ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಬೂತ್ ಮಟ್ಟದ ಏಜೆಂಟರ ಬಿ ಎಲ್ ಎ ಕಾರ್ಯಗಾರ ಕಾರ್ಯಕ್ರಮ ಯಶಸ್ವಿಯಾಯಿತು.
ತಾಲೂಕಿನ ಸಾದರ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ವತಿಯಿಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಐಆರ್ ಕುರಿತಾದ ಬೂತ್ ಮಟ್ಟದ ಏಜೆಂಟರ್ ಗಳನ್ನು ಆಯ್ಕೆ ಮಾಡಿ ತಳಮಟ್ಟದಿಂದ ಜೆ ಡಿ ಎಸ್ ಬಲಪಡಿಸಲು ಮತ್ತು ಮತದಾರರಿಗೆ ಸಹಾಯವಾಗಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಕೊರಟಗೆರೆ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ಮನೆ ಮಾಡಿರುವ ಮನೆ ಮಗ ಜೆಡಿಎಸ್ ಮಾಜಿ ಶಾಸಕ ಪಿಆರ್ ಸುಧಾಕರ್ ಲಾಲ್ ರವರುಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಮಾತನಾಡಿದ ಅವರು ಎಲ್ಲರನ್ನೂ ಒಗ್ಗೂಡಿಸಿ ಪಕ್ಷ ಸಂಘಟಿಸಬೇಕು ಬೂತ್ ಮಟ್ಟದ ಸಮಿತಿ ರಚಿಸಿ ಅರ್ಹ ಮತದಾರರನ್ನು ಗುರುತಿಸಿ ನೇರವಾಗಿ ಅರ್ಜಿಗಳನ್ನು ಪಡೆದು ಪರಿಷ್ಕರಣೆ ಮಾಡಿ ಅಧಿಕಾರಿಗಳಿಗೆ ನೀಡಬೇಕು.
ಬಿ ಎಲ್ ಎ ಗಳು ನಿರಂತರ ಪರಿಶ್ರಮದಿಂದ ಮತದಾರರ ಪರಿಷ್ಕರಣ ಮಾಡಿಸಿ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇಂದಿನಿಂದಲೇ ಕ್ರಿಯಾಶೀಲರಾಗಿ ಎಂದು ಸಲಹೆ ನೀಡಿದರು.
ಇನ್ನು ಜೆಡಿಎಸ್ ತಾಲೂಕು ಅಧ್ಯಕ್ಷರಾದ ಕಾಮರಾಜಣ್ಣನವರು ಮಾತನಾಡಿ ಪ್ರತಿಯೊಬ್ಬ ಬಿಎಲ್ಎ ಏಜೆಂಟ್ ಗಳ ಮತದಾರರ ಪರಿಷ್ಕರಣೆ ಮತದಾರರ ಪಟ್ಟಿ ತಿದ್ದುಪಡಿ ಮತ್ತು ಹೊಸದಾಗಿ ಸೇರಿಸುವುದರ ಬಗ್ಗೆ ಗಮನ ಹರಿಸಬೇಕು ಒಂದೊಂದು ಮತ ಬಹು ಮುಖ್ಯವಾದದ್ದು ಎಂದರು.
ಇದೇ ಸಂದರ್ಭದಲ್ಲಿ ಡ್ರೈವರ್ ಸಿದ್ದಣ್ಣ.ಎಲ್ ವಿ ಪ್ರಕಾಶ್,ರೇಣುಕಾ ಪ್ರಸಾದ್, ಓಬಳಪ್ಪ, ಪ್ರಹ್ಲಾದ್ ರಾಜು ಗೊಲ್ಲಹಳ್ಳಿ ಹಾಗೂವಿಧಾನಸಭಾ ಕ್ಷೇತ್ರದ ಆರು ಹೋಬಳಿಯ ಜೆಡಿಎಸ್ ನ ಸದಸ್ಯರುಗಳು ಭಾಗಿಯಾಗಿದ್ದರು.
ವರದಿ ಪ್ರಸನ್ನ ಕುಮಾರ್ ಎಸ್, ಕೊರಟಗೆರೆ




















