
ಬೀದರ್ ನಗರದ ಸಾಯಿಸ್ಕೂಲ್ ಗ್ರೌಂಡ್ ನಲ್ಲಿ
ಜನವರಿ 24 ರಿಂದ ಮೂರು ದಿನಗಳ ಕಾಲ ವೀರಲೋಕ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದ್ದು, ಇಂದು ಕೊನೆಯ ದಿನವಾಗಿದೆ.
ವೀರಲೋಕ ಪ್ರಕಾಶನ ಅವರ ನಾಲ್ಕನೇ ಪುಸ್ತಕ ಸಂತೆ ಇದಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಬೀದರ್ ನಲ್ಲಿ ಆಯೋಜಿಸಲಾಗಿದೆ ಈ ಪುಸ್ತಕ ಸಂತೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಲೇಖಕರು, ಸಾಹಿತಿಗಳು, ಪುಸ್ತಕ ಪ್ರಿಯರು, ರಾಜಕಾರಣಿಗಳು, ಚಲನಚಿತ್ರ ನಟರು, ನಿರ್ದೇಶಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಹ ಈ ಪುಸ್ತಕ ಸಂತೆಯಲ್ಲಿ ಆಗಮಿಸಿದ್ದಾರೆ.
ಈ ಸಂತೆಯಲ್ಲಿ 60 ಪುಸ್ತಕ ಮಳಿಗೆಗಳಿದ್ದು ಪ್ರಕಾಶಕರು , ಪುಸ್ತಕ ಮಾರಾಟಗಾರರು ಸಂತಸದೊಂದಿಗೆ ಉತ್ತಮ ರೀತಿಯಲ್ಲಿ ಪುಸ್ತಕ ಮಾರಾಟವಾಗುತ್ತಿದೆ, ಪ್ರತಿ ವರ್ಷ ಈ ರೀತಿಯ ಪುಸ್ತಕ ಸಂತೆ ಬೀದರ್ ನಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.
ಈ ಪುಸ್ತಕ ಸಂತೆ ಆಯೋಜನೆಯಲ್ಲಿ ವೀರಕಪುತ್ರ ಶ್ರೀನಿವಾಸ ಸೇರಿದಂತೆ ಬೀದರ್ ಜಿಲ್ಲೆಯ ಸ್ಥಳೀಯ ಮಠಾಧೀಶರು, ಬೀದರ್ ನ ಶಾಸಕರು, ಸಚಿವರು, ವಿವಿಧ ಕ್ಷೇತ್ರಗಳ ಮುಖಂಡರು, ಸಾಹಿತಿಗಳು, ಕನ್ನಡಪರ ಸಂಘ ಸಂಸ್ಥೆಗಳು ಒಗ್ಗಟ್ಟಿನಿಂದ ಭಾಗವಹಿಸಿದ್ದು ವಿಶೇಷ.
ಎಲ್ಲಾ ಓದುಗರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಒಮ್ಮೆ ಈ ಪುಸ್ತಕ ಸಂತೆಗೆ ಭೇಟಿ ನೀಡಿ ತಮ್ಮ ಜ್ಞಾನದಾಹ ನೀಗಿಸಿಕೊಳ್ಳುವ ಮೂಲಕ ಬೀದರ್ ನಲ್ಲಿ ನಡೆಯುತ್ತಿರುವ ಪುಸ್ತಕ ಸಂತೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು.
ವರದಿಗಾರರು ಗಜಾನಂದ ಪಾಟೀಲ




















