
ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರಿನ ಶ್ರೀ ವೆಂಕಯ್ಯ ಮೆಮೋರಿಯಲ್ ಶಾಲೆಯಲ್ಲಿ ನರ್ಸರಿ ತರಗತಿಯಿಂದ 2 ನೇತರಗತಿ ವಿದ್ಯಾರ್ಥಿಗಳ ವರ್ಷವಿಡೀ ಕಲಿಕೆಯ ಫಲಕಗಳ ಜ್ಞಾನದ ಪ್ರದರ್ಶನ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜ್ಯೋತಿ ರವರು ಮಕ್ಕಳಲ್ಲಿ ಹಲವು ಪ್ರತಿಭೆಗಳು ಅಡಗಿಕೊಂಡಿದ್ದು,ಅವುಗಳನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು, ಪ್ರತಿಯೊಂದು ಮಗುವಿನಲ್ಲೂ ಇದೇ ರೀತಿ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತೇ ಇದೆಯಲ್ಲ. ಅದನ್ನು ಗುರುತಿಸಿ ಬೆಳೆಸುವ ಕೆಲಸವನ್ನು ಪೋಷಕರು ಅಥವಾ ಶಿಕ್ಷಕರು ಮಾಡಬೇಕಾಗುತ್ತದೆ ಎಂದರು.
ನಂತರ ಅಧ್ಯಕ್ಷತೆ ವಹಿಸಿದ ಶಾಲಾ ಸಂಸ್ಥಾಪಕ ಎ. ತಾಂಡವ ಕೃಷ್ಣ ಮಾತನಾಡಿ ಮಕ್ಕಳ ಭೌತಿಕ ಮಾನಸಿಕ ಜ್ಞಾನಾತ್ಮಕ ಮೌಲ್ಯಯುತ ಶಿಕ್ಷಣವನ್ನು ನಾವು ನೀಡುವುದರ ಮೂಲಕ ಮುಂದಿನ ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸಲು ಸಹಕರಿಸುತ್ತೇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕಾರ್ಯಕ್ರಮ ಆಕರ್ಷಣೆಯಾಗಿದ್ದರು.
ಕಾರ್ಯದರ್ಶಿಗಳಾದ ಎ ಸುನಿತ, ಮುಖ್ಯಗುರುಗಳಾದ ಕೆ. ಎಚ್. ರಾಮು ಶಿಕ್ಷಕರಾದ ಬರ್ಮಾ, ವಿದ್ಯಾರ್ಥಿಗಳ ಪಾಲಕರಾದ ರಾಜಸಾಬ್. ಬಿ ಜಡಿ ಮೂರ್ತಿ, ವೀರೇಶ್, ಓರ್ವಾಯಿ. ಪಲ್ಲವಿ, ಶಾರದಾ, ನೀಲಮ್ಮ, ಲಕ್ಷ್ಮೀನಾರಾಯಣ, ವಿಜಯಲಕ್ಷ್ಮಿ, ಶಾಂಭವಿ, ಗೀತಾ, ಹಾಗೂ ರಾಯಮಣಿ ಎಲ್ಲಾ ಶಿಕ್ಷಕಿಯರು ಸೇರಿದಂತೆ ಪಾಲಕ- ಪೋಷಕರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















