ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೋಳಿ ಹಬ್ಬವು ಪ್ರೀತಿ, ಏಕತೆ ಮತ್ತು ಸದ್ಭಾವನೆ ತರಲಿ.

ಹೋಳಿ ಹಬ್ಬವು ಕೇವಲ ಧಾರ್ಮಿಕ ಹಬ್ಬವಲ್ಲ, ಸಾಂಸ್ಕೃತಿಕ ಹಬ್ಬವೂ ಹೌದು; ಈ ಹಬ್ಬವು ಸಂತೋಷ, ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಹಂಚಿಕೊಳ್ಳಲು ಒಂದು ಅನನ್ಯ ಅವಕಾಶವಾಗಿದೆ. ನಮ್ಮ ಸಂಸ್ಕೃತಿಯ ದೊಡ್ಡ ಗುಣವೆಂದರೆ ಇಲ್ಲಿ ಆಚರಿಸಲಾಗುವ ಎಲ್ಲಾ ಹಬ್ಬಗಳು ಸಮಾಜದಲ್ಲಿ ಮಾನವೀಯ ಗುಣಗಳನ್ನು ಸ್ಥಾಪಿಸುವ ಮುಖಾಂತರ ಜನರಲ್ಲಿ ಪ್ರೀತಿ, ಏಕತೆ ಮತ್ತು ಸದ್ಭಾವನೆಯನ್ನು ಹೆಚ್ಚಿಸುತ್ತವೆ. ಇಲ್ಲಿ ಆಚರಿಸಲಾಗುವ ಎಲ್ಲಾ ಹಬ್ಬಗಳ ಹಿಂದಿನ ಚೈತನ್ಯವೆಂದರೆ ಮಾನವ ಘನತೆಗೆ ಹಾಗೂ ಭಾವೈಕ್ಯತೆ ಹೆಚ್ಚಿಸುವುದು. ಪ್ರಕೃತಿಯು ಬಣ್ಣಗಳಿಂದ ತುಂಬಿರುವಂತೆ, ಜೀವನವು ಸಹ ಬಣ್ಣಗಳಿಂದ ತುಂಬಿರಬೇಕು ಎಂಬ ವಿಶೇಷ ಸಂದೇಶವನ್ನು ಹೋಳಿ ಹೊಂದಿದೆ. ಜೀವನದ ಬಣ್ಣಗಳು ಸೃಷ್ಟಿಕರ್ತನ ಪ್ರಕೃತಿಯಲ್ಲಿ
ಆಳವಾದ ಭಕ್ತಿಯನ್ನು ಹೊಂದಿರುತ್ತದೆ. ಯಾವುದೇ ಹಬ್ಬದೊಂದಿಗೆ ಸಂಬಂಧಿಸಿದ ಶುದ್ಧತೆಯ ವಿಷಯದಲ್ಲಿ ಹೋಳಿ ಒಂದು ಪರಿಪೂರ್ಣ ಹಬ್ಬವಾಗಿದೆ. ಇದು ದೇಹವನ್ನು ಮಾತ್ರವಲ್ಲದೆ ಆತ್ಮವನ್ನೂ ಸಂಯೋಜಿಸುವ ವಿಶಿಷ್ಟ ಐಕ್ಯತೆಯ ಸಾರುವ ಹಬ್ಬವಾಗಿದೆ.
ಹೋಳಿ ಸಂತೋಷದ ಹಬ್ಬ. ನಮ್ಮಲ್ಲಿರುವ ಸಂತೋಷವು ನಮ್ಮ ಆತ್ಮದ ಬಣ್ಣವೂ ಆಗಿದೆ.
ಬಣ್ಣಗಳನ್ನು ಹಚ್ಚುವಾಗ ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಇದು ಹಳೆಯ ವೈಮನಸ್ಯಗಳನ್ನು ಮರೆತು, ಸೌಹಾರ್ದತೆಯನ್ನು ಹೆಚ್ಚಿಸುತ್ತದೆ. ಸರ್ವರಲ್ಲಿಯೂ ಅನ್ಯೋನ್ಯತೆಯ ಭಾವನೆ ಮೂಡಿಸುತ್ತದೆ.

ಬಣ್ಣಗಳು ಕೇವಲ ಮುಖಕ್ಕೆ ಮೆತ್ತಿಕೊಳ್ಳುವ ದ್ರವ್ಯಗಳಲ್ಲ,ಅವು ಮನಸ್ಸಿನ ನೋವನ್ನು ಮರೆಸಿ, ಹೊಸ ಭರವಸೆಯನ್ನು ನೀಡುವ ಆತ್ಮ ಇಚ್ಚಾ ಶಕ್ತಿಯಾಗಿರುತ್ತದೆ.

