
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಆದಿ ಶಕ್ತಿ ಮಾರಮ್ಮ ದೇವಸ್ಥಾನಕ್ಕೆ ಕಾಂಗ್ರೆಸ್ ಯುವ ಮುಖಂಡ ಪ್ರದೀಪ್ ಕುಮಾರ್ ಅವರು ಇಂದು ಭೇಟಿ ನೀಡಿ ದೇವಸ್ಥಾನದ ದರ್ಶನ ಪಡೆದರು, ನಂತರ
ಗ್ರಾಮಸ್ಥರಿಂದ ಯುವ ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ಗೆ ಸನ್ಮಾನ ಮಾಡಲಾಯಿತು.
ನಂತರ ಕಾಂಗ್ರೆಸ್ ಯುವ ಮುಖಂಡ ಪ್ರದೀಪ್ ಕುಮಾರ್ ರವರು ಮಾತನಾಡಿ
“ಇಂದು ನಮ್ಮ ಸತ್ತೇಗಾಲ ಗ್ರಾಮದ ಆದಿ ಶಕ್ತಿ ಮಾರಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದೆ. ಈ ಐತಿಹಾಸಿಕ ದೇವಾಲಯವು ನಮ್ಮ ಸಂಸ್ಕೃತಿಯ ಬೇರುಗಳಾಗಿದ್ದು, ಎಲ್ಲರ ಸಹಕಾರದಿಂದ ಇದು ಹೊಸ ಜೀವವನ್ನು ಪಡೆದಿದೆ ಎಂದರು ನಂತರ ಮಾತನಾಡಿದ ಅವರು ಯುವಕರಾಗಿ ನಾವು ಧರ್ಮ ಮತ್ತು ಸಂಸ್ಕೃತಿಯನ್ನು ಕಾಪಾಡುವುದರ ಜೊತೆಗೆ, ಶಿಕ್ಷಣ, ಉದ್ಯೋಗ ಮತ್ತು ಸಮಾನತೆಗಾಗಿ ಹೋರಾಡಬೇಕು. ಕಾಂಗ್ರೆಸ್ ಪಕ್ಷ ಯುವ ಶಕ್ತಿಯನ್ನು ಗೌರವಿಸಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತದೆ,ಈ ದೇವಾಲಯವು ನಮ್ಮ ಐಕ್ಯದ ಸಂಕೇತವಾಗಲಿ. ಎಲ್ಲರೂ ಒಗ್ಗೂಡಿ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕಟರಮಣ, ಜಗದೀಶ್,ಶಿವಕುಮಾರ್, ಗ್ರಾಮಪಂಚಾಯತಿ ಅಧ್ಯಕ್ಷರಾದ ದೇವರಾಜು, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾದ ಸೃಜನ್.ಡಿ.ಕೆ, ಸುಂದರರಾಜು, ಶಿವಲಿಂಗು, ಶಿವಕುಮಾರ್ ಸ್ವಾಮಿ, ಪುಟ್ಟಣ್ಣ, ರಾಜೇಂದ್ರ ಪ್ರಸಾದ್, ಯುವ ಕಾಂಗ್ರೆಸ್ ವಿನಯ್, ಸಂಜಯ್ ಹಾಗೂ ಇತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ವರದಿ : ಉಸ್ಮಾನ್ ಖಾನ್




















