ಚಿರತೆ ನೋಡಲು ಮುಗಿಬಿದ್ದದ್ದು ಕಂಡು ಬಂದಿತು.
ಹಿರೇಬೆಟ್ಟ ಸುತ್ತಲೂ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಉಪಟಳ ಹೆಚ್ಚುಗುತ್ತಿರುವುದರ ಬಗ್ಗೆ ಗಮನಹರಿಸಿದ ಅರಣ್ಯ ಇಲಾಖೆ ತಕ್ಷಣ ಕ್ರಮವಹಿಸಿರುವುದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ವಿಷಯ ತಿಳಿದ ತಕ್ಷಣ ಡಿಆರ್ ಎಫ್ ಓ ದಿಲೀಪ್ ಸೇರಿದಂತೆ ಸಿಬ್ಬಂದಿಗಳ ಸ್ಥಳಕ್ಕೆ ಬಂದು ಚಿರತೆ ಬೇರೆಡೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ ಪಕ್ಷ ಎಸ್ ಸಿ ಘಟಕದ ಅಟಿಕ ಬಾಬು ನಾಗರಾಜು ಟಿ ಹೆಚ್ ಮಾತನಾಡಿ, ಎರಡು ದಿನಗಳ ಹಿಂದೆ ನಮ್ಮ ನಾಲ್ಕನೇ ವಾರ್ಡಿನ ಕಾವಲು ಬೀಳು ನಿವಾಸಿಗಳಿಗೆ ಚಿರತೆಯಾವಳಿ ಜಾಸ್ತಿಯಾಗಿದ್ದು ಆದಕಾರಣ ಅದನ್ನು ಬೋನಿನ ಮುಖಾಂತರ ಸೆರೆಹಿಡಿದು ಬೇರೆ ಕಡೆಗೆ ವರ್ಗಾಯಿಸಲು ಬೋನನ್ನು ಇಟ್ಟು ಪ್ರಯತ್ನ ಮಾಡಿದೆವು ಇಂದು ಆ ಚರಿತೆ ಸೆರೆ ಸಿಕ್ಕಿದೆ ನಮಗೆ ಸಹಕರಿಸಿದ ಅರಣ್ಯ ಅಧಿಕಾರಿಗಳಿಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೂ ತುಂಬು ಹೃದಯದ ಅಭಿನಂದನೆ ಕೋರಿದರು.
ವರದಿ : ಪ್ರಸನ್ನಕುಮಾರ್. ಎಸ್. ಕೊರಟಗೆರೆ




