ಮಾತುಗಳಿಲ್ಲದೆ ಮನಸ್ಸನ್ನು ಮುಟ್ಟುವ ಶಕ್ತಿ ಬಣ್ಣಕ್ಕಿದೆ, ಬದುಕು ಕೂಡ ಅಷ್ಟೇ ನಾವು ಮಾಡುವ ಕೆಲಸಗಳು ನಮ್ಮ ವ್ಯಕ್ತಿತ್ವದ ಬಣ್ಣವನ್ನು ಸಾರುತ್ತವೆ ಎನ್ನುವುದು ಮರೆಯುವಂತಿಲ್ಲ.
ಒಳಗಿನ ಅಹಂಕಾರವನ್ನು “ಹೋಲಿಕಾ ದಹನ’ ದಂತೆ ಸುಟ್ಟು ಹಾಕಿದಾಗ ಮಾತ್ರ ಜೀವನದ ನಿಜವಾದ ಬಣ್ಣಗಳು ನಮಗೆ ಕಾಣಲು ಸಾಧ್ಯ.
ಕಾಲವೆಂಬ ಕಲಾವಿದ ನಮ್ಮ ಬದುಕಿಗೆ ಬಣ್ಣ ಹಚ್ಚುತ್ತಿದ್ದಾನೆ, ಪ್ರತಿ ಕಷ್ಟವೂ ಒಂದು ನೆರಳು, ಪ್ರತಿ ಸುಖವೂ ಒಂದು ಬೆಳಕು.
ಬೇರೆಯವರ ಬಾಳಿಗೆ ಬಣ್ಣ ತುಂಬುವ ಆಸೆ ನಮಗಿದ್ದರೆ, ನಮ್ಮ ಬದುಕು ತಾನಾಗಿಯೇ ವರ್ಣಮಯವಾಗುತ್ತದೆ.
ಮುಖಕ್ಕೆ ಹಚ್ಚುವ ಬಣ್ಣ ಸಂಭ್ರಮ ನೀಡಿದರೆ, ಮನಸ್ಸಿಗೆ ಹಚ್ಚುವ ಪ್ರೀತಿಯ ಬಣ್ಣ ಬದುಕನ್ನೇ ಸುಂದರವಾಗಿಸುತ್ತದೆ, ಪ್ರತಿಯೊಬ್ಬರ ಜೀವನ ಸದಾ ರಂಗಾಗಿರಲಿ. ಸಂತೋಷದಿಂದ ಕೂಡಿರಲಿ.
ಬಣ್ಣಗಳ ಅಬ್ಬರಕ್ಕಿಂತ ಭಾವನೆಗಳ ಹದವರಿತ ರಂಗು ನಿಮ್ಮದಾಗಲಿ, ಈ ಹೋಳಿ ನಿಮ್ಮ ಬಾಳಲ್ಲಿ ಹೊಸ ಭರವಸೆ ಹಾಗೂ ಆಶಾಕಿರಣ ತರಲಿ.
ಮನದ ಮತ್ಸರ ಸುಟ್ಟು ಪ್ರೀತಿಯ ರಂಗು ಚೆಲ್ಲೋಣ, ದ್ವೇಷವ ಮರೆತು ಮನುಷ್ಯತ್ವದ ಬಣ್ಣ ಹಚ್ಚೋಣ.
“ಹಳೆಯ ಕಹಿ ನೆನಪುಗಳ ‘ಹೋಮ’ ಮಾಡಿ, ಹೊಸ ಭರವಸೆಯ ಬಣ್ಣಗಳ
‘ಹೋಲಿ’ ಆಡೋಣ. ನಿಮ್ಮ ಬದುಕು ಸದಾ ಕಾಮನಬಿಲ್ಲಿನಂತೆ ವರ್ಣಮಯವಾಗಿರಲಿ.”
ಈ ಹೋಲಿ ಸರ್ವರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿ.
ಭವ್ಯ ಭಾರತದ ಸರ್ವಜನಾಂಗದ ಪ್ರೀತಿಯ ಅಂತಃಕರಣದ ಚಿಲುಮೆ ಸರ್ವರ ಹೃದಯ ಮಂದಿರಕ್ಕೆ ತಟ್ಟಲ್ಲಿ.
ಬಣ್ಣಗಳ ಹಬ್ಬ ಹೋಳಿ ಭಾರತದ ಬಹುತ್ವ ಪರಂಪರೆಯ ಸಂಕೇತ.
ವಿವಿಧ ಜಾತಿ, ಧರ್ಮ, ಸಂಸ್ಕೃತಿಗಳ ಜನರು ತಮ್ಮ ನಡುವಿನ ವೈರುಧ್ಯಗಳನ್ನು ಮೀರಿ ಹೋಳಿಯ ಬಣ್ಣಗಳಂತೆ ಮಿಳಿತಗೊಳ್ಳಲಿ.
ದ್ವೇಷ ಅಳಿದು ಸ್ನೇಹ, ಸೌಹಾರ್ದತೆಯ ಬಣ್ಣಗಳು ಎಲ್ಲರ ಬದುಕನ್ನಾವರಿಸಲಿ ಎಂದು ಆಶಿಸುತ್ತೇವೆ .

