
ಬಳ್ಳಾರಿ/ ಕಂಪ್ಲಿ : ಸಿಂದಗಿ ನಗರದಲ್ಲಿ ನೇರ ನುಡಿ ಸುದ್ದಿವಾಹಿನಿಯ ಮೊದಲನೇ ವರ್ಷದ ವಾರ್ಷಿಕೋತ್ಸವ ಜರುಗಿತು.
ಪರಮಪೂಜ್ಯ ಗುರುಕುಲ ಭಾಸ್ಕರ ಶ್ರೀ ಡಾ॥ ಪ್ರಭುಸಾರಂಗದೇವ ಶಿವಾಚಾರ್ಯರು,
ಸಾರಂಗಮಠ ಗಚ್ಚಿನಮಠ, ಸಿಂದಗಿ, ಪರಮಪೂಜ್ಯ ಶ್ರೀ ಮಹಾಂತ ಮಹಾಸ್ವಾಮಿಗಳು
ವಿರಕ್ತಮಠ, ದಿವ್ಯ ಸಾನಿಧ್ಯವಹಿಸಿದ್ದರು.
ಸಿಂದಗಿ ಕ್ಷೇತ್ರದ ಶಾಸಕರಾದ ಅಶೋಕ್ ಎಂ. ಮನಗೂಳಿರವರು ಕಾರ್ಯಕ್ರಮ ಉದ್ಘಾಟಿಸಿದರು.
ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ರಾಜ್ಯ ಕಾರ್ಯಧ್ಯಕ್ಷ
ಟಿ ಹೆಚ್ ಎಂ ರಾಜಕುಮಾರ್ ರವರು ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಸಮರ್ಪಕವಾಗಿ ಬಳಸಿಕೊಂಡು ಕರ್ನಾಟಕ ರಾಜ್ಯ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡಲು ಶ್ರಮಿಸುತ್ತಿದ್ದಾರೆ, ಅವರ ಸಾಮಾಜಿಕ ಸೇವೆಯನ್ನು ಅಭಿನಂದಿಸುತ್ತ ನೇರ ನುಡಿ ಸುದ್ದಿ ವಾಹಿನಿಯ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರಿಗೆ ಸಾಮಾಜಿಕ ಕ್ಷೇತ್ರದ ಅತ್ಯುತ್ತಮ ಸೇವೆ ಸಲ್ಲಿಸಿದಕ್ಕಾಗಿ ‘ಸೇವಾ ರತ್ನ ಪ್ರಶಸ್ತಿ’ ಯನ್ನು ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಚನ್ನಯ್ಯ ವಸ್ತ್ರದ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ನೇರನುಡಿ ಸುದ್ದಿ ವಾಹಿನಿಯ
ರಮೇಶ್ ಬಾ, ಇರ್ಫಾನ ಶೇಕ್, ಇಸ್ಮಾಯಿಲ್ ಶೇಖ್, ಹಾಗೂ ಸಂಘಟನೆಯ ಕಲಬುರ್ಗಿ ಹಾಗೂ ಜೇವರ್ಗಿ ತಾಲೂಕಿನ ಸಮಿತಿಯವರು ಕೂಡ ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















