ಗುರುಮಠಕಲ್/ಚಪೆಟ್ಲಾ: ತಾಲೂಕಿನ ಚೆಪೆಟ್ಲಾ ಶ್ರೀ ಮಹೇಶ್ವರಿ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆ ಚೆಪೆಟ್ಲಾ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಗೌರಿಶಂಕರ್ ಪಾಟೀಲ್ ಸಂವಿಧಾನ ಜಾರಿಗೆ ಬಂದ ಈ ದಿನದಂದು ಸಂವಿಧಾನವನ್ನು ಇಡೀ ವಿಶ್ವದಲ್ಲೇ ಮಾದರಿಯಾಗಿ ರೂಪಿಸಲು ಶ್ರಮಿಸಿದ ಗಣ್ಯರನ್ನು ಸ್ಮರಿಸೋಣ ಅವರ ಕೊಡುಗೆಯನ್ನು ನೆನೆಯೋಣ. ಸರಕಾರದ ಸುಸೂತ್ರ ಆಡಳಿತಕ್ಕಾಗಿ ರಚಿಸಿದ ಸಂವಿಧಾನ ಗೌರವಿಸೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶ್ರೀ ರಘುಪತಿ ಪಾಟೀಲ್, ಮುಖ್ಯ ಗುರುಗಳಾದ ಶ್ರೀ ಸೂಗಯ್ಯ ಸ್ವಾಮಿ ಮಠಪತಿ, ಸಹ ಶಿಕ್ಷಕ ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದರು.
ವರದಿ: ಕರುನಾಡ ಕಂದ




