ಚರ್ಮದ ಬಗ್ಗೆ ಎಚ್ಚರವಿರಲಿ/
ಪರಿಸರ ಸ್ನೇಹಿ ಬಣ್ಣಗಳನ್ನು ಆರಿಸಿ :

ಆಟವಾಡಲು ಹೊರಡುವ ಮೊದಲು, ನಿಮ್ಮ ಚರ್ಮವನ್ನು ಹೇರಳವಾದ ಎಣ್ಣೆಯಿಂದ ಮಸಾಜ್ ಮಾಡಿ. ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಎಳ್ಳೆಣ್ಣೆ ರಕ್ಷಣಾತ್ಮಕ ತಡೆಗೋಡೆಯನ್ನು ಸೃಷ್ಟಿಸುತ್ತದೆ. ಇದು ಬಣ್ಣಗಳು ನಿಮ್ಮ ಚರ್ಮಕ್ಕೆ ಹೆಚ್ಚು ಅಂಟಿಕೊಳ್ಳದಂತೆ ತಡೆಯುತ್ತದೆ, ಇದು ಹೋಳಿಯ ನಂತರದ ಶುಚಿಗೊಳಿಸುವಿಕೆಯನ್ನು ಸುಲಭಗೊಳಿಸುತ್ತದೆ. ಜೊತೆಗೆ
ಸಂಶ್ಲೇಷಿತ ಬಣ್ಣಗಳು ನಿಮ್ಮ ಚರ್ಮ ಮತ್ತು ಪರಿಸರಕ್ಕೆ ಹಾನಿಕಾರಕ ರಾಸಾಯನಿಕಗಳಿಂದ ತುಂಬಿರಬಹುದು. ಹೂವುಗಳು, ಗಿಡಮೂಲಿಕೆಗಳು ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳಿಂದ ಮಾಡಿದ ನೈಸರ್ಗಿಕ, ಪರಿಸರ ಸ್ನೇಹಿ ಬಣ್ಣಗಳಿಗೆ ಬದಲಿಸಿ. ಈ ಬಣ್ಣಗಳು ಚರ್ಮದ ಕಿರಿಕಿರಿಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಆಶಯ ಮಾತು –
ಹೋಳಿ ಹಬ್ಬ ಹಿಂದಿನ ಉದ್ದೇಶ ಮಾನವ ಘನತೆಗೆ ಸಮೃದ್ಧಿಯನ್ನು ಹೆಚ್ಚಿಸುವುದು. ಪ್ರಕೃತಿಯು ಬಣ್ಣಗಳಿಂದ ತುಂಬಿರುವಂತೆ, ಜೀವನವು ಬಣ್ಣಗಳಿಂದ ತುಂಬಿರಬೇಕು ಎಂಬ ವಿಶೇಷ ಸಂದೇಶವನ್ನು ಹೋಳಿ ಹೊಂದಿದೆ.
ಜೊತೆಗೆ ಹೋಳಿ ಹಬ್ಬವು ಕೇವಲ ಬಣ್ಣಗಳ ಆಟವಲ್ಲ, ಇದು ಚಳಿಗಾಲದಿಂದ ವಸಂತಕಾಲಕ್ಕೆ ಬದಲಾಗುವಾಗ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಡಲು, ಪರಿಸರದ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಹೆಚ್ಚಿಸಲು ವಿಜ್ಞಾನ ಮತ್ತು ಸಂಪ್ರದಾಯವನ್ನು ಬೆಸೆದ ಹಬ್ಬವಾಗಿದೆ. ಹೋಲಿಕಾ ದಹನದ ಶಾಖವು ಸುತ್ತಮುತ್ತಲಿನ ಸೂಕ್ಷ್ಮಾಣುಗಳನ್ನು ಕೊಲ್ಲುತ್ತದೆ ಮತ್ತು ನೈಸರ್ಗಿಕ ಬಣ್ಣಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಬಣ್ಣದಾಟವು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡಿ, ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಇದು ಮನಸ್ಸಿನ ಆತಂಕವನ್ನು ದೂರಮಾಡಿ, ನವಚೈತನ್ಯವನ್ನು ತುಂಬುತ್ತದೆ.

ನಾಡಬಾಂಧವರಿಗೆ ಹೋಳಿ ಹುಣ್ಣಿಮೆಯ ಶುಭಾಶಯಗಳು.

  • ಸಂಗಮೇಶ ಎನ್. ಜವಾದಿ
    ಬರಹಗಾರರು, ಬೀದರ್ ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!