ಸಿರುಗುಪ್ಪ – ಬಡವರ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಅನುಕೂಲವಾಗಿದೆ ಆರ್ಥಿಕ ಉಳಿತಾಯವಾಗಲಿದೆ ಶ್ರಮದಿಂದ ಬದುಕು ಕಟ್ಟಿಕೊಂಡವರು ಸಾಮಾಜಿಕವಾಗಿ ವಿವಿಧ ಉಚಿತ ಆರೋಗ್ಯ ಕಾರ್ಯಕ್ರಮಗಳು ಆಯೋಜಿಸುವುದು ಅವರ ಸಾಮಾಜಿಕ ಕಳಕಳಿಯನ್ನು ಸೂಚಿಸುತ್ತದೆ ಎಂದು ಹರಗಿನ ಡೋಣಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರುಗುಪ್ಪ ನಗರದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ ಸಿರುಗುಪ್ಪ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರು ಚೊಕ್ಕ ಬಸವನ ಗೌಡ ಅವರು ಮಾತನಾಡಿದರು. ಸಿರುಗುಪ್ಪ ನಗರದ ಸರ್ಕಾರಿ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಮಾರ್ಗದರ್ಶನ ನಡೆಯಿತು 200 ರೋಗಿಗಳು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಔಷಧಿ ಪಡೆದರು ಗುರು ಬಸವ ಮಠದ ಬಸವ ಭೂಷಣ ಸ್ವಾಮೀಜಿ ವೈದೇಹಿ ಆಸ್ಪತ್ರೆಯ ಮಲ್ಲಿಕಾರ್ಜುನ ಸಿರುಗುಪ್ಪ ತಾಲೂಕು ಹಚ್ಚೋಳ್ಳಿ ಪಿ ಎಲ್ ಡಿ ಬ್ಯಾಂಕ್ ವ್ಯವಸ್ಥಾಪಕ ತಿಪ್ಪಣ್ಣ ಬನಸೋಡಿ ಉಪಾಧ್ಯಕ್ಷರು ಡಿಆರ್ ಚಂದ್ರರೆಡ್ಡಿ ನಿರ್ದೇಶಕರಾದ ಪಿ ತಿಮ್ಮಪ್ಪ ಶಿವರಾಮ ಗೌಡ ಬಿ ಎಂ ಜಡೆ ಸ್ವಾಮಿ ವೈದ್ಯರಾದ ನವೀನ್ ಕುಮಾರ್ ನಾಗ ಪ್ರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ರಾಷ್ಟ್ರೀಯ ಸಾಕ್ಷರತಾ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸದಸ್ಯರು ಅಬ್ದುಲ್ ನಬಿ ಡಿ ಫಾರ್ಮಸಿ ಕಾಲೇಜಿನ ಉಪನ್ಯಾಸಕಿ ಅರುಣಾ ಆರೋಗ್ಯ ಆಪ್ತ ಸಮಾಲೋಚಕರು ಮಲ್ಲೇಶಪ್ಪ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ನಾರೇಶ್ ಪ್ರಿಯಾಂಕ ವಿಜಯಕುಮಾರ್ ಭವಾನಿ ತಜ್ಞರು ವೈದ್ಯರ ತಂಡ ಭಾಗವಹಿಸಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















