ಈ ಹಬ್ಬವು ಹಳೆಯ ವೈಶಮ್ಯವನು ಮರೆತು
ಹೊಸ ಸಂಬಂಧ ಬೆಸೆಯುವ ಸುಗ್ಗಿಯ ಹಬ್ಬ.
ಉತ್ತರ ಕರ್ನಾಟಕದಲಿ ಇದನು ಮನ್ಮಥನ ರೂಪವನು ಮಾಡಿ ಸುಡುವ ಪದ್ಧತಿ ಅನ್ನುವರು ಕಾಮನ ಹಬ್ಬ,
ಹುಣ್ಣಿಮೆಯ ಹಿಂದಿನ ರಾತ್ರಿ ಒಣಗಿದ ಕಟ್ಟಿಗೆಗಳನ್ನು
ಒಟ್ಟಿಗೆ ಹಾಕಿ ಬೆಂತಿ ಹೊತ್ತಿಸಿ ಸಂಭ್ರಮಿಸುವ ಹಬ್ಬ,
ಮರುದಿನ ಎಲ್ಲರೂ ಪರಸ್ಪರ ಬಣ್ಣ ಗುಲಾಲುಗಳನ್ನು
ಎರಚುತ್ತಾ ಏಕತೆಯನು ಹಂಚುವ ಹಬ್ಬ
ಶಿವನು ಕಾಮದೇವನನ್ನು ತನ್ನ ಮೂರನೇ
ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ ನೆನಪಿನ ಹಬ್ಬ,
ಕೆಟ್ಟದ್ದನ್ನು ಬೆಂಕಿಯಲ್ಲಿ ಸುಟ್ಟು ಭಗವಂತನ
ಭಕ್ತಿಗೆ ಜಯ ಸಿಗುವ ಸಾರುವ ಹಬ್ಬ,
ಜಾತಿ ಮತ, ಬಡವ ಬಲ್ಲಿದ ಬೇಧ ವಿಲ್ಲದೆ ಎಲ್ಲರೂ
ಒಂದಾಗಿ ಬಣ್ಣಗಳೊಂದಿಗೆ ಸಂಭ್ರಮಿಸುವ ಹಬ್ಬ.
ಕೃಷ್ಣ ಮತ್ತು ರಾಧೆಯ ದಿವ್ಯ ಪ್ರೇಮ ಪ್ರಸಂಗದ
ಸಂಕೇತವಾಗಿಯೂ ಬಣ್ಣದ ಓಕಳಿಯನ್ನು ಆಡಿ ಕುಣಿವ ಹಬ್ಬ.
ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು, ಕಾಮನ ಹಬ್ಬ
ಬಂದರೆ ನಿದ್ದೆ ಮಾಡದ ಕುಣಿದು ಕುಪ್ಪಳಿಸಿ
ಜಗತ್ತನ್ನೇ ಮರೆಸುವ ದೊಡ್ಡ ಈ ಹೋಳಿ ಹಬ್ಬ.
- ರವಿ ಎಸ್ ಹಿರೇಮನಿ, ಕುಕನೂರು ಕೊಪ್ಪಳ ಜಿಲ್ಲೆ.




















