ಬಳ್ಳಾರಿ/ ಕಂಪ್ಲಿ : ಕುಡಿಯುವ ನೀರು ಅಮೃತಕ್ಕೆ ಸಮಾನವಾಗಿದ್ದು, ಆಯುರ್ವೇದ ಮತ್ತು ಶಾಸ್ತ್ರಗಳಲ್ಲಿ ಅದರ ಮಹತ್ವವನ್ನು ಒತ್ತಿಹೇಳಲಾಗಿದೆ. ಇಂತಹ ಅಮೂಲ್ಯವಾದ ನೀರಿನ ಸೇವೆಯನ್ನು ಕಂಪ್ಲಿ ಕೈಗಾರಿಕಾ ಸಂಘದ ಪದಾಧಿಕಾರಿಗಳು ಉಚಿತವಾಗಿ ಶುದ್ಧ ಕುಡಿಯುವ ನೀರಿನ ಸೇವೆಯನ್ನು ಮಾಡಿ ಉತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಜನರ ಪ್ರಶಂಸೆಗೆ ಭಾಜನರಾಗಿದ್ದಾರೆ.
ಕಂಪ್ಲಿ ಉತ್ಸವದ ಅಂಗವಾಗಿ ಕಂಪ್ಲಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಿದ್ದ ಗಂಡುಗಲಿ ಕುಮಾರರಾಮನ ವೇದಿಕೆ ಎದುರುಗಡೆ ಉಚಿತ ಶುದ್ಧ ನೀರಿನ ಸೇವೆಯನ್ನು ಎರಡು ಸ್ಟಾಲ್ ಗಳಲ್ಲಿ ಸಾರ್ವಜನಿಕರಿಗೆ ಒದಗಿಸಿದ್ದರು.
ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ಒಗ್ಗಟ್ಟು ಹಾಗೂ ನಿರಂತರ ಸಹಕಾರದಿಂದಾಗಿ ಈ ಜನಪರ ಕಾರ್ಯ ಯಶಸ್ವಿಯಾಗಿದೆ. ಸಾರ್ವಜನಿಕರಿಗೆ ಎರಡು ಸ್ಟಾಲ್ಗಳ ಮೂಲಕ ಉಚಿತ ಶುದ್ಧ ಕುಡಿಯುವ ನೀರನ್ನು ಒದಗಿಸಿರುವುದು ಒಂದು ಸಾಮಾಜಿಕ ಸೇವೆ.
ಇದೇ ರೀತಿಯ ಸಹಕಾರ ಮುಂದುವರಿಸಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಜನಪರ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಸಂಘದ ಪದಾಧಿಕಾರಿಗಳು ಸಂತೋಷ ದಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಇಮ್ತಿಯಜ್ ಸಾಬ್, ಜೆಸಿ ನಾಗರಾಜ್, ರೆಹಮತ್ ಉಲ್ಲಾ, ಟಿ ಹೆಚ್ ಎಂ ರಾಜಕುಮಾರ್, ಗೌರವ ಅಧ್ಯಕ್ಷರಾದ ಲಕ್ಷ್ಮಣ, ಮೌಲಾ, ದಾದಾಪೀರ್ ವಾಸು ಸೀನಾ ರಮೇಶ್ ತಬರೇಸ್ ಇನ್ನಿತರ ಉಪಸ್ಥಿತಿಯಲ್ಲಿ ಸೇವಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















